ತಂಝೀಮ್ ಸಂಸ್ಥೆಗೆ ಅಚಿವರ್ಸ್ ಆಫ್ ಕರ್ನಾಟಕ ಅವಾರ್ಡ್
ಭಟ್ಕಳ: ಬೆಂಗಳೂರಿನಲ್ಲಿ ವಿಜಯ್ ಕರ್ನಾಟಕ ಆಯೋಜಿಸಿದ್ದ ಭಟ್ಕಳದ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಬಲ ಸಾಮಾಜಿಕ-ರಾಜಕೀಯ ಸಂಸ್ಥೆ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಗೆ ಬುಧವಾರ ಬೆಂಗಳೂರಿನ ಹೋಟೆಲ್ ಶಾಂಗ್ರೀಲಾದಲ್ಲಿ ಕರ್ನಾಟಕದ ಪ್ರತಿಷ್ಠಿತ 'ಅಚೀವರ್ಸ್ ಆಫ್ ಕರ್ನಾಟಕ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
'ದಿ ಟೈಮ್ಸ್ ಗ್ರೂಪ್'ನ ವಿಜಯ್ ಕರ್ನಾಟಕವು ಉತ್ತರ ಕರ್ನಾಟಕಕ್ಕೆ ಅವರ ಅಸಾಧಾರಣ ಮತ್ತು ಅತ್ಯುತ್ತಮ ಕೊಡುಗೆಗಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಲು ಮತ್ತು ಗೌರವಿಸುವ ಒಂದು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಉತ್ತರ ಕರ್ನಾಟಕದಿಂದ 39 ಸಂಘಟನೆಗಳನ್ನು ಅತ್ಯುತ್ತಮ ಸಾಮಾಜಿಕ ಸೇವೆಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಇನಾಯತುಲ್ಲಾ ಶಬಂದರಿ, ಪ್ರಧಾನ ಕಾರ್ಯದರ್ಶಿ ಮೊಹಿಯುದ್ದೀನ್ ಅಲ್ತಾಫ್ ಖರೂರಿ, ಉಪಾಧ್ಯಕ್ಷ ಮೊಹತಿಶಂ ಜಾಫರ್, ಆಡಳಿತಾತ್ಮಕ ಕಾರ್ಯದರ್ಶಿ ಮೌಲಾನಾ ಯಾಸಿರ್ ಬರ್ಮಾವರ್ ಮತ್ತು ಅಷ್ಫಾಕ್ ಕೆಎಂ ಉಪಸ್ಥಿತರಿದ್ದು ಕರ್ನಾಟಕದ ಉಪಮುಖ್ಯಮಂತ್ರಿ ಡಾ.ಪರಮೇಶ್ವರ ಅವರಿಂದ ಈ ಪ್ರಶಸ್ತಿಯನ್ನು ಪಡೆದರು.