ವಿ.ಟಿ.ಯು ಕ್ರಾಸ್ ಕಂಟ್ರಿ ಓಟದ ಸ್ಪರ್ಧೆ ; ಪುರಷರ ವಿಭಾಗದಲ್ಲಿ ನಾಗರಾಜ್, ಮಹಿಳಾ ವಿಭಾಗದಲ್ಲಿ ಜ್ಯೋತಿ ಪ್ರಥಮ
ಭಟಳ: ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಫಿಸಿಕಲ್ ಅಂಡ್ ಸ್ಪೋಟ್ರ್ಸ್ ಡಿಪಾಟ್ಮೆರ್ಂಟ್ ಮತ್ತು ವಿಶ್ವೇಶ್ವರಯ ಟೆಕ್ನಾಲಾಜಿಕಲ್ ಯೂನಿವರ್ಸಿಟಿಯ ಸಹಯೋಗದೊಂದಿಗೆ, ಸಿಂಗಲ್ ಜೋನ್ 10 ಕಿ.ಮೀ. ಕ್ರಾಸ್ ಕಂಟ್ರಿ ಓಟದ ಸ್ಪರ್ಧೆ ಬುಧವಾರ ಅಂಜುಮನಾಬಾದ್ ಮೈದಾನದಿಂದ ಆರಂಭಗೊಂಡಿತು.
ಈ ಸ್ಪರ್ಧೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆಧೀನಕ್ಕೊಳಪಡುವ ಸುಮಾರು 60 ತಾಂತ್ರಿಕ ಕಾಲೇಜುಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಯುವ ಕ್ರೀಡಾಪಟುಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಿದರು.
ಪುರುಷರ ಹಳ್ಳಿಗಾಡಿನ ಓಟದ ಸ್ಪರ್ಧೆಯಲ್ಲಿ ಬೆಂಗಳೂರು ಎಸ್.ಇ.ಎ ಕಾಲೇಜಿನ ನಾಗರಾಜ್ ಸಿದ್ಧಪ್ಪ ಹಾಗೂ ನಿಟ್ಟೆ ಮಹಾಲಿಂಗ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಜ್ಯೋತಿ ಕಾರ್ಕಳ ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡರು.
ನಿಟ್ಟೆ ಮಹಾಲಿಂಗ ಅದ್ಯಂತಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಎಂಎಎಂಐಟಿ), ನಿಟ್ಟೆ, ಸಂಸ್ಥೆಯು 60 ಅಂಕಗಳೊಂದಿಗೆ ಸರ್ವಶ್ರೇಷ್ಟ ಚಾಂಪಿಯನ್ ಪಡೆದರು.
ಪುರುಷರ ತಂಡ ವಿಭಾಗದಲ್ಲಿ ಮೂಡಬಿದ್ರಿಯ ಅಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜ್ 27 ಅಂಕಗಳೊಂದಿಗೆ ಉನ್ನತ ಸ್ಥಾನ ಪಡೆದರೆ, ನಿಟ್ಟೆ ಮಹಾಲಿಂಗ ಅದ್ಯಂತಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಎಂಎಂಐಟಿ), ನಿಟ್ಟೆ, 38 ಅಂಕಗಳೊಂದಿಗೆ ರನ್ನರ್ ಅಪ್ ಪಡೆದರು.
ಮಹಿಳಾ ತಂಡ ವಿಭಾಗದಲ್ಲಿ, ನಿಟ್ಟೆ ಮಹಾಲಿಂಗ ಅದ್ಯಂತಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಎಂಎಂಐಟಿ), ನಿಟ್ಟೆ, 22 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದರೆ, ಮೂಡಬಿದ್ರೆಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ 41 ಅಂಕಗಳೊಂದಿಗೆ ರನ್ನರ್ ಅಪ್ ಪಡೆದರು.
ಪುರುಷರ ವಯುಕ್ತಿಕ ವಿಭಾಗದಲ್ಲಿ ಬೆಂಗಳೂರಿನ ಎಸ್ಇಎ ಕಾಲೇಜಿನ ನಾಗರಾಜ್ ಸಿದ್ಧಪ್ಪï ಪ್ರಥಮ ಸ್ಥಾನ ಪಡೆದುಕೊಂಡರೆ, ಅಳ್ವಾಸ್ ಇಂಜಿನೀಯರಿಂಗ್ ಕಾಲೇಜಿನ ಸುಜನ್ ಶೇಖರ್ ಎರಡನೇ ಸ್ಥಾನ ಪಡೆದರು ಮತ್ತು ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎನ್ಎಂಐಟಿಯ) ಮೊಹಮ್ಮದ್ ಸಾಹಿಲ್ ಅಣ್ಣಿಗೇರಿ ತೃತೀಯ ಸ್ಥಾನ ಪಡೆದರು.
ಮಹಿಳಾ ವೈಯಕ್ತಿಕ ವಿಭಾಗದಲ್ಲಿ, ನಿಟ್ಟೆ ಮಹಾಲಿಂಗ ಅದ್ಯಂತಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಜ್ಯೋತಿ, ಪ್ರಥಮ, ಪ್ರಣಾಲಿ ಪಿ ಜಾದವ್, ಎಸ್.ಜಿ.ಬಲೇಕುಂದರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಸ್ಜಿಬಿಐಟಿ), ಬೆಳಗಾವಿ ದ್ವಿತೀಯಾ, ಹಾಗೂ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಸುಷ್ಮಾ ಮೂರನೇ ಸ್ಥಾನ ಪಡೆದರು.
ಗುರುವಾರ ಮುಂಜಾನೆ ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯ ಅಂಜುಮನಾಬಾದ್ ಮೈದಾನದಲ್ಲಿ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಿದ್ದೀಕ್ ಸ್ಪರ್ಧಾಳುಗಳಿಗೆ ಕ್ರೀಡಾ ದ್ವಜಾ ತೋರಿಸುವುದರ ಮೂಲಕ ಕ್ರಾಸ್ ಕಂಟ್ರಿ ಓಟಕ್ಕೆ ಚಾಲನೆ ನೀಡಿದರು.
ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಭಟ್ಕಳ ಡಿವೈಎಸ್ಪಿ ವ್ಯಾಲೆಂಟೈನ್ ಡಿ'ಸೋಜಾ, ವಿದ್ಯಾರ್ಥಿಗಳು ಸ್ವಸ್ಥ ಹಾಗೂ ಆರೋಗ್ಯಯುತವಾಗಿರಲು ಕೆಡುಕು ಹಾಗೂ ವ್ಯಸನಗಳಿಂದ ಮುಕ್ತರಾಗಬೇಕೆಂದು ಕರೆ ನೀಡಿದರು.
ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸಾಖ್ ಶಾಬಂದ್ರಿ, ಎಐಟಿಎಂ ಕಾಲೇಜು ಬೋರ್ಡ್ ಕಾರ್ಯದರ್ಶಿ ಅಬುಬಕರ್ ಕಾಸಿಮಜಿ, ಪ್ರಾಂಶುಪಾಲ ಡಾ. ಮುಸ್ತಾಕ್ ಆಹ್ಮದ್ ಭವಿಕಾಟ್ಟೆ, ಉಪಪ್ರಾಂಶುಪಾಲ ಎಚ್.ಎಂ.ಫಲಾಚಂದ್ರ, ದೈಹಿಕ ಶಿಕ್ಷಣ ನಿರ್ದೇಶಕ ಅಲ್ತಾಫ್ ಸಾಬ್ ಮತ್ತು ಇತರರು ಉಪಸ್ಥಿತರಿದ್ದರು.