ರಾಯಲ್ಪಾಡು:ವಿದ್ಯಾರ್ಥಿಗಳು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲೂ ಸಾಧಿಸಿ ಪ್ರಗತಿಗೆ ನೆರವಾಗಲು ಸಂಜಯ್ ರೆಡ್ಡಿ ಕರೆ

Source: shabbir | By Arshad Koppa | Published on 17th August 2017, 8:43 AM | State News | Guest Editorial |

ರಾಯಲ್ಪಾಡು, ಆ ೧೬: ವಿದ್ಯಾರ್ಥಿಗಳು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾದನೆಯನ್ನು ಸಾಧಿಸಿ ದೇಶದ ಪ್ರಗತಿಗೆ ಕಾರಣರಾಗಬೇಕಾಗಿದೆ ಎಂದು ರಾಜ್ಯಯೋಜನಾ ಆಯೋಗದ ಸದಸ್ಯ ಸಂಜಯ್‍ರೆಡ್ಡಿ ತಿಳಿಸಿದರು.


ಏರಿಸ್ ಆಗ್ರೋ ಲಿಮಿಟೆಡ್ ಮುಂಬಯಿ . ಇವರ ಸಹಯೋಗದಲ್ಲಿ 71ನೇ ಸ್ವಾತಂತ್ರೋತ್ಸವದ ಅಂಗವಾಗಿ ಬೈರಗಾನಪಲ್ಲಿ ಸರ್ಕಾರಿ ಪ್ರೌಡಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗು ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. 
ಬ್ರಿಟಷರು 350ವರ್ಷಗಳ ಕಾಲ ದೇಶದಲ್ಲಿನ ಸಂಪತ್ತನ್ನು ಲೋಟಿ ಹೊಡೆದುಹೋದರು, ಇದರಿಂದ ನಮ್ಮ ದೇಶವು ಬರಡಾಗಿದೆ. ಆದರೆ  ನಮ್ಮ ದೇಶದಲ್ಲಿ  ಜ್ಞಾನವಂತರಿಗೆ ಮಿತಿಯಿಲ್ಲ, ಎಷ್ಟೋ ಜನ ಜ್ಞಾನವಂತ ಮಹನೀಯರು ಪ್ರಪಂಚಕ್ಕೆ  ಮಾದರಿಯಾಗಿದ್ದಾರೆ.   
ದೇಶ ನನ್ನದೇ , ಸಮಾಜ ನನ್ನದೇ ! ಇದು ಸರ್ಕಾರದಲ್ಲ ಎಂದು ನೆನಪಿಸಿಕೊಳ್ಳಬೇಕಾದ ಅವಶ್ಯಕತೆ ಇಂದು ಖಂಡಿತಾ ಇದೆ . ದೇಶ ಭಕ್ತಿ ಹೊಂದಿದ ಹಾಗೂ ಶಿಸ್ತನ್ನುಳ ಪ್ರಜೆಗಳಿಂದ ಮಾತ್ರ ಯಾವುದೇ ದೇಶದ ಅಭಿವೃದ್ದಿ ಸಾಧ್ಯವೆಂಬುದು ಹಲವು ಅಭಿವೃದ್ದಿ ಹೊಂದಿರುವ ದೇಶಗಳು ಕಂಡಿರುವ ಸತ್ಯ . 
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಏರಿಸ್ ಆಗ್ರೋ ಲಿಮಿಟೆಡ್ ಕಂಪನಿಯ ಕಾರ್ಯಕ್ರಮವನ್ನು ಶ್ಲಾಘಿಸಿದರು. 
ಈ ಸಮಯದಲ್ಲಿ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಕೆ.ಎನ್.ರಾಮಚಂದ್ರ, ಏರಿಸ್ ಆಗ್ರೋ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕರಾದ ಹನುಮಂತನಾಯ್ಕ್ , ಗ್ರಾಮದ ಮುಖಂಡರಾದ  ವೆಂಕಟರಾಮಿರೆಡ್ಡಿ,  ನಾಗೇಶ್ , ವೆಂಕಟರಮಣಾರೆಡ್ಡಿ,  ಕೆ.ಆರ್.ಸಂಜಯ್‍ಕುಮಾರ್, ಗೋವಿಂದರೆಡ್ಡಿ ಹಾಗು ಶಾಲೆಯ ಶಿಕ್ಷಕರಾದ ವೆಂಕಟೇಶಪ್ಪ, ಕೃಷ್ಣಯ್ಯ, ಪೂಣ ್ಮ, ತುಳಸಿಮಾಲಾ,  ರುದ್ರೇಶ್, ನಾರಾಯಣಸ್ವಾಮಿ ಇದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...