ದಾಂಡೇಲಿಯ ಅಂಬೇವಾಡಿ ಸಮೀಪ ಕಾರು ಡಿಕ್ಕಿಯಾಗಿ ಎರಡು ಜಿಂಕೆಗಳು ಸಾವು

Source: so news | Published on 5th October 2019, 7:02 AM | Coastal News | Don't Miss |

 

 

 


ಕಾರವಾರ:ದಾಂಡೇಲಿಯ ಅಂಬೇವಾಡಿ ರೈಲ್ವೆ ಗೇಟ್ ಬಳಿ ಶುಕ್ರವಾರ ಬೆನ್ನತ್ತಿ ಬಂದ ನಾಯಿಗಳಿಂದ ತಪ್ಪಿಸಿಕೊಂಡ ಎರಡು ಜಿಂಕೆಗಳು ಕಾರು ಡಿಕ್ಕಿಯಾಗಿ ಮೃತಪಟ್ಟಿವೆ. 
ಒಂದು ಜಿಂಕೆ ಕಾರಿನ ಕೆಳಗೆ ಬಿದ್ದು ಸತ್ತರೆ, ಮತ್ತೊಂದು ಅದನ್ನು ನೋಡಿ ಹೃದಯಾಘಾತವಾಗಿ ಪ್ರಾಣಬಿಟ್ಟಿತು. ಈ ಸಂಬಂಧ ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ್ ಮುಲ್ಲಾ ಪ್ರಯಾಣಿಸುತ್ತಿದ್ದ ಬಾಡಿಗೆ ಕಾರಿನ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. 
ಅಂಬೇವಾಡಿ ಸಮೀಪ ಇಳಿಜಾರಿನಲ್ಲಿ ಜಿಂಕೆಗಳನ್ನು ನಾಯಿಗಳ ಹಿಂಡು ಅಟ್ಟಿಸಿಕೊಂಡು ಬಂದಿತ್ತು. ಅವುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಜಿಂಕೆಗಳು ಏಕಾಏಕಿ ರಸ್ತೆಗೆ ಧಾವಿಸಿದವು. ಆಗ ಒಂದು ಜಿಂಕೆಗೆ ಕಾರು ಡಿಕ್ಕಿಯಾಯಿತು. ಜಿಂಕೆಯ ಹೃದಯ ಅತ್ಯಂತ ಸೂಕ್ಷ್ಮವಾಗಿರುತ್ತದೆ. ತನ್ನ ಜೊತೆಗಿದ್ದ ಜಿಂಕೆ ಮೃತಪಟ್ಟಿದ್ದನ್ನು ನೋಡಿದ ಮತ್ತೊಂದಕ್ಕೆ ಹೃದಯಾಘಾತವಾಯಿತು’ಎಂದು ದಾಂಡೇಲಿಯ ವಲಯ ಅರಣ್ಯಾಧಿಕಾರಿ ಅಶೋಕ್ ಮಾಹಿತಿ ನೀಡಿದರು.
ಎರಡೂ ಜಿಂಕೆಗಳಿಗೆ ಸುಮಾರು ಎರಡು ವರ್ಷ ಪ್ರಾಯ ಇರಬಹುದು. ಅವುಗಳ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕಾರು ಚಾಲಕ ಸಂಜೀವಕುಮಾರ್‌ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದೂ ತಿಳಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...