ಕೋಲಾರ: ಜು.18 ರಂದು ಕೆಂಪೇಗೌಡರ 508 ನೇ ಜಯಂತೋತ್ಸವ
ಕೋಲಾರ, ಜುಲೈ 14 :ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ 508 ನೇ ಜಯಂತೋತ್ಸವವನ್ನು ಜು.18 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಆರ್.ರಮೇಶ್ ಕುಮಾರ್ ಅವರು ಉದ್ಘಾಟಿಸಲಿದ್ದು ಶಾಸಕರಾದ ವರ್ತೂರು ಆರ್.ಪ್ರಕಾಶ್ ಅವರು ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಕೆ.ಹೆಚ್.ಮುನಿಯಪ್ಪ ಅವರು ಘನ ಉಪಸ್ಥಿತಿ ವಹಿಸುವರು.
ಅರ್ಜಿ ಸಲ್ಲಿಕೆ ಅವದಿ ವಿಸ್ತರಣೆ
ಕೋಲಾರ, ಜುಲೈ 14:ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಸಲು ಈ ಹಿಂದೆ ಇದ್ದ ಕೊನೆಯ ದಿನಾಂಕ 30-06-2017 ನ್ನು 20-08-2017 ರ ವರೆಗೆ ವಿಸ್ತರಿಸಲಾಗಿದೆ ಹಾಗೂ ಮೆಟ್ರಿಕ್ ಪೂರ್ವ ನವೀಕರಣ ವಿದ್ಯಾರ್ಥಿಗಳ ಮಾಹಿತಿಗಳನ್ನು ಹಿಂದುಳಿದ ವರ್ಗಗಳ ಅದಿಕಾರಿಗಳು ಅಪ್ ಲೋಡ್ ಮಾಡುವ ಅಂತಿಮ ದಿನಾಂಕವನ್ನು 25-07-2017 ರವರೆಗೆ ವಿಸ್ತರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಯಂಸೇವಾ ಸಂಸ್ಥೆಗಳಿಂದ ಪ್ರಸ್ತಾವನೆ ಆಹ್ವಾನ
ಕೋಲಾರ, ಜುಲೈ 14 :ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಅನುಷ್ಟಾನಗೊಳಿಸುತ್ತಿರುವ ಕೇಂದ್ರಪುರಸ್ಕ್ರತ ರಾಜೀವ್ಗಾಂದಿ ಪ್ರಾಯಪೂರ್ವ ಬಾಲಕಿಯರ ಸಬಲೀಕರಣ ಯೋಜನೆಯಡಿ ಪೌಷ್ಟಿಕೇತರ ಅಂಶಗಳ ಭಾಗವಾಗಿ 11-18 ವಯೋಮಾನದ ಕಿಶೋರಿಯರಿಗೆ ಜೀವನ ಕೌಶಲ್ಯ ಮತ್ತು ವೃತ್ತಿಕೌಶಲ್ಯ ತರಬೇತಿ ಕಾರ್ಯಕ್ರಮ ಅನುಷ್ಠಾನಗೊಳಿಸುವುದರ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿಯಿರುವ ಸ್ವಯಂ ಸೇವಾ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.
ಆಸಕ್ತ ಸಂಸ್ಥೆಗಳು ಸಂಸ್ಥೆಯ ನೋಂದಣ ವಿವರ, ನವೀಕರಣ ಪ್ರಮಾಣ ಪತ್ರ, ಬೈಲಾ ಪ್ರತಿ, ಆಡಳಿತ ಮಂಡಳಿಯ ಸದಸ್ಯರ ಮಾಹಿತಿ, 12ಎಎ ಮತ್ತು 80ಜಿ ಪ್ರಮಾಣ ಪತ್ರ, ಪ್ಯಾನ್, ಮತ್ತು ಟ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ, ನೀತಿ ಆಯೋಗದಡಿ ನೊದಣ ಯಾದ ಪ್ರತಿ, 3 ವರ್ಷದ ವಾರ್ಷಿಕ ವರದಿ, ಆಡಿಟ್ ವರದಿ, ಆರ್ಥಿಕ ಸ್ಥಿತಿ ಮತ್ತು ವಹಿವಾಟು, ಬ್ಯಾಂಕ್ ಖಾತೆಯ ಪಾಸ್ ಪುಸ್ತಕ ಮತ್ತು ಇತ್ತೀಚಿನ ಶುಲ್ಕದ ಮಾಹಿತಿ, ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳ ಮತ್ತು ಕೌಶಲ್ಯ ತರಬೇತಿದಾರರ ಮಾಹಿತಿ, ಸಂಸ್ಥೆಯ ಕಟ್ಟಡ ಸಂಪನ್ಮೂಲದ ವಿವರ ಮತ್ತು ಭಾವ ಚಿತ್ರಗಳು, ಕ್ಷೇತ್ರದಲ್ಲಿ ನಿರ್ವಹಿಸಿದ ಚಟುವಟಿಕೆಗಳು ಮತ್ತು ತರಬೇತಿ ನೀಡಿದ ಅನುಭವದ ದೃಡೀಕರಣ ಪ್ರತಿ ಮತ್ತು ಇತರೆ ಇಲಾಖೆಗಳ ಸಹಯೋಗದೊಂದಿಗೆ ನಿರ್ವಹಿಸಿದ ಸರ್ಕಾರಿ ಯೋಜನೆಗಳು/ ಕಾರ್ಯಕ್ರಮಗಳ ವಿವರಗಳೊಂದಿಗೆ ತಮ್ಮ ಪ್ರಸ್ತಾವನೆಗಳನ್ನು ದಿನಾಂಕ 31-07-2017 ರೊಳಗೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ನ್ಯೂ ಕೋಲಾರ ನರ್ಸಿಗ್ ಹೋಂ ಕಟ್ಟಡ, ಕೋಲಾರ ವಿಳಾಸಕ್ಕೆ ಸಲ್ಲಿಸುವುದು. ಹೆಚ್ಚಿನ ವಿವರಗಳಿಗಾಗಿ ದೂರವಾಣ ಸಂಖ್ಯೆ 08152-222753 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೋಲಾರ: ಜು.17 ರಂದು ಎತ್ತಿನ ಹೊಳೆ ಯೋಜನೆ ಕಾರ್ಯಪ್ರಗತಿ ಸಭೆ
ಕೋಲಾರ, ಜುಲೈ 14: ಎತ್ತಿನ ಹೊಳೆ ಯೋಜನೆಯ ಕಾರ್ಯಪ್ರಗತಿ ಮತ್ತಿತರ ಸಂಬಂಧಿತ ವಿಷಯಗಳ ಅಭಿವೃದ್ಧಿ ಕುರಿತು ಸಾರ್ವಜನಿಕರ ಗಮನಕ್ಕೆ ತರುವ ಉದ್ದೇಶದಿಂದ ಜು.17 ರಂದು ಮಧ್ಯಾಹ್ನ 03 ಗಂಟೆಗೆ ಕೋಲಾರದ ಗೋಕುಲ್ ಕಲ್ಯಾಣ ಮಂಟಪದಲ್ಲಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿದೆ.