ಮಂಗಳೂರು: ಕೇಂದ್ರ ಚುನಾವಣಾ ಆಯೋಗ ಗುಜರಾತ್ ವಿಧಾನ ಸಭೆಯ ಚುನಾವಣೆ ಘೋಷಣೆಗೆ ವಿಳಂಬ ಮಾಡುತ್ತಿರುವಕಾರ್ಯವೈಖರಿಯನ್ನು ಎಸ್.ಡಿ.ಪಿ.ಐ ಖಂಡಿಸುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿ.ಜೆ.ಪಿ ಹಾಗೂ ಚುನಾವಣಾ ಆಯೋಗ ಮಧ್ಯೆ ಏನೂ ಅಸಹಜ ಪ್ರಕ್ರಿಯೆ ನಡೆಯುತಿದ್ದಂತೆ ಸಂಶಯ ಮೂಡುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎ. ಸಯೀದ್ ರವರು ತಿಳಿಸಿದ್ದಾರೆ. ಚುನಾವಣಾ ಆಯೋಗ ಪ್ರಧಾನ ಮಂತ್ರಿಯನ್ನು ಖುಷಿ ಪಡಿಸಲು ಹೊರಟಿರುವ ಪರಿಣಾಮ ದೇಶದ ಪ್ರಜಾ ಪ್ರಭುತ್ವ ವ್ಯವಸ್ತೆಗೆ ಅಪಾಯಕಾರಿಯಾಗಿದೆ.
ದೇಶವು ಸರ್ವಾಧಿಕಾರಿ ವ್ಯವಸ್ತೆಯತ್ತ ವಾಲುತ್ತಿದ್ದು, ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳು ಸರಕಾರದ ಒತ್ತಡಗಳಿಗೆ ಮಣಿಯುತ್ತಿದೆ. ಬಿಜೆಪಿಯ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಾಗಿದೆ. ಈಗಿನ ಚುನಾವಣಾ ಆಯೋಗದ ಮುಖ್ಯಸ್ಥರು ಹಿಂದೆ ಗುಜಾರಾತ್ ಸರಕಾರದಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಗುಜರಾತ್ ಚುನಾವಣಾ ಘೋಷಣೆಯನ್ನು ವಿಳಂಬ ಮಾಡಿ ತನಗೆ ನೀಡಲ್ಪಟ್ಟ ಹೊಸ ಹುದ್ದೆಯ ಋಣ ತೀರಿಸುತ್ತಿರುವಂತೆ ಭಾಸವಾಗುತ್ತಿದೆ.ಗುಜರಾತ್-ಹಿಮಾಚಲ ಚುನಾವಣಾ ಘೋಷಣೆಯಲ್ಲಿ ಆಯೋಗ ಮತ್ತು ಪ್ರಧಾನ ಮಂತ್ರಿ ಮೋದಿ ಪಾಲುದಾರಿಕೆಯಲ್ಲಿ ಬಿಜೆಪಿಗೆ ಏಕ ಪಕ್ಷೀಯವಾಗಿ ಪರೋಕ್ಷ ಬೆಂಬಲ ಕೊಡುತ್ತಿದೆ. ನಿರಂತರ 66 ದಿನಗಳ ನೀತಿ ಸಂಹಿತೆಯನ್ನು ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶಕ್ಕೆ ಘೋಷಣೆಯಾಗಿದೆ. 2014 ಡಿಸಂಬರ್ನಲ್ಲಿ ಜಮ್ಮು ಕಾಶ್ಮೀರದ ಕಾಂಗ್ರೆಸ್ £ಶನಲ್ ಕಾನ್ಫರೆನ್ಸ್ ಮೈತ್ರಿ ಸರಕಾರ ಅಂದು ಚುನಾವಣೆಯನ್ನು ಮುಂದೂಡಲು ವಿನಂತಿಸಿತ್ತು. ಅಂದು ರಾಜಧಾನಿ ಶ್ರೀ ನಗರವು ಸೇರಿದಂತೆ ರಾಜ್ಯದ ಹಲವೆಡೆ ನೆರೆ ಬಂದಿತ್ತು. ಅಂದು ಚುನಾವಣಾ ಆಯೋಗ ಅವರ ವಿನಂತಿಯನ್ನು ತಳ್ಳಿಹಾಕಿತ್ತು. ಆದರೆ ಗುಜರಾತಿನಲ್ಲಿ ನೆರೆ ಸಾಮಾನ್ಯವಾಗಿರುತ್ತದೆ. ಈಗ ಅಲ್ಲಿ ನೆರೆಯ ಸಬೂಬುಹೇಳಿ ಚುನಾವಣೆಯನ್ನು ಉದ್ದೇಶಪೂರ್ವಕವಾಗಿ ಮುಂದೂಡಲಾಗುತ್ತಿದೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಮಯಾವಕಾಶ ಬೇಕು ಎಂಬ ಗುಜರಾತ್ ಸರಕಾರದ ಮನವಿಯನ್ನು ಆಯೋಗ ಪರಿಗಣಿಸಿರುವುದು ಆಶ್ಚರ್ಯಕರ ಎಂದು ಎ.ಸಯೀದ್ರವರು ತಿಳಿಸಿದ್ದಾರೆ.
ಆಯೋಗದ ಮುಖ್ಯಸ್ಥರು ಸರಕಾರಗಳ ಮನವಿಗಳನ್ನು ಪರಿಗಣಿಸಬೇಕೆಂದಿಲ್ಲ. ಗುಜರಾತ್ ಚುನಾವಣೆಯ ದಿನಾಂಕ ಘೋಷಣೆ ಮಾಡದೆ ಆಯೋಗ ತನ್ನ ಜವಾಬ್ದಾರಿಯಿಂದ ಜಾರುತ್ತಿದೆ. ಆಯೋಗ ಕೇವಲ ರಾಷ್ಟ್ರಪತಿ ಮತ್ತು ಸರ್ವೋಚ್ಛ ನ್ಯಾಯಾಲಯಕ್ಕೆ ಮಾತ್ರ ಉತ್ತರದಾಯಿತ್ವ ಹೊಂದಿದೆ. ಬಿಜೆಪಿಯ ವಿಷಯಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಬಿಜೆಪಿ ಪರ ನಿಲ್ಲುತ್ತಿರುವುದು ಬಹಿರಂಗಗೊಳ್ಳುತ್ತಿರುವುದು ಆಶ್ಚರ್ಯಕರವಾಗಿದೆ. ಬಿಜೆಪಿ ನೇತೃತ್ವದ ಸರಕಾರವನ್ನು ಉಳಿಸಲು ವಿವಿಧ ಕಸರತ್ತುಗಳನ್ನು ಮಾಡಲಾಗುತ್ತಿದೆ. ವಾಸ್ತವದಲ್ಲಿ ಬಿಜೆಪಿ ಚುನಾವಣೆಯನ್ನು ಎದುರಿಸಲು ಸಿದ್ದವಿಲ್ಲ. ಅಲ್ಲಿಯ ಚುನಾವಣೆಯನ್ನು ಮುಂದೂಡಲು ಪ್ರಧಾನಿ ನರೇಂದ್ರ ಮೋದಿಯವರು ಆಯೋಗಕ್ಕೆ ಪ್ರಭಾವ ಬಳಸಿದ್ದಾರೆ. ಗುಜರಾತಿನ ಜನರು ಮೋದಿ ಮತ್ತು ಅಲ್ಲಿಯ ಬಿಜೆಪಿ ಸರಕಾರದ ವಿರುದ್ಧವಾಗಿದ್ದಾರೆ. ದಲಿತರು, ಪಟೇಲರು ಹಾಗೂ ರೈತರು ಬಿಜೆಪಿಯ ಪರವಾಗಿಲ್ಲದಿರುವುದರಿಂದ ಅಲ್ಲಿ ಬಿಜೆಪಿ ತನ್ನನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಅದಕ್ಕೆ ಈಗಾಗಲೆ ಚುನಾವಣೆಯಲ್ಲಿ ಸೋಲುವ ಭೀತಿ ಉಂಟಾಗಿದೆ. ಅದಕ್ಕಾಗಿ ಬಿಜೆಪಿ ಚುನಾವಣೆಯ ಮುಂದೂಡಿಕೆಯನ್ನು ಬಯಸುತ್ತಿದೆ ಎಂದು ಎಸ್.ಡಿ.ಪಿ.ಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎ.ಸಯೀದ್ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಧನ್ಯವಾದಗಳೊಂದಿಗೆ,
ಇಕ್ಬಾಲ್ ಬೆಳ್ಳಾರೆ
ಜಿಲ್ಲಾ ಮಾದ್ಯಮ ಸಂಯೋಜಕರು
ಎಸ್.ಡಿ.ಪಿ.ಐ ದ.ಕ
ಮೊ: 9611695453