ಶಾಲೆಯಲ್ಲಿ ತ್ರಿಶೂಲ ದೀಕ್ಷೆ, ಗನ್ ತರಬೇತಿಗೆ ಅನುಮತಿ ಕೊಟ್ಟವರು ಯಾರು? ಕಾಂಗ್ರೆಸ್
ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ, ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಶಾಲೆಯಲ್ಲಿ ತ್ರಿಶೂಲ ದೀಕ್ಷೆ, ಗನ್ ತರಬೇತಿ ನೀಡಿದ್ದು ಯಾರು? ಯಾವ ಸಂಘಟನೆ? ಅದಕ್ಕೆ ಅನುಮತಿ ಕೊಟ್ಟವರು ಯಾರು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಖಾರವಾಗಿ ಪ್ರಶ್ನಿಸಿದೆ.
ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶಾಲಾ ಆವರಣದಲ್ಲಿ ತ್ರಿಶೂಲ ದೀಕ್ಷೆ ಹಾಗೂ ನಿರ್ಜನ ಪ್ರದೇಶದಲ್ಲಿ ಬಂದೂಕು ತರಬೇತಿ ನೀಡಿರುವ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.
ಈದು ಆರ್ಮ್ಸ್ ಆ್ಯಕ್ಟ್ ಉಲ್ಲಂಘನೆಯಲ್ಲವೇ? ಬಜರಂಗದಳ ಸದಸ್ಯರು ಏಕೆ ಬಂದೂಕು ತರಬೇತಿ ಪಡೆಯುತ್ತಿದ್ದಾರೆ? ಸರಿಯಾದ ಪರವಾನಿಗೆ ಇಲ್ಲದೆ ಬಂದೂಕು ತರಬೇತಿ ಅಪ್ರಾದವಲ್ಲವೆ ?
ಇದು ಆರ್ಮ್ಸ್ ಎಕ್ಟ್-1959, ಉಲ್ಲಂಘನೆಯಲ್ಲವೇ? ಮತ್ತು ಏಕೆ ಬಿಜೆಪಿ ನಾಯಕರು ಅದರಲ್ಲಿ ಬಹಿರಂಗವಾಗಿ ಭಾಗವಹಿಸಿದ್ದರು ಮತ್ತು ಅವರು ಈ ಚಟುವಟಿಕೆಯನ್ನು ಬೆಂಬಲಿಸುತ್ತಾರೆಯೇ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.