ಹಾಲು ಖರೀದಿ ದರ ಪರಿಷ್ಕರಣೆ 

Source: sonews | By Staff Correspondent | Published on 8th July 2018, 8:17 PM | State News | Public Voice |

ಹಾಲು ಖರೀದಿ ದರ ಪರಿಷ್ಕರಣೆ 
ಒಕ್ಕೂಟದಲ್ಲಿ ಲಾಭ ಗಳಿಸಿದಾಗ ಉತ್ಪಾದಕರಿಗೆ ಉತ್ತೇಜನ ನೀಡಲು ಹಾಲು ಖರೀದಿ ದರವನ್ನು ಹೆಚ್ಚಿಸುವುದು, ಅದೇ ರೀತಿ ಸುಗ್ಗಿ ಕಾಲದಲ್ಲಿ ಹಾಲು ಶೇಖರಣೆ ಅಧಿಕಗೊಂಡಾಗ ಹೆಚ್ಚುವರಿ ಹಾಲನ್ನು ಪರಿವರ್ತನೆಗೆ ಕಳುಹಿಸುವ ಸಂದರ್ಭಗಳಲ್ಲಿ ಒಕ್ಕೂಟವು  ನಷ್ಠ ಹೊಂದುವುದನ್ನು ಸರಿದೂಗಿಸಲು  ಹಾಲು  ಖರೀದಿ ದರ ಇಳಿಕೆ ಮಾಡುವ ಪದ್ದತಿ ಮೊದಲಿನಿಂದಲೂ ಕಹಾಮ/ಒಕ್ಕೂಟಗಳ ವ್ಯವಸ್ಥೆಯಲ್ಲಿ ರೂಡಿಯಲ್ಲಿರುತ್ತದೆ. ಈ ಹಿನ್ನಲೆಯಲ್ಲಿ ಒಕ್ಕೂಟವು 2017-18 ಸಾಲಿನಲ್ಲಿ ಗಳಿಸಿದ ಲಾಭಾಂಶವನ್ನು ಆಧರಿಸಿ ದಿನಾಂಕ 16.03.2018 ರಿಂದ 31.05.2018 ವರೆಗೆ ಹಾಲಿನ ಖರೀದಿ ದರವನ್ನು ರೂ.1/- ನ್ನು ಹೆಚ್ಚಿಸಿ ಹಾಲು ಉತ್ಪಾದಕರಿಗೆ ರೂ.24/- ಮತ್ತು ಸಂಘಕ್ಕೆ ರೂ.25.05 ಪ್ರತಿ ಲೀ.ಗೆ ಒಕ್ಕೂಟದಿಂದ ಪಾವತಿಸಲಾಗುತ್ತಿರುತ್ತದೆ.
ದಿನಾಂಕ 07.07.2018 ರಂದು ನಡೆದ ಒಕ್ಕೂಟದ ಆಡಳಿತ ಮಂಡಲಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಪ್ರಸ್ತುತ ರಾಜ್ಯದಲ್ಲಿ ಹಾಲಿನ ಹೊಳೆ ಹೆಚ್ಚಾಗಿದ್ದು, ನೆರೆಯ ಹಾಲು ಒಕ್ಕೂಟಗಳಲ್ಲೂ ಸಹ ಯತೇಚ್ಚವಾಗಿ ಹಾಲು ಶೇಖರಣೆಯಾಗುತ್ತಿರುವುದನ್ನು ಪರಿಗಣಿಸಿ ಪ್ರಸ್ತುತ ಹಾಲು ಉತ್ಪಾದಕರಿಗೆ ಬೆಂಗಳೂರು ಹಾಲು ಒಕ್ಕೂಟದಲ್ಲಿ ರೂ.22/-, ಮೈಸೂರು ಹಾಲು ಒಕ್ಕೂಟ ರೂ.22.50, ಮಂಡ್ಯ ಹಾಲು ಒಕ್ಕೂಟ ರೂ.22/- ತುಮಕೂರು ಹಾಲು ಒಕ್ಕೂಟ  ರೂ.22/- ಮತ್ತು ಹಾಸನ ಹಾಲು ಒಕ್ಕೂಟಗಳಲ್ಲಿ  ರೂ.22/- ಗಳಂತೆ ಪಾವತಿಸಲಾಗುತ್ತಿದೆ.
ಕೋಲಾರ-ಚಿಕ್ಕಬಳ್ಳಾಪುರ ಉಭಯ ಜಿಲ್ಲೆಗಳ ಹಾಲು ಉತ್ಪಾದಕರ ಹಿತದೃಷ್ಠಿಯಿಂದ ತಹಲ್ ವರೆಗೂ ಒಕ್ಕೂಟವು ಸಂಘಕ್ಕೆ ರೂ.25.05 ರಂತೆ ಮತ್ತು ಉತ್ಪಾದಕರಿಗೆ ರೂ.24/- ಪಾವತಿಸಿರುವುದರಿಂದ ಜೂನ್-18 ರ ಮಾಹೆ ಅಂತ್ಯಕ್ಕೆ ಒಕ್ಕೂಟಕ್ಕೆ ಅಂದಾಜು ರೂ.24.0 ಕೋಟಿಗಳು ನಷ್ಟ ಹೊಂದಿರುವುದನ್ನು  ಇಂದಿನ ಆಡಳಿತ ಮಂಡಲಿ ಸಭೆಯಲ್ಲಿ ಅವಲೋಕಿಸಿ  ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರಸ್ತುತ 11.40 ಲಕ್ಷ ಲೀ. ಹಾಲು ಶೇಖರಣೆಯಾಗುತ್ತಿದ್ದು, ದಿನಂಪ್ರತಿ 3.3 ಲಕ್ಷ ಲೀ. ಹಾಲು ಪರಿವರ್ತನೆಗೆ ರವಾನಿಸುತ್ತಿರುದರಿಂದ ಹಾಗೂ ಮುಂದಿನ ದಿನಗಳಲ್ಲಿ ಮುಂಗಾರು ಚುರುಕಾದಲ್ಲಿ  ಇನ್ನೂ ಹೆಚ್ಚು ಹಾಲು ಶೇಖರಣೆ ನೀರೀಕ್ಷ್ಷಿಸಿ ಸಮಸ್ತ ಹಾಲು ಉತ್ಪಾದಕರಿಗೆ ಸಕಾಲದಲ್ಲಿ ಹಾಲಿನ ಹಣ ಬಟವಾಡೆ ಮಾಡಿ ಹಾಲು ಉತ್ಪಾದಕರ ಹಿತ ಕಾಯ್ದುಕೊಳ್ಳುವ ದೃಷ್ಟಿಯಿಂದ  ಪ್ರಸ್ತುತ ಖರೀದಿಸಲಾಗುತ್ತಿರುವ ಪ್ರತಿ ಲೀ. ಹಾಲಿನ ದರದಲ್ಲಿ ದಿನಾಂಕ 08.07.2018 ರ ಬೆಳಗಿನ ಸರತಿಯಿಂದ ಜಾರಿಗೆ ಬರುವಂತೆ ರೂ.2/- ರಂತೆ ಕಡಿತಗೊಳಿಸಿ ರೂ.22/- ರಂತೆ ಪಾವತಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ.
ಮಾಹಿತಿಯನ್ನು ಸಮಸ್ತ ಹಾಲು ಉತ್ಪಾದಕರ ಹಾಗೂ ಸಾರ್ವಜನಿಕರ ಮನವರಿಕೆಗಾಗಿ ತಮ್ಮ ಘನ ಪತ್ರಿಕೆಯಲ್ಲಿ ಪ್ರಕಟಣೆಗೊಳಿಸಲು ಕೋರಿದೆ.
ವಂದನೆಗಳೊಂದಿಗೆ,                        

ತಮ್ಮ ವಿಶ್ವಾಸಿ,
                           

 ಸಹಿ/-
ವ್ಯವಸ್ಥಾಪಕ ನಿರ್ದೇಶಕರು
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...