ಬಿಬಿಸಿ ನಿಷೇಧಿಸುವಂತೆ ಕೋರುವ ಅರ್ಜಿ ವಜಾಗೊಳಿಸಿದ ಸುಪ್ರೀಂ
ಹೊಸದಿಲ್ಲಿ: 2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದಾರೆನ್ನಲಾದ ಪಾತ್ರದ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿರುವುದಕ್ಕಾಗಿ ಬಿಬಿಸಿಯನ್ನು ಭಾರತದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೋರುವ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಹಿಂದೂ ಸೇನಾ ಎಂಬ ಸಂಘಟನೆಯು ಸಲ್ಲಿಸಿರುವ ಅರ್ಜಿಯು ತಪ್ಪು ಕಲ್ಪ ನೆಯಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಮ್.ಎಮ್. ಸುಂದರೇಶ್ ಅವರನ್ನೊಳಗೊಂಡ ನ್ಯಾಯಪೀಠವು, ನ್ಯಾಯಾಲಯವು ಸೆನ್ಸಾರ್ಶಿಪ್ ವಿಧಿಸುವಂತಿಲ್ಲ ಎಂದು ಹೇಳಿದೆ.
“ಇದು ಸಂಪೂರ್ಣ ತಪ್ಪು ಕಲ್ಪ ನೆಯಿಂದ ಕೂಡಿದೆ. ಈ ಬಗ್ಗೆ ವಾದವಾದರೂ ಹೇಗೆ ಮಾಡುತ್ತೀರಿ?” ಎಂದು ನ್ಯಾಯಾಲಯ ಕೇಳಿತು. “ನಾವು ಸಂಪೂರ್ಣ ಸೆನ್ಸಾರ್ಪ್ ವಿಧಿಸಬೇಕೆಂದು ನೀವು ಬಯಸುತ್ತೀರಿ... ಏನು ಕತೆ?” ಎಂದು ಅದು ಹೇಳಿತು.