ಕೋಲಾರ,ಆ.20: ಶ್ರಾವಣ ಮಾಸದ ಕಡೇ ಶನಿವಾರ ಅಂಗವಾಗಿ ತಾಲೂಕಿನ ಯಾನಾದಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಭೂನೀಳ ಸಮೇತ ಲಕ್ಷ್ಮೀ ವೆಂಕಟರವಣಸ್ವಾಮಿ ದೇವಸ್ಥಾನದಲ್ಲಿ ಪಂಚಾಮೃತಾಭಿಷೇಕ, ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಂಜೆ ಭೂನೀಳ ಸಮೇತ ಲಕ್ಷ್ಮೀ ವೆಂಕಟರವಣಸ್ವಾಮಿಯ ಉಯ್ಯಾಲೋತ್ಸವ, ರಾತ್ರಿ ಭೂನೀಳ ಸಮೇತ ಲಕ್ಷ್ಮೀ ವೆಂಕಟರವಣಸ್ವಾಮಿ, ಆಂಜನೇಯಸ್ವಾಮಿ, ಗ್ರಾಮ ದೇವತೆ ಸತ್ಯಮ್ಮ ದೇವರುಗಳ ಮೆರವಣಿಗೆಯನ್ನು ಗ್ರಾಮದ ಬೀದಿಗಳಲ್ಲಿ ಸಂಚರಿಸುವ ಮೂಲಕ ವಿಜೃಂಭಣೆಯಿಂದ ನರವೇರಿತು.
ಕಾರ್ಯಕ್ರಮದಲ್ಲಿ ಪುರೋಹಿತರಾದ ನರಸಿಂಹಚಾರ್, ರಾಘವೇಂದ್ರ, ಗ್ರಾಮದ ಮುಖಂಡರಾದ ಎ.ಎಂ.ವೆಂಕಟೇಶಯ್ಯ, ಗ್ರಾಮ ಪಂಚಾಯತಿ ಸದಸ್ಯ ಎನ್.ವೆಂಕಟೇಶ್, ಎನ್.ಶಂಕರಪ್ಪ, ಸಿ.ಬಿ.ವೆಂಕಟೇಶಪ್ಪ, ಕೆ.ಆರ್.ರಾಮಣ್ಣ, ವೆಂಕಟರಾಮಪ್ಪ, ಬ್ಯಾಂಕ್ ಹರಿ, ಮನೋಹರ್, ವೈ.ಎ.ಮಂಜುನಾಥ್, ಬೈಚೇಗೌಡ, ಸೀನಪ್ಪ, ಚಂದ್ರಾಚಾರಿ, ವೆಂಕಟೇಶ್, ಶ್ರೀರಾಮ, ಮಂಜುನಾಥ್ ಗ್ರಾಮದ ಎಲ್ಲಾ ಹಿರಿಯರು, ಕಿರಿಯರು ಉಪಸ್ಥಿತರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ