ಕೋಲಾರ ಆ.29: ಪ್ರಾಥಮಿಕ ಶಾಲೆಯ ಹಂತದಿಂದ ಉನ್ನತ ಶಿಕ್ಷಣ ಹಂತದವರೆಗೂ ವೃತ್ತಿ ಶಿಕ್ಷಣ ಇದ್ದು, ಅದನ್ನು ಉಪಯೋಗಿಸಿಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕೆಂದು ವೃತ್ತಿ ಶಿಕ್ಷಕರಾದ ಜಿ.ಟಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಅವರು ಇಂದು ಉನ್ನತೀಕರಿಸಿದ ಮಾದ್ಯಮ ಶಾಲೆ ಕ್ಯಾಸಂಬಳ್ಳಿಯ ಶಾಲೆಯಲ್ಲಿ ವೃತ್ತಿ ಶಿಕ್ಷಣ ಜಾನಪದ ಸೊಗಡು ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ವೃತ್ತಿಪರ ಶಿಕ್ಷಣವನ್ನು ವಿದ್ಯಾರ್ಥಿಗಳು ಮನೆಯ ಮುಖಾಂತರವೇ ಶಿಕ್ಷಣ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಇರುವಂತಹ ಸೌಲಭ್ಯಗಳನ್ನು ಪಡೆದುಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕೆಂದರು. ಸರ್ಕಾರದ ಅನೇಕ ಯೋಜನೆಗಳಲ್ಲಿ ಬ್ಯಾಂಕ್ಗಳ ಮೂಲಕ ವೈದ್ಯಕೀಯ, ಶಿಕ್ಷಣ, ಇಂಜಿನಿಯರ್ ಶಿಕ್ಷಣದಲ್ಲಿಯೂ ಕೂಡ ಇದು ತುಂಬಾ ಅವಶ್ಯಕತೆಯಿದ್ದು, ಮಕ್ಕಳು ಇದನ್ನೂ ಕೂಡ ಸದುಪಯೋಗಪಡಿಸಿಕೊಳ್ಳಬೇಕೆಂದು, ಹಾಗೆಯೇ ವಿದ್ಯಾರ್ಥಿಗಳ ಮುಂದೆ ಸೋಪು, ಪ್ಲವರ್ ಡಿಟರ್ಜೆಂಟ್, ಪೇಸ್ಟ್, ಪೇಪರ್ ಕಟ್ಟಿಂಗ್ಗಳ ಮೂಲಕ ಅನೇಕ ರೇಖಾಚಿತ್ರಗಳನ್ನು ಹೇಗೆ ತಯಾರಿಸಬೇಕೆಂದು ಪ್ರಯೋಗಿಕವಾಗಿ ತಿಳಿಸಿಕೊಟ್ಟರು.
ಕವಿ ಶರಣಪ್ಪ ಮಾತನಾಡಿ ಜನಪದ ಸೊಗಡನ್ನು ಕುರಿತು ಉಪನ್ಯಾಸ ನೀಡುತ್ತ ಈ ಗಡಿನಾಡಲ್ಲಿ ಜಾನಪದ ಸೊಗಡು ಕಣ್ಮರೆಯಾಗುತ್ತಿರುವುದು ಕಲೆಗಳನ್ನು ಉಳಿಸಿಕೊಳ್ಳಲು ಯುವಕರು ಮುಂದಾಗಬೇಕೆಂದು ಕಲಾಭಿಮಾನಿಗಳು ಸಂಸ್ಕøತಿಕ ಪರಂಪರೆಗೆ ಹೆಚ್ಚು ಒತ್ತು ನೀಡಬೇಕು ಅಂದಾಗ ಮಾತ್ರ ನಮ್ಮ ಜನಪದ ಕಲೆಗಳು ಉಳಿಯಲು ಸಾಧ್ಯವೆಂದರು. ಜಾನಪದ ಸೊಗಡಿನ ಕಲೆಗಳಾದ ಬೊಂಬೆಕುಣ ತ, ಕೀಲುಕುದುರೆ, ವೀರಗಾಸೆ, ನಂದಿಧ್ವಜ, ಕರಡಿಕುಣ ತ, ಡೋಲು, ಜಾನಪದ ನೃತ್ಯ, ಕೋಲಟ ಹೀಗೆ ಇನ್ನೂ ಹಲವಾರು ಜನಪದ ಕಲೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಇಂತಹ ಕಲೆಗಳ ಆಧುನಿಕತೆಗೆ ಸಿಲುಕಿ ವಿನಾಶದ ಅಂಚಿನಲ್ಲಿ ಸಾಗುತ್ತಿದೆ ಎಂದು ವಿಚಾರ ವ್ಯಕ್ತಪಡಿಸುತ್ತಾ ಇಂದಿನ ಯುವ ಜನಾಂಗ ಈ ನೆಲಮೂಲ ಸಂಸ್ಕøತಿಯನ್ನು ಉಳಿಸಿಕೊಳ್ಳಲು ಪ್ರಮಾಣ ಕ ಪ್ರಯತ್ನ ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀನಿವಾಸ್ ರವರು ಶಾಲಾ ಹಂತದಲ್ಲಿ ಇಂತಹ ಜ್ಞಾನ, ಶಿಕ್ಷಣ, ಮಕ್ಕಳಿಗೆ ಅವಶ್ಯಕ ಹಾಗಾಗಿ ಇಂತಹ ತರಬೇತಿಗಳು ಅನಿವಾರ್ಯವೆಂದರು. ಇವುಗಳು ಪೂರ್ವಿಕರ ಕೊಡುಗೆ ಅದನ್ನು ಹೃದಯದಲ್ಲಿ ಕಾಪಾಡಬೇಕು. ಬಹಳಷ್ಟು ಕಲಾವಿದರು ಇದರ ಕಡೆ ಹೆಚ್ಚು ಗಮನಹರಿಸಬೇಕೆಂದು ತಿಳಿಸಿದರು. ಪ್ರಸ್ತುತ ಸಂದರ್ಭದಲ್ಲಿ ಅನೇಕ ಕಲೆಗಳನ್ನು ಮಕ್ಕಳು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸದಸ್ಯರು, ಪೋಷಕರು ಭಾಗವಹಿಸಿದ್ದರು.
(ಶರಣಪ್ಪ ಗಬ್ಬೂರ್)
ಕೋಲಾರ.
ಮೊ.:9902416040
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.