ವಾಷಿಂಗ್ಟನ್: ಮುಸ್ಲಿಮರೇ ಇಲ್ಲದ ಜಗತ್ತು ಹೇಗಿರುತ್ತಿತ್ತು ?

Source: S O News service | By Staff Correspondent | Published on 23rd July 2016, 10:43 PM | Global News | Special Report | Don't Miss |

 

ಕೃಪೆ: vbnewsonline

ವಾಷಿಂಗ್ಟನ್: ಐಸಿಸ್, ಅಲ್- ಖೈದಾ, ಬೊಕೊ ಹರಾಮ್ ಮತ್ತಿತರ ಉಗ್ರ ಸಂಘಟನೆಗಳು ನಡೆಸಿದ ಭಯೋತ್ಪಾದಕ ಕೃತ್ಯಗಳಿಂದಾಗಿ ಇಡೀ ವಿಶ್ವದಲ್ಲಿ ಇಸ್ಲಮೊಫೊಬಿಯಾ ಅಲೆ ವ್ಯಾಪಕವಾಗಿ ಬೀಸುತ್ತಿದೆ.

ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅ್ಯರ್ಥಿ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಮಂದಿ ಮುಖಂಡರು ಇಡೀ ಸಮುದಾಯವನ್ನು ಹೊರಗಟ್ಟುವಂತೆ ಆಗ್ರಹಿಸುತ್ತಿದ್ದಾರೆ.

ಇತ್ತೀಚೆಗೆ ಟಂಬ್ಲರ್‌ನಲ್ಲಿ ಬಳಕೆದಾರರೊಬ್ಬರು, ಮುಸ್ಲಿಮರಿಲ್ಲದೇ ವಿಶ್ವ ಹೇಗೆ ಕಾಣಿಸಬಹುದು ಎಂದು ಪ್ರಶ್ನಿಸಿದರು. ಪ್ರಚೋದಕ ಅವಳಿ ಗೋಪುರಗಳ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದರು. ಇದಕ್ಕೆ ಬಂದ ಉತ್ತರಗಳು ಅದ್ಭುತ, ಅದು ನಿಮ್ಮ ಮಾನವೀಯತೆ ಬಗೆಗಿನ ನಂಬಿಕೆಯನ್ನು ಪುನರುತ್ಥಾನಗೊಳಿಸುತ್ತದೆ ಎನ್ನುವುದಾಗಿತ್ತು.

ಹೌದು, ಮುಸ್ಲಿಮರಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಿ. ಸಾಧ್ಯವೇ?

ಮುಸ್ಲಿಮರಿಲ್ಲದಿದ್ದರೆ ಈ ಕೆಳಗಿನ ಯಾವುದೂ ನಿಮಗೆ ಇರುತ್ತಿರಲಿಲ್ಲ.

ಕಾಫಿ, ಕ್ಯಾಮೆರಾ, ಪ್ರಾಯೋಗಿಕ ಭೌತಶಾಸ್ತ್ರ, ಚೆಸ್, ಸೋಪು, ಶ್ಯಾಂಪೂ, ಸುಗಂಧ ದ್ರವ್ಯ/ ಸ್ಪಿರಿಟ್, ನೀರಾವರಿ, ಕ್ರಾಂಕ್ ಶಾಪ್ಟ್, ವೇಗನ್, ಕಂಬಶ್ಚನ್ ಇಂಜಿನ್, ವಾಲ್ವ್, ಪಿಸ್ಟನ್, ಬೀಗ, ವಾಸ್ತುಶಿಲ್ಪಅನುಶೋಧನೆಗಳು, ಶಸ್ತ್ರಚಿಕಿತ್ಸಾ ಸಾಧನಗಳು, ಅನಸ್ತೇಶಿಯಾ, ಗಾಳಿ ವಿದ್ಯುತ್ ಯಂತ್ರ, ಸಿಡುಬು ಚಿಕಿತ್ಸೆ, ಪೌಂಟೇನ್ ಪೆನ್, ಸಂಖ್ಯಾ ಪದ್ಧತಿ, ಅಂಕ ಗಣಿತ, ಟ್ರಿಗ್ನಾಮೆಟ್ರಿ, ಆಧುನಿಕ ಕ್ರಿಪ್ಟಾಲಜಿ, 3 ಕೋರ್ಸ್ ಊಟ, ಕ್ರಿಸ್ಟಲ್ ಗ್ಲಾಸ್, ಕಂಬಳಿ, ಚೆಕ್, ಉದ್ಯಾನವನ, ವಿಶ್ವವಿದ್ಯಾನಿಲಯ, ಆಪ್ಟಿಕ್ಸ್, ಸಂಗೀತ, ಟೂಥ್‌ಬ್ರಷ್, ಆಸ್ಪತ್ರೆ, ಸ್ನಾನ, ಕಾಂಪಸ್, ಲಘು ಪಾನೀಯ, ಪೆಂಡ್ಯುಲಂ, ಬ್ರೈಲ್, ಸೌಂದರ್ಯಸಾಧನ, ಪ್ಲಾಸ್ಟಿಕ್ ಸರ್ಜರಿ, ಕಾಗದ ಹಾಗೂ ಬಟ್ಟೆ ಉತ್ಪಾದನೆ.

ಬೆಳಕು ನಮ್ಮ ಕಣ್ಣುಗಳನ್ನು ಪ್ರವೇಶಿಸುತ್ತದೆ ಎನ್ನುವುದನ್ನು ಕಂಡುಹಿಡಿದದ್ದು ಮುಸ್ಲಿಮರು. ಇದಕ್ಕೂ ಮುನ್ನ ಗ್ರೀಕರು, ನಾವು ಬೆಳಕನ್ನು ಹೊರಸೂಸುತ್ತೇವೆ ಎಂದು ಬೋಧಿಸುತ್ತಿದ್ದರು. ಇದರಿಂದ ಕ್ಯಾಮೆರಾ ಶೋಧಿಸಲಾಯಿತು.

ವಿಮಾನ ಶೋಧಿಸಿದ ಹೆಗ್ಗಳಿಕೆ ರೈಟ್ ಸಹೋದರರದ್ದಾದರೂ, ಮೊಟ್ಟಮೊದಲು ಹಾರಲು ಯತ್ನಿಸಿದ ವ್ಯಕ್ತಿ ಮುಸ್ಲಿಂ. ಆಧುನಿಕ ರಸಾಯನಶಾಸ್ತ್ರದ ಜನಕ ಜಬೀರ್ ಬಿನ್ ಹಯ್ಯಿನ್. ಅಲ್-ಜರಝಾರಿ ಎಂಬ ವ್ಯಕ್ತಿ ಆಧುನಿಕ ರೋಬೊಟಿಕ್ಸ್ ಜನಕ. ಹೆನ್ರಿ ವಿಎಸ್ ಕ್ಯಾಸಲ್‌ಗೆ ವಾಸ್ತುಶಿಲ್ಪಿ ಒಬ್ಬ ಮುಸ್ಲಿಂ. ಕಣ್ಣಿನಿಂದ ಕ್ಯಾಟರ್ಯಾಕ್ಟ್ ಪೊರೆ ಹರಿಯಲು ಸೂಜಿ ಕಂಡು ಹಿಡಿದದ್ದು ಮುಸ್ಲಿಂ. ಇದು ಇಂದಿಗೂ ಬಳಕೆಯಲ್ಲಿದೆ. ಪಟ್ಟಿ ಹೀಗೆಯೇ ಮುಂದುವರಿಯುತ್ತದೆ...

ಯಾರೊ ಕೆಲವರು ಅಜ್ಞಾನಿಗಳು ಮತ್ತು ಮತೀಯವಾದಿಗಳ ಕೃತ್ಯಕ್ಕೆ ಇಡೀ ಸಮುದಾಯವನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ತಿಮ್ಮೋತಿ ಮೆಕ್ವೀಗ್ ಕೃತ್ಯಕ್ಕೆ (ಒಕ್ಲಹಾಮಾ ಬಾಂಬ್), ನಾರ್ವೆ ಹತ್ಯಾಕಾಂಡದ ಆಂಡ್ರಿಸ್ ಬ್ರೆವಿಕ್ ಕೃತ್ಯಕ್ಕೆ ಯಾರೂ ಇಡೀ ಕ್ರೈಸ್ತ ಸಮುದಾಯವನ್ನು ಅಥವಾ ಬಿಳಿಯರನ್ನು ಬೆಟ್ಟು ಮಾಡುವುದಿಲ್ಲ. ಅಂತೆಯೇ 150 ಕೋಟಿ ಮುಸ್ಲಿಮರು ಕೂಡಾ ಇಂಥ ಕೃತ್ಯಕ್ಕೆ ಯಾವ ರೀತಿಯಲ್ಲೂ ಹೊಣೆಗಾರರಲ್ಲ.

Courtesy : blogs.timesofindia.indiatimes.com

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...