ಮೋದಿ ಶಿಲಾನ್ಯಾಸ ಮಾಡಿದ್ದು ಮೊದಲ ದೇವಾಲಯವಲ್ಲ!

Source: sonews | By Staff Correspondent | Published on 11th February 2018, 11:56 PM | National News | Gulf News | Special Report | Don't Miss |

                                      ದುಬೈ ದೇವಸ್ಥಾನಕ್ಕೆ 60 ವರ್ಷಗಳ ಇತಿಹಾಸವಿದೆ 
*ರಷೀದ್ ವಿಟ್ಲ
ಪ್ರದಾನಿ ಮೋದಿಯವರು ದುಬೈ ಒಪೆರಾ ಹೌಸ್ ನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಅಬುದಾಬಿಯಲ್ಲಿ ನಿರ್ಮಿಸಲಾಗುವ ಹಿಂದೂ ದೇವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿಸಿದ್ದೇ ತಡ ಪ್ರಮುಖ ಮಾಧ್ಯಮಗಳಲ್ಲಿ ಪ್ರಥಮ ದೇವಸ್ಥಾನಕ್ಕೆ ದುಬೈಯಲ್ಲಿ ಮೋದಿ ಶಿಲಾನ್ಯಾಸ ಎಂಬ ತಲೆಬರಹ ಬರುತ್ತಿದೆ. ಅದುವೇ ದೊಡ್ಡ ಸುದ್ದಿಯಾಗಿದೆ. ಆದರೆ ಇದು ನಿಜಾನಾ? ದೇವಾಲಯ ಇದೇ ಪ್ರಥಮವಾ? ಈ ಹಿಂದೆ ಅಲ್ಲಿ ದೇವಸ್ಥಾನ ಇರಲಿಲ್ಲವೇ? ಮೊದಲಾದ ಪ್ರಶ್ನೆಗಳಿಗೆ ಅಲ್ಲಿನ ಇತಿಹಾಸವನ್ನೊಮ್ಮೆ ನೋಡಿ ಬರೋಣ.

ದುಬೈ, ಅಬುದಾಬಿ, ಶಾರ್ಜಾ, ಅಲ್ ಐನ್, ಫುಜೈರಾ ಪ್ರಾಂತ್ಯಗಳನ್ನೊಳಗೊಂಡ ಯುಎಇ ರಾಷ್ಟ್ರದಲ್ಲಿ ಹಿಂದೂ ಬಾಂಧವರ ದೇವಸ್ಥಾನವು 60 ವರ್ಷಗಳ ಹಿಂದೆಯೇ ನಿರ್ಮಾಣ ಕಂಡಿದೆ ಎಂದು ಇತಿಹಾಸ ಹೇಳುತ್ತದೆ. ಹಾಗಿರುವಾಗ ಮೋದಿ ಶಿಲಾನ್ಯಾಸ ನೆರವೇರಿಸಿರುವ ದೇವಾಲಯವೇ ಪ್ರಥಮ ದೇವಸ್ಥಾನ ಹೇಗಾಗುತ್ತದೆ ಎಂಬ ಸಂಶಯ ಮೂಡಿದೆ. ದೇವರಲ್ಲಿ ಸುಳ್ಳು ಹೇಳಬಾರದು. ಜನರನ್ನು ಸುಳ್ಳು ಹೇಳಿ ಮಂಗ ಮಾಡುವುದು ಬಿಡಿ ದೇವರ ಹೆಸರಲ್ಲಿ ಸ್ಥಾಪಿಸುವ ದೇವಸ್ಥಾನದ ವಿಚಾರದಲ್ಲೂ ಕೂಡಾ ಇದೇ ಸುಳ್ಳನ್ನು ಮುಂದುವರೆಸುವುದು ಎಷ್ಟು ಸರಿ?

1958 ರಲ್ಲಿ ಶೈಖ್ ರಾಶಿದ್ ಬಿನ್ ಸಯೀದ್ ಅಲ್ ಮಖ್ತೂಮ್ ಅವರು ಯುಎಇಯ ದೇರಾ ದುಬೈ ಹಾಗೂ ಬರ್ ದುಬೈ ಯನ್ನು ಸಂಧಿಸುವ ಪ್ರದೇಶವಾದ ದುಬೈ ಕ್ರೀಕ್ ನಲ್ಲಿ (ಬರ್ ದುಬೈ ಓಲ್ಡ್ ಸೂಕ್ ಪ್ರದೇಶ) ಶಿವ ಮತ್ತು ಕೃಷ್ಣ ದೇವಸ್ಥಾನ ನಿರ್ಮಾಣಕ್ಕೆ ಅಂಕಿತ ಹಾಕಿದ್ದರು. ನಾನು 2002 ರಲ್ಲಿ ಪ್ರಥಮ ಬಾರಿ ಯುಎಇ ಪ್ರವಾಸ ಕೈಗೊಂಡಾಗ ಅರಬ್ ಪ್ರಾಂತ್ಯದ ಈ ಐತಿಹಾಸಿಕ ದೇವಸ್ಥಾನವನ್ನು ಸಂದರ್ಶಿಸಿದ ನೆನಪು ಈಗಲೂ ಮಾಸಿಲ್ಲ.

ಈ ಹಿಂದೂ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳಲ್ಲದೆ ಹಿಂದೂ ಬಾಂಧವರ ಮದುವೆ ಕೈಂಕರ್ಯಗಳು ಕೂಡಾ ಶುದ್ಧ ಹಿಂದೂ ಸಂಪ್ರದಾಯದಂತೆ ಇಲ್ಲಿ ನಡೆಯುತ್ತದೆ. ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವಾದ ಯುಎಇಯ ಕಟ್ಟರ್ ಮುಸ್ಲಿಮರಾದ ಅರಬ್ಬಿಗಳು ಕೂಡಾ ತಮ್ಮ ನೆಲದಲ್ಲಿ ಭಾರತೀಯ ಹಿಂದೂಗಳನ್ನು ಆದರಪೂರ್ವಕವಾಗಿ ಗೌರವಿಸುತ್ತಾರೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನ.

2010 ರ ಗಣತಿ ಪ್ರಕಾರ ಯುಎಇ ರಾಷ್ಟ್ರದಲ್ಲಿ ಭಾರತದಿಂದ ಉದ್ಯೋಗ ನಿಮಿತ್ತ ತೆರಳಿದ ಹಾಗೂ ಉದ್ಯಮದಲ್ಲಿ ತೊಡಗಿಸಿಕೊಂಡ ಸುಮಾರು 4,90,000 ಹಿಂದೂಗಳಿದ್ದಾರೆ. 50,000 ಸಿಖ್ಖರೂ ಇದ್ದಾರೆ. ಈಗ ಆ ಸಂಖ್ಯೆ ಹೆಚ್ಚಾಗಿದೆ. ದುಬೈಯ ಜಬಲ್ ಅಲಿ ಯಲ್ಲಿ ಸಿಖ್ಖರ ಬೃಹತ್ ಗುರುದ್ವಾರ ಕೂಡಾ ತಲೆಎತ್ತಿದೆ. ಸೌಹಾರ್ದತೆಗೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಯುಎಇಯು ಮಲಯಾಳಿ ಸಿರಿಯನ್ ಕ್ರೈಸ್ತರಿಗೆ ಕ್ರೈಸ್ತ ಚರ್ಚ್ ಕೂಡಾ ನಿರ್ಮಿಸಿ ಕೊಟ್ಟಿದೆ.

ದುಬೈ-ಅಬುದಾಬಿ ಶೈಖ್ ಝಾಯೆದ್ ಹೈವೇ ಹಾದು ಹೋಗುವ ಅಲ್ ರಹಬ ಸಮೀಪ ಅಬುದಾಬಿಯ ಯುವರಾಜ ಹಾಗೂ ಯುಎಇ ಸಶಸ್ತ್ರ ಪಡೆಗಳ ಉಪ ಸುಪ್ರೀಂ ಕಮಾಂಡರ್ ಶೈಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಹಿಂದೂ ದೇವಾಲಯಕ್ಕಾಗಿ 2013 ಜುಲೈ ತಿಂಗಳಲ್ಲಿ 55,000 ಚದರಡಿ ಸ್ಥಳದಾನ ಮಾಡಿದ್ದರು. ಈ ಸ್ಥಳ ನೀಡಿ ಎರಡು ವರ್ಷದ ಬಳಿಕ 2015 ಆಗಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಯುಎಇಯ ಭೇಟಿ ಸಂದರ್ಭ ಅಬುಧಾಬಿಯಲ್ಲಿ ದೇವಸ್ಥಾನ ನಿರ್ಮಾಣದ ಬಗ್ಗೆ ಅಬುಧಾಬಿ ಸರಕಾರ ಘೋಷಣೆ ಮಾಡಿತ್ತು. ಮೋದಿ ಅಲ್ಲದೆ ಆ ಸ್ಥಾನದಲ್ಲಿ ಬೇರೆ ಒಬ್ಬರು ಪ್ರದಾನಿ ಇರುತ್ತಿದ್ದರೂ ಯುಎಇ ಸರಕಾರ ಇದೇ ಹಾದಿಯನ್ನು ಅನುಸರಿಸುತ್ತಿತ್ತು. ಯುಎಇ ಪ್ರಪಂಚದ ಎಲ್ಲ ವರ್ಗವನ್ನೂ ಆಕರ್ಷಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಅದರ ಒಂದು ಭಾಗವಾಗಿದೆ ಈ ದೇವಾಲಯ. ಇಲ್ಲಿ ಹಿಂದೂಗಳಿಗಲ್ಲದೆ ಎಲ್ಲರಿಗೂ ಮುಕ್ತ ಅವಕಾಶವಿದೆ.

ಯುಎಇ ರಾಷ್ಟ್ರಕ್ಕೆ ಈ ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಭೇಟಿ ನೀಡಿದ್ದರು. ಆ ನಂತರದ ಪ್ರಧಾನಿಗಳು ಯಾರೂ ಸಂದರ್ಶಿಸಿರಲಿಲ್ಲ. 34 ವರ್ಷಗಳ ಸುದೀರ್ಘ ಅವಧಿಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು 2015 ರಲ್ಲಿ ಭೇಟಿ ನೀಡಿದ್ದರು.</p>

ಇದೀಗ ಮೋದಿ 2 ನೇ ಬಾರಿಗೆ ಭೇಟಿ ನೀಡಿದ್ದಾರೆ. ಯುಎಇ ಸರಕಾರದಿಂದ ಅದ್ದೂರಿಯ ಸ್ವಾಗತ ದೊರಕಿದೆ. ಈ ಐತಿಹಾಸಿಕ ಭೇಟಿ ಯುಎಇ ಮತ್ತು ಭಾರತ ದೇಶದ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲು ಹಾಗೂ ಯುಎಇಯ ಸೌಹಾರ್ದ, ಸಾಮರಸ್ಯದ ಸಂದೇಶವನ್ನು ಭಾರತದಲ್ಲೂ ಬಿತ್ತಲು ಸಹಕಾರಿಯಾದರೆ ಪ್ರದಾನಿ ಸಂದರ್ಶನ ಸಾರ್ಥಕ್ಯ ಪಡೆಯಬಹುದು. ಇಸ್ಲಾಮಿಕ್ ರಾಷ್ಟ್ರವಾದ ಯುಎಇಯ ಕಾರ್ಯವೈಖರಿ, ಐಕ್ಯತೆ ಸರ್ವಧರ್ಮೀಯರ ದೇಶವಾದ ಭಾರತಕ್ಕೆ ಉತ್ತಮ ಸಂದೇಶ ನೀಡಿದೆ.

ಕೃಪೆ:ವಾರ್ತಾಭಾರತಿ

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...