ಸದ್ಯದ ಆಡಳಿತದಡಿಯಲ್ಲಿ ಮಾಧ್ಯಮದವರು ಭಯದಿಂದ ಜೀವಿಸುತ್ತಿದ್ದಾರೆ ಎಂದು ಎನ್.ಡಿ.ಟಿ.ವಿಯ ರವೀಶ್ ಕುಮಾರ್ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು. ಕರ್ನಾಟಕದಲ್ಲಿ 15 ವರ್ಷಗಳಿಂದಲೂ ನೇರ ನಿಖರ ಸುದ್ದಿಗಳನ್ನು ಪ್ರಕಟಿಸುತ್ತಿರುವ ವಾರ್ತಾಭಾರತಿ ಪತ್ರಿಕೆಯನ್ನು ಕೆಲವು ಟ್ರೋಲ್ ಪೇಜ್ ಗಳು ರಿಪೋರ್ಟ್ ಮಾಡಿಸಿತ್ತು. ವಿನಾಕಾರಣ ಮಾನಹಾನಿ ಮಾಡುವ ಟ್ರೋಲ್ ಪೇಜ್ ಗಳನ್ನು ಮುಟ್ಟದೇ ಫೇಸ್ ಬುಕ್ ನವರು ವಾರ್ತಾಭಾರತಿ ಪತ್ರಿಕೆಯ ಫೇಸ್ ಬುಕ್ ಪೇಜನ್ನು ಅಮಾನತು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಕರ್ನಾಟಕದ ಮಾಧ್ಯಮಗಳ ಕುರಿತು ಉಲ್ಲೇಖಿಸಿದ ಅವರು. ಕರ್ನಾಟಕದಲ್ಲಿ ಓರ್ವ ಕಾಂಗ್ರೆಸ್ ಮತ್ತು ಓರ್ವ ಬಿಜೆಪಿ ಮುಖಂಡನ ಕುರಿತು ಬರೆದಿದ್ದಕ್ಕಾಗಿ ಹಾಯ್ ಬೆಂಗಳೂರು ಮತ್ತು ವಾಯ್ಸ್ ಆಫ್ ಯಲಹಂಕ ಪತ್ರಿಕೆಯ ಸಂಪಾದಕರಿಗೆ ಒಂದುವರ್ಷ ಜೈಲುಶಿಕ್ಷೆ ನೀಡಲಾಗಿದೆ. ಈ ಎಲ್ಲಾ ಪ್ರಕರಣಗಳಿಂದ ಮಾಧ್ಯಮದವರು ಭಯದಿಂದ ಜೀವಿಸುವಂತಹ ಸನ್ನಿವೇಶ ಬಂದೊದಗಿದೆ ಎಂದಿದ್ದಾರೆ.
ಕೃಪೆ: ನ್ಯೂಸ್ ಕನ್ನಡ