ಬೆಂಗಳೂರು: ಕಳೆದ ೧೪ ತಿಂಗಳ ಹಿಂದೆ ರಚನೆಗೊಂಡ ಜೆ.ಡಿ.ಎಸ್. ಮತ್ತು ಕಾಂಗ್ರೇಸ್ ಮೈತ್ರಿ ಸರ್ಕಾರ ಕೊನೆಗೂ ಮಂಗಳವಾರ ಅಲ್ಪಮತಕ್ಕೆ ಕುಸಿಯುವ ಮೂಲಕ ಪತನಗೊಂಡಿತು.
ಪರಸ್ಪರ ಒಳಜಗಳ, ಆಪರೇಶನ್ ಕಮಲದ ದಾಳಕ್ಕೆ ಸಿಲುಕಿ ಅತೃಪ್ತ ೨೦ಶಾಸಕರು ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ವಿಧಾನಸಸಭೆಯಲ್ಲಿ ಗೈರುಹಾಜರಾದ ಕಾರಣ ಅಲ್ಪಮತಕ್ಕೆ ಕುಸಿದ ಸರ್ಕಾರ ಪತನಗೊಂಡ ಹಿನ್ನೆಲೆಯಲ್ಲಿ ೨೦೫ ಸದಸ್ಯಬಲ ಹೊಂದಿದ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಚಾಲನೆ ದೊರೆತಂತಾಗಿದೆ.
ಇಡೀ ದೇಶದ ಗಮನ ಸೆಳೆದಿದ್ದ ಮೈತ್ರಿ ಸರ್ಕಾರ ಆರಂಭದಿಂದಲೂ ವಿಘ್ಞಗಳಲ್ಲೆ ಬಿದ್ದು ಒದ್ದಾಡುತ್ತಿದ್ದು ಮ್ಯಾಜಿಕ್ ನಂಬರ್ ೧೦೩ ಬಲ ಹೊಂದದೆ ವಿಫಲಗೊಂಡಿದೆ. ಮೈತ್ರಿ ಸರ್ಕಾರದ ಪರ ೯೯ಮತಗಳ ಚಲಾವಣೆಗೊಂಡರೆ, ಸರ್ಕಾರದ ವಿರುದ್ಧ ೧೦೫ ಮತಗಳ ಚಲಾವಣೆಗೊಂಡವು.