ಕಾರವಾರ: ನಗರದ ಬೈತಖೋಲ್ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನ ಟರ್ಮಿನಲ್ ಆಶ್ರಯದಲ್ಲಿ ಸಂರಕ್ಷಣಾ ಕ್ಷಮತಾ ಮಹೋತ್ಸವದ ಅಂಗವಾಗಿ ರವಿವಾರ ಬೆಳಿಗ್ಗೆ ಕಾರವಾರ ನಗರದಲ್ಲಿ ಸೈಕೋಥಾನ್ ನಡೆಯಿತು.
ಕಾರವಾರ ಪೊಲೀಸ್ ಉಪಾಧೀಕ್ಷಕ ಅರವಿಂದ ಕಲಗುಜ್ಜಿ ಸೈಕ್ಲೋಥಾನ್ಗೆ ಚಾಲನೆ ನೀಡಿದರು. ನಗರದ ಮಾಲಾದೇವಿ ಕ್ರೀಡಾಂಗಣದಿಂದ ನಗರದ ಸವಿತಾ, ಸುಭಾಷ ಮತ್ತು ಬಿಲ್ಡ್ ಸರ್ಕಲ್, ಸಾಗಿ ಕಾಜುಬಾಗ ರಸ್ತೆ ಮೂಲಕ ಪುನಃ ಮಾಲಾದೇವಿ ಮೈದಾನಕ್ಕೆ ಸೈಕಲ್ ಪಟುಗಳು ವಾಪಸ್ಸಾದರು. ಸುಮಾರು 250 ರಷ್ಟು ಜನರು ಸೈಕ್ಲಾಥಾನಲ್ಲಿ ಪಾಲ್ಗೊಂಡಿದ್ದರು.
ಪೆಟ್ರೋಲಿಯಂ ಉತ್ಪನ್ನಗಳು ವ್ಯರ್ಥವಾಗದಂತೆ ತಡೆಯುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪತ್ರಕರ್ತರು, ವಿದ್ಯಾರ್ಥಿಗಳು, ಯುವಕ-ಯವತಿಯವರು ಸೈಕಲ್ ತುಳಿಯುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎನ್. ಬಗಲಿ, ಐಓಸಿಯ ಚೀಪ್ ಟರ್ಮಿನಲ್ ಮ್ಯಾನೇಜರ್ ಶಕೀಲ್ ಅಝೀರ್, ಇನ್ಸ್ಪಿಸ್ತೂಶನಲ್ ಬುಸಿನೆಸ್ ಮ್ಯಾನೇಜರ್ ಶಂಕರ ಸುಬ್ಬಯ್ಯ, ಉತ್ತರ ಕನ್ನಡ ಸಹಾಯಕ ಮ್ಯಾನೇಜರ್ ಅಶೋಕ್ ಕುಮಾರ್ ಉಪಸ್ಥಿತರಿದ್ದರು.