ರಾಯಲ್ಪಾಡು, ಆ ೧೬: ವಿದ್ಯಾರ್ಥಿಗಳು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾದನೆಯನ್ನು ಸಾಧಿಸಿ ದೇಶದ ಪ್ರಗತಿಗೆ ಕಾರಣರಾಗಬೇಕಾಗಿದೆ ಎಂದು ರಾಜ್ಯಯೋಜನಾ ಆಯೋಗದ ಸದಸ್ಯ ಸಂಜಯ್ರೆಡ್ಡಿ ತಿಳಿಸಿದರು.
ಏರಿಸ್ ಆಗ್ರೋ ಲಿಮಿಟೆಡ್ ಮುಂಬಯಿ . ಇವರ ಸಹಯೋಗದಲ್ಲಿ 71ನೇ ಸ್ವಾತಂತ್ರೋತ್ಸವದ ಅಂಗವಾಗಿ ಬೈರಗಾನಪಲ್ಲಿ ಸರ್ಕಾರಿ ಪ್ರೌಡಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗು ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಬ್ರಿಟಷರು 350ವರ್ಷಗಳ ಕಾಲ ದೇಶದಲ್ಲಿನ ಸಂಪತ್ತನ್ನು ಲೋಟಿ ಹೊಡೆದುಹೋದರು, ಇದರಿಂದ ನಮ್ಮ ದೇಶವು ಬರಡಾಗಿದೆ. ಆದರೆ ನಮ್ಮ ದೇಶದಲ್ಲಿ ಜ್ಞಾನವಂತರಿಗೆ ಮಿತಿಯಿಲ್ಲ, ಎಷ್ಟೋ ಜನ ಜ್ಞಾನವಂತ ಮಹನೀಯರು ಪ್ರಪಂಚಕ್ಕೆ ಮಾದರಿಯಾಗಿದ್ದಾರೆ.
ದೇಶ ನನ್ನದೇ , ಸಮಾಜ ನನ್ನದೇ ! ಇದು ಸರ್ಕಾರದಲ್ಲ ಎಂದು ನೆನಪಿಸಿಕೊಳ್ಳಬೇಕಾದ ಅವಶ್ಯಕತೆ ಇಂದು ಖಂಡಿತಾ ಇದೆ . ದೇಶ ಭಕ್ತಿ ಹೊಂದಿದ ಹಾಗೂ ಶಿಸ್ತನ್ನುಳ ಪ್ರಜೆಗಳಿಂದ ಮಾತ್ರ ಯಾವುದೇ ದೇಶದ ಅಭಿವೃದ್ದಿ ಸಾಧ್ಯವೆಂಬುದು ಹಲವು ಅಭಿವೃದ್ದಿ ಹೊಂದಿರುವ ದೇಶಗಳು ಕಂಡಿರುವ ಸತ್ಯ .
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಏರಿಸ್ ಆಗ್ರೋ ಲಿಮಿಟೆಡ್ ಕಂಪನಿಯ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಈ ಸಮಯದಲ್ಲಿ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಕೆ.ಎನ್.ರಾಮಚಂದ್ರ, ಏರಿಸ್ ಆಗ್ರೋ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕರಾದ ಹನುಮಂತನಾಯ್ಕ್ , ಗ್ರಾಮದ ಮುಖಂಡರಾದ ವೆಂಕಟರಾಮಿರೆಡ್ಡಿ, ನಾಗೇಶ್ , ವೆಂಕಟರಮಣಾರೆಡ್ಡಿ, ಕೆ.ಆರ್.ಸಂಜಯ್ಕುಮಾರ್, ಗೋವಿಂದರೆಡ್ಡಿ ಹಾಗು ಶಾಲೆಯ ಶಿಕ್ಷಕರಾದ ವೆಂಕಟೇಶಪ್ಪ, ಕೃಷ್ಣಯ್ಯ, ಪೂಣ ್ಮ, ತುಳಸಿಮಾಲಾ, ರುದ್ರೇಶ್, ನಾರಾಯಣಸ್ವಾಮಿ ಇದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ