ರಾಜ್ಯದಲ್ಲಿ ಕೊರೊನಾ, ಲಸಿಕೆ ಪೂರೈಕೆ ಸಂಕಟದ ನಡುವೆ ಡಯಾಲಿಸೀಸ್ ರೋಗಿಗಳಿಗೂ ಆತಂಕ ತಂದ ಸರಕಾರ; ಸೇವೆಯಿಂದ ಹಿಂದೆ ಸರಿಯಲು ಬಿ.ಆರ್.ಶೆಟ್ಟಿ ಫೌಂಡೇಶನ್ ನಿರ್ಧಾರ

Source: S O News service | By V. D. Bhatkal | Published on 15th May 2021, 7:04 PM | Coastal News | State News | Special Report |

ಭಟ್ಕಳ: ಸರಿಯಾದ ಪೂರ್ವ ತಯಾರಿ, ವ್ಯವಸ್ಥಿತ ಕಾರ್ಯಯೋಜನೆ ಇಲ್ಲದೇ ಕೊರೊನಾ ಸೋಂಕು ನಿಯಂತ್ರಣ, ಲಸಿಕೆ ಪೂರೈಕೆ ಕೆಲಸ ಕಾರ್ಯಗಳ ನಡುವೆ ಬಿದ್ದು ಒದ್ದಾಡುತ್ತಿರುವ ಸರಕಾರದ ಮತ್ತೊಂದು ನಿರ್ಲಕ್ಷ್ಯತನ, ರಾಜ್ಯದ ಸಾವಿರಾರು ಡಯಾಲಿಸೀಸ್ ರೋಗಿಗಳನ್ನು ಆತಂಕಕ್ಕೆ ನೂಕಿದೆ.

ಕಳೆದ 3-4 ವರ್ಷಗಳಿಂದ ಉತ್ತರಕನ್ನಡವೂ ಸೇರಿದಂತೆ ರಾಜ್ಯದ 23 ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಸೇವೆ ಆರಂಭಿಸಿದ್ದ ಬಿ.ಆರ್.ಶೆಟ್ಟಿ ಫೌಂಡೇಶನ್, ಇದೀಗ ಸರಕಾರದ ನೆರವು ಸಿಗದ ಕಾರಣ ಮೇ.15ರಿಂದಲೇ ತನ್ನ ಸೇವೆಯಿಂದ ಹಿಂದಕ್ಕೆ ಸರಿಯುವುದಾಗಿ ಸರಕಾರಕ್ಕೆ ಪತ್ರ ಬರೆದಿದೆ. ಇದರಿಂದ ಸರಕಾರಿ ಆಸ್ಪತ್ರೆಯಲ್ಲಿನ

ಕಳೆದ 3 ವರ್ಷಗಳ ಡಯಾಸೀಸ್ ಕೆಲಸದ ರು.28ಕೋ. ಹಣ ಇನ್ನೂ ಬಾಕಿ ಇದೆ. ನಮಗೆ ಇನ್ನು ಡಯಾಲಿಸೀಸ್ ಕೇಂದ್ರ ನಡೆಸಲು ಆಗುತ್ತಿಲ್ಲ. ಈ ಬಗ್ಗೆ ಕಳೆದ ಏ.21ರಂದೇ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಇಲ್ಲಿಯವರೆಗೂ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
   - ಕುಶಾಲ್ ಶೆಟ್ಟಿ, ಬಿ.ಆರ್.ಶೆಟ್ಟಿ ಫೌಂಡೇಶನ್‍ನ ಪ್ರಧಾನ ವ್ಯವಸ್ಥಾಪಕರು

ಡಯಾಲಿಸೀಸ್ ಸೇವೆ ತೂಗುಯ್ಯಾಲೆಯಲ್ಲಿ ಸಿಲುಕಿದಂತಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಕಾರ್ಯಕ್ಕೆ ಬಳಸಲಾಗುವ ವಸ್ತುಗಳು ಇನ್ನು 2-3 ದಿನಗಳಲ್ಲಿ ಮುಗಿದು ಹೋಗಲಿದ್ದು, ಅಲ್ಲಿಯವರೆಗೆ ಮಾತ್ರ ಡಯಾಲಿಸೀಸ್ ನಡೆಸುವುದಾಗಿ ಸಿಬ್ಬಂದಿಗಳು ಹೇಳುತ್ತಿದ್ದಾರೆ. ಸರಕಾರ ಮೌನ ಮುಂದುವರೆದರೆ ಮುಂದೇನು ಎನ್ನುವ ಪ್ರಶ್ನೆ ಡಯಾಲಿಸೀಸ್ ರೋಗಿಗಳನ್ನು ಕಾಡಲಾರಂಭಿಸಿದೆ. 

ಏನಿದು ಡಯಾಲಿಸೀಸ್ ಆತಂಕ?
 ರಾಜ್ಯದ ಡಯಾಲಿಸೀಸ್ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರಿ ಆಸ್ಪತ್ರೆಯಲ್ಲಿಯೇ

ನಮಗೆ ಕಳೆದ 2 ತಿಂಗಳುಗಳಿಂದ ಸಂಬಳವನ್ನೇ ನೀಡಿಲ್ಲ. ಡಯಾಲಿಸೀಸ್ ಕೇಂದ್ರದಲ್ಲಿ ವಸ್ತುಗಳು ಇರುವ ತನಕ ಮುಂದುವರೆಸುತ್ತೇವೆ, ನಂತರ ನಿಲ್ಲಿಸದೇ ಬೇರೆ ಮಾರ್ಗ ಇಲ್ಲ.
 - ಡಯಾಲಿಸೀಸ್ ಸೆಂಟರ್‍ನ ಓರ್ವ ಸಿಬ್ಬಂದಿ

ಡಯಾಲಿಸೀಸ್ ಸೇವೆ ಆರಂಭಿಸಲು 2017 ಏಪ್ರಿಲ್‍ನಲ್ಲಿ ಅಂದಿನ ಸರಕಾರ ತೀರ್ಮಾನಿಸಿ ಟೆಂಡರ್ ಕರೆದಿತ್ತು. ಅದರಂತೆ ರಾಜ್ಯದ 23 ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳ ಡಯಾಲಿಸೀಸ್ ಸೇವೆಯ ಹೊಣೆಗಾರಿಯನ್ನು ಬಿ.ಆರ್.ಶೆಟ್ಟಿ ಫೌಂಡೇಶನ್ ಪಡೆದುಕೊಂಡಿತ್ತು. ಇದಕ್ಕಾಗಿ ಫೌಂಡೇಶನ್ ಸರಿಸುಮಾರು 700 ಸಿಬ್ಬಂದಿಗಳನ್ನು ನಿಯೋಜಿಸಿ ಕೆಲಸ ಆರಂಭಿಸಿತ್ತು. ಪ್ರಸಕ್ತವಾಗಿ 3000ಕ್ಕೂ ಅಧಿಕ ಕಿಡ್ನಿ ಸಂಬಂಧಿ ರೋಗಿಗಳು ಇವರದ್ದೇ ಕೇಂದ್ರಗಳಲ್ಲಿ ಡಯಾಲಿಸೀಸ್ ಮಾಡಿಸಿಕೊಳ್ಳುತ್ತಿದ್ದಾರೆ.

ಆದರೆ ಫೌಂಡೇಶನ್ ಪ್ರಮುಖರು ಹೇಳುವ ಪ್ರಕಾರ ಕಳೆದ 3 ವರ್ಷಗಳಿಂದ ಸರಕಾರ ಡಯಾಲಿಸೀಸ್ ಕೆಲಸಕ್ಕೆ ಹಣವನ್ನೇ ನೀಡಿಲ್ಲ. 3 ವರ್ಷಗಳ ಬಾಕಿಯೇ ರು.28 ಕೋ. ದಾಟಿದೆ, ಸಿಬ್ಬಂದಿಗಳ ಮಾಸಿಕ ಸಂಬಳವೇ ರು.1ಕೋ. ತಲುಪಿದ್ದು, ಸರಕಾರದ ನೆರವು ಇಲ್ಲದೇ ಇದ್ದರೆ ತನಗೆ ಡಯಾಲಿಸೀಸ್ ಸೆಂಟರ್‍ನ್ನು ನಡೆಸುವುದೇ ಕಷ್ಟ ಎಂದು ಸಂಸ್ಥೆ ಹೇಳಿಕೊಂಡಿದೆ. ( ಅಲ್ಲದೇ ಸಿಬ್ಬಂದಿಗಳಿಗೆ ಕಳೆದ 2 ತಿಂಗಳುಗಳಿಂದ ಸಂಬಳವನ್ನೇ ನೀಡಿಲ್ಲ ಎಂಬ ಮಾಹಿತಿ ಇದೆ) ಸೇವೆ ಸ್ಥಗಿತಗೊಳಿಸುವುದಾಗಿ ಸಂಸ್ಥೆ ಕಳೆದ ಏ.21ರಂದೇ ಸರಕಾರಕ್ಕೆ ಪತ್ರ ಬರೆದುಕೊಂಡಿದ್ದರೂ, ಸರಕಾರ ಆ ಬಗ್ಗೆ ಬೆನ್ನು ಹಾಕಿ ಕುಳಿತಿದೆ.

ಮಾತ್ರವಲ್ಲ, ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಸರಕಾರದ ವತಿಯಿಂದಲೇ ಮುನ್ನಡೆಸುವ ಬಗ್ಗೆಯೂ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ಏಕಾಏಕಿ ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಸೇವೆ ನಿಂತು ಹೋದರೆ ಖಾಸಗಿ ಆಸ್ಪತ್ರೆಗಳ ದುಬಾರಿ ಡಯಾಲಿಸೀಸ್ ಪಡೆಯಲಾಗದ ಬಡ ರೋಗಿಗಳು ಏನು ಮಾಡಬೇಕು ಎನ್ನುವುದಕ್ಕೆ ಉತ್ತರ ಸಿಗುತ್ತಿಲ್ಲ.

Read These Next

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟಿçÃಯ ಹೆದ್ದಾರಿ 66 ಕ್ಕೆ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ...

ರಾಜ್ಯಾದ್ಯಂತ ಜನತಾ ದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ; ಅಧಿಕಾರಿಗಳ ಕಾರ್ಯಕ್ಷಮತೆಗೆ ಮೆಚ್ಚುಗೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯ ಹಿನ್ನೆಲೆಯಲ್ಲಿ ಮೊಟ್ಟಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲ ಜಿಲ್ಲೆಗಳಲ್ಲಿ ನಡೆದ ...

ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ (AIITA) ರಾಷ್ಟ್ರೀಯ ಶೈಕ್ಷಣಿಕ ಅಭಿಯಾನಕ್ಕೆ ಚಾಲನೆ

ಬೆಂಗಳೂರು:  ಸೆಪ್ಟೆಂಬರ್ 24 ರಿಂದ ಅ.15 ರ ವರೆಗೆ  “ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜ ಪರಿವರ್ತನೆ Enlightening Teachers, Nurturing Talents , Transforming Society ...

ಬಿಜೆಪಿಯ 25 ಮಂದಿ ಸಂಸದರು ದಂಡಪಿಂಡಗಳು. ಕನ್ನಡ ನೆಲ-ಜಲ, ಭಾಷೆ-ಸಂಸ್ಕೃತಿ ವಿಚಾರದಲ್ಲಿ ಜನದ್ರೋಹ ಎಸಗಿದೆ: ಬಿ.ವಿ.ಶ್ರೀನಿವಾಸ್

ಬೆಂಗಳೂರು : ಕನ್ನಡ ನೆಲ-ಜಲ, ಭಾಷೆ-ಸಂಸ್ಕೃತಿ ವಿಚಾರದಲ್ಲಿ ಬಿಜೆಪಿ ನಿರಂತರವಾಗಿ, ಚರಿತ್ರೆಯುದ್ದಕ್ಕೂ ಜನದ್ರೋಹ ಎಸಗುತ್ತಿರುವ ...

ಬಿಜೆಪಿ ಟಿಕೆಟ್ ಕೊಡಿಸುವುದಾಗಿ 185 ಕೋ.ರೂ. ಅವ್ಯವಹಾರ; 17ಕ್ಕೂ ಹೆಚ್ಚು ಮಂದಿಗೆ ವಂಚಿಸಿದ ಚೈತ್ರಾ ಕುಂದಾಪುರ; ಕೆಪಿಸಿಸಿ ಆರೋಪ

ಚೈತ್ರಾ ಕುಂದಾಪುರ ಅವರಿಂದ ಒಟ್ಟು 17ಕ್ಕೊ ಹೆಚ್ಚು ಜನರು ಮೋಸ ಹೋಗಿದ್ದಾರೆ. 23 ಮಂದಿಗೆ ಟಿಕೆಟ್ ಕೊಡಿಸಿ ಅವರಿಂದ ಹಣ ಪಡೆದಿದ್ದಾರೆ. 40 ...

ಬಿಜೆಪಿ ಟಿಕೆಟ್ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣ; ಒಡಿಶಾದಲ್ಲಿ ಹಾಲಶ್ರೀ ಬಂಧನ

ಬಿಜೆಪಿ ಟಿಕೆಟ್ ಹೆಸರಿ ನಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣದ ಆರೋಪಿ ಹೊಸ ಪೇಟೆಯ ಹಿರೇಹಡಗಲಿಯ ಅಭಿನವ ಹಾಲಶ್ರೀ ಮಠದ ಹಾಲವೀರಪ್ಪ ...

ಕಡಲತಡಿಯಲ್ಲಿ ಕಣ್ಮನ ಸೆಳೆಯುತ್ತಿರುವ ಸೀ ವಾಕ್ ಶೃಂಗಾರ; ಭಟ್ಕಳದಲ್ಲಿ ಮಂತ್ರಿಗಳೇ, ಓಡುವುದು ಬೇಡ ನಡೆದಾಡಿ ಬನ್ನಿ

ಕರ್ನಾಟಕಕ್ಕೆ ಕರಾವಳಿ ತೀರ ಎನ್ನುವುದು ಶೃಂಗಾರ ಕಾವ್ಯದಂತಿದೆ. ಕಡಲ ತಡಿಯುದ್ಧಕ್ಕೂ ಸದಾ ಬಣ್ಣ ಬಣ್ಣದ ಕನಸುಗಳು ಚಿಗುರೊಡೆದು ...

ಭಟ್ಕಳ ವಿಧಾನಸಭಾ ಕ್ಷೇತ್ರ; ಜಾತಿ, ಪಕ್ಷಸಿದ್ಧಾಂತ ಬದಿಗಿಟ್ಟು “ಅಭ್ಯರ್ಥಿ” ಗಳ ಬಗ್ಗೆ ಆಸಕ್ತಿ ತೋರುತ್ತಿರುವ ಮತದಾರ

ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ೨೦೧೮ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣೆ ವಿಭಿನ್ನವಾಗಿ ಗೋಚರಿಸುತ್ತಿದೆ. ...

ಆನ್‌ಲೈನ್ ಹಣ ವಂಚನೆ, ಅಶ್ಲೀಲ ಜಾಲತಾಣಗಳ ವಿರುದ್ಧ 3 ವರ್ಷಗಳಲ್ಲಿ 32,746 ಪ್ರಕರಣ ದಾಖಲು

ಹಣ, ಅಶ್ಲೀಲ ಮತ್ತಿತರ ವಿಷಯಗಳ ಜಾಲತಾಣಗಳ ಕುರಿತಂತೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 32,746 ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಇದೇ ...