ಹಾಸನ ಮಾ.20: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮಾ.17 ರಂದು ನಡೆದ 99ನೇಯ ವಾರ್ಷಿಕ ಘಟಿಕೋತ್ಸವದಲ್ಲಿ ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯ ಎಂ.ಬಿ.ಎ ವಿದ್ಯಾರ್ಥಿ ಶ್ರೀನಿವಾಸ್ ಪ್ರಸಾದ್.ಕೆ.ಎ ಅವರು ಮಾರ್ಕೇಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಅಶೋಕ ಹಾರನಹಳ್ಳಿಯವರು ಸಂಸ್ಥೆಯ ಕಾರ್ಯದರ್ಶಿಯಾದ ಆರ್.ಟಿ ದ್ಯಾವೇಗೌಡ, ಖಜಾಂಚಿ ಆರ್.ಶೇಷಗಿರಿ, ನಿರ್ದೇಶಕರಾದ ಡಾ.ಎಂ.ಎಸ್ ಶ್ರೀನಾಥ್ ಮತ್ತು ಕಾಲೇಜಿನ ಭೊಧಕ ಸಿಬ್ಬಂದಿವರ್ಗ ಅವರಿಗೆ ಶುಭ ಹಾರೈಸಿದ್ದಾರೆ.