ಹೊಸದಿಲ್ಲಿ: 3 ಕೋಟಿ ಪಡಿತರ ಕಾರ್ಡ್ ರದ್ದು ಅತ್ಯಂತ ಗಂಭೀರ ವಿಷಯ; ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ನೋಟಿಸ್

Source: VB | By S O News | Published on 18th March 2021, 7:01 PM | National News |

ಹೊಸದಿಲ್ಲಿ: ಆಧಾರ್‌ಗೆ ಜೋಡಣೆಯಾಗದ ಕಾರಣಕ್ಕೆ ಸುಮಾರು 3 ಕೋಟಿ ಪಡಿತರ ಕಾರ್ಡ್ ಗಳನ್ನು ರದ್ದುಗೊಳಿಸಿರುವುದು ಅತ್ಯಂತ ಗಂಭೀರ ವಿಷಯ ಎಂದು ಹೇಳಿರುವ ಸುಪ್ರೀಂಕೋರ್ಟ್, ಈ ಬಗ್ಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಪಡಿತರ ಚೀಟಿ ರದ್ದಾಗಿರುವುದು ದುರದೃಷ್ಟಕರ ಎಂದು ಹೇಳಿ ಸುಮ್ಮನಿರುವಂತಿಲ್ಲ. ಇದೊಂದು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ದೆ , ನ್ಯಾಯಮೂರ್ತಿಗಳಾದ ಎ.ಎಸ್, ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ಹೇಳಿದೆ.

ಅತ್ಯಂತ ಗಂಭೀರ ವಿಷಯ

ಜಾರ್ಖಂಡ್‌ನ ಕೊಯಿಲಿ ದೇವಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ

ಹಸಿವೆಯಿಂದ ಸಾವನ್ನಪ್ಪಿದ್ದ ಪ್ರಕರಣ

ಅರ್ಜಿ ಸಲ್ಲಿಸಿರುವ ಕೊಯಿಲಿ ದೇವಿಯ 11 ವರ್ಷದ ಪುತ್ರಿ ಸಂತೋಷಿ 2018ರ ಸೆಪ್ಟೆಂಬರ್ 28ರಂದು ಜಾರ್ಖಂಡ್‌ನ ಸಿಮ್‌ಡೆಗಾ ಜಿಲ್ಲೆಯಲ್ಲಿ ಹಸಿವಿನಿಂದಾಗಿ ಪ್ರಾಣಬಿಟ್ಟಿದ್ದಳು. ಬಡ ದಲಿತ ಕುಟುಂಬದವರಾದ ಸಂತೋಷಿಯ ಮನೆಯವರು ತಮ್ಮ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ನೊಂದಿಗೆ ಜೋಡಿಸದ ಕಾರಣ ಅಧಿಕಾರಿಗಳು ರೇಷನ್ ಕಾರ್ಡ್ ರದ್ದು ಮಾಡಿದ್ದು. ಆದ್ದರಿಂದ 2017ರಮಾರ್ಚ್‌ನಿಂದ ಕುಟುಂಬಕ್ಕೆ ಪಡಿತರ ಕೈತಪ್ಪಿದ್ದು ಮನೆಯವರೆಲ್ಲರೂ ಉಪವಾಸ ಬೀಳುವಂತಾ ಗಿತ್ತು ಎಂದು ಆರೋಪಿಸಲಾಗಿದೆ

ಸಾವನ್ನಪ್ಪಿದ್ದ ಪ್ರಕರಣ

ಸಂತೋಷಿ ಮೃತಪಟ್ಟ ದಿನದಂದು ಇಡೀ ಕುಟುಂಬಕ್ಕೆ ಉಪ್ಪು ಬೆರೆಸಿದ ಚಹಾವೇ ಆಹಾರವಾಗಿತ್ತು. ಉಪ್ಪು ಮತ್ತು ಚಹಾಪುಡಿ ಹೊರತುಪಡಿಸಿ ಆ ಮನೆಯಲ್ಲಿ ಮತ್ಯಾವ ಆಹಾರವಸ್ತುವೂ ಇರಲಿಲ್ಲ. ಹಸಿವೆ ತಡೆಯಲಾರದೆ ಸಂತೋಷಿ ಇಹಲೋಕ ತ್ಯಜಿಸಿದ್ದಾಳೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸುಪ್ರೀಂಕೋರ್ಟ್, ಈ ವಿಷಯದ ಅಂತಿಮ ವಿಚಾರಣೆ ನಡೆಯಲಿದೆ ಎಂದು ಹೇಳಿ ತಕ್ಷಣ ಪ್ರತಿಕ್ರಿಯಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ. 2013ರ ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆಯಡಿ ಜಾರಿಗೊಳಿಸಿರುವ ಕುಂದುಕೊರತೆಗಳ ಪರಿಹಾರ ಕಾರ್ಯವಿಧಾನದ ಬಗ್ಗೆ 4 ವಾರದೊಳಗೆ ಮಾಹಿತಿ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ರಾಜ್ಯಗಳ ಪ್ರತಿನಿಧಿ ನ್ಯಾಯವಾದಿಗಳಿಗೆ ನೋಟಿಸ್ ನೀಡಬಹುದು ಎಂದು ನ್ಯಾಯಪೀಠ ಹೇಳಿದೆ.

ಕೊಯಿಲಿ ದೇವಿ ಪರ ನ್ಯಾಯವಾದಿ ಕಾಲಿನ್ ಗೋನ್ಸಾಲ್ವಿಸ್, ಕೇಂದ್ರ ಸರಕಾರ 3 ಕೋಟಿಗೂ ಹೆಚ್ಚು ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಿರುವುದರಿಂದ ತಮ್ಮ ಅರ್ಜಿಯು ದೊಡ್ಡ ಸಮಸ್ಯೆಗೆ ಸಂಬಂಧಿಸಿದ್ದಾಗಿದೆ ಎಂದರು.

ಇದನ್ನು ಆಕ್ಷೇಪಿಸಿದ ಸರಕಾರದ ಪ್ರತಿನಿಧಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖ, ಕೇಂದ್ರ ಸರಕಾರ 3 ಕೋಟಿಗೂ ಹೆಚ್ಚು ರೇಷನ್ ಕಾರ್ಡ್ ರದ್ದುಗೊಳಿಸಿದೆ ಎಂಬುದು ಸುಳ್ಳು ಹೇಳಿಕೆ ಎಂದರು. ಕೇಂದ್ರ ಸರಕಾರಕ್ಕೆ ಈಗಾಗಲೇ ಆಧಾರ್ ಕಾರ್ಡ್ ವಿಷಯಕ್ಕೆ ಸಂಬಂಧಿಸಿದ ಅರ್ಜಿಯಲ್ಲಿ ನೋಟಿಸ್ ಜಾರಿಯಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದಾಗ, ಈ ನೋಟಿಸ್‌ಗೆ ಕೇಂದ್ರ ಸರಕಾರ ಈಗಾಗಲೇ ಉತ್ತರಿಸಿದೆ ಎಂದು ಲೇಖಿ ಹೇಳಿದರು.

ಸಕ್ರಮ ಆಧಾರ್ ಕಾರ್ಡ್ ಇಲ್ಲವೆಂಬ ಕಾರಣ ನೀಡಿ ಹಲವರಿಗೆ. ಪಡಿತರ ಪೂರೈಸುತ್ತಿಲ್ಲ. ಇದರಿಂದ ಹಸಿವಿನಿಂದ ಸಾವನ್ನಪ್ಪುವ ಪ್ರಕರಣ ಸಂಭವಿಸಿದೆ ಎಂಬ ದೂರಿನ ಹಿನ್ನೆಲೆಯಲ್ಲಿ, ಈ ಬಗ್ಗೆ ಉತ್ತರಿಸುವಂತೆ ಸೂಚಿಸಿ 2019ರ ಡಿಸೆಂಬರ್ 9ರಂದು ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು. ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ಯಾರಿಗೂ ಆಹಾರವಸ್ತು ನಿರಾಕರಿಸಲಾಗದು ಎಂದು ಸುಪ್ರೀಂಕೋರ್ಟ್ ಹೇಳಿತ್ತು.

ಸಕ್ರಮ ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ಯಾರಿಗೂ ಪಡಿತರ ನಿರಾಕರಿಸಿಲ್ಲ ಮತ್ತು ಹಸಿವಿನಿಂದ ಯಾರು ಕೂಡಾ ಸಾವನ್ನಪ್ಪಿಲ್ಲ ಎಂದು ಮಾಹಿತಿ ಲಭಿಸಿರುವುದಾಗಿ ಈ ಹಿಂದೆ ಕೇಂದ್ರ ಸರಕಾರ ಪ್ರತಿಕ್ರಿಯಿಸಿತ್ತು.
 

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...