ಶ್ರೀನಿವಾಸಪುರ: ಎರಡನೆ ರಾಷ್ಟ್ರೀಯ ಮಟ್ಟದ ಓಪನ್ ಚಾಂಪಿಯನ್ ಶಿಪ್, ಗೌರಿಬಿದನೂರು ಇಲ್ಲಿ ನಡೆದ ಕರಾಟೆ ಸ್ಪರ್ದೆಯಲ್ಲಿ ಪಟ್ಟಣದ ಒಕಿನೋವಾ ಗೋಜುರೈ, ಕರಾಟೆ ಡೋ ಶಾಲೆಯ ಮಕ್ಕಳಾದ ಬಾಲಕಿಯರ ವಿಭಾಗದಲ್ಲಿ ಅನುಷಾ 30-35 ಕುಮತೆ ವಿಭಾಗದಲ್ಲಿ ಕಟಾಸ್ ಪ್ರಥಮ ಸ್ಥಾನ ಗಳಿಸಿದ್ದಾರೆ, ಎಸ್. ಪವಿತ್ರ ಕಠಾಸ್ ನಲ್ಲಿ ಪ್ರಥಮ, ಎಸ್. ಪ್ರಣತಿ, ಬಾಲಕರ ವಿಭಾಗದಲ್ಲಿ ಹೆಚ್.ಎನ್. ನಮಿಷ್, ಪ್ರಥಮ ಕುಮತೆಯಲ್ಲಿ, ವಿಠಲ್ ಮಲ್ಯ ಕುಮತೆಯಲ್ಲಿ ಪ್ರಥಮ, ಎಸ್. ವಿಜಯ್ ತೃತೀಯ ಕುಮತೆ ಮತ್ತು ಕಥಾಸ್ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಸಂದೀಪ್ ಕುಮಾರ್ ಕುಮತೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾನೆ ಎಂದು ತರಭೇತಿದಾರ ಹೆಚ್.ಎನ್. ನರಸಿಂಹಯ್ಯ ತಿಳಿಸಿದ್ದಾರೆ. ವಿಜೇತರಾದ ಮಕ್ಕಳಿಗೆ ಸರ್ಕಾರಿ ಕರ್ನಾಟಕ ಮಾದರಿ ಶಾಲೆಯ ಮುಖ್ಯೋಪಾದ್ಯಾಯರಾದ ಬೈರೇಗೌಡ ಇವರು ವಿಜೇತರರನ್ನು ಅಭಿನಂದಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ತಾಲ್ಲೂಕು ಮಟ್ಟ ಕರಾಟೆ ಮತ್ತು ಜುಡೋ ಸ್ಪರ್ದೆ
ಪಟ್ಟಣದಲ್ಲಿ ನಡೆದ ತಾಲ್ಲೂಕು ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಎಸ್. ಪವಿತ್ರ, ಬಿ. ಶಿರೀಷ, ಲಿಖಿತ, ಬಿ.ಎಸ್. ವರ್ಷ, ಎಸ್. ಸುಜಯ್, ಸಂಜಯ್, ಮತ್ತು ಜುಡೋ ಸ್ಪರ್ದೆಯಲ್ಲಿ ಪವಿತ್ರ, ಎಸ್. ಗೀತಾ, ಎಸ್. ಪವಿತ್ರ, ಸುಪ್ರಿಯ ಡಿ. ಮೀನಾಕ್ಷಿ, ಬಿ.ಎ. ವರ್ಷ, ಇವರು ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ತರಭೇತುದಾರ ಹೆಚ್.ಎನ್. ನರಸಿಂಹಯ್ಯ ಅಭಿನಂದಿಸಿದ್ದಾರೆ.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ