ಭಟ್ಕಳ: ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಾಲೂಕು ತಂಬಾಕು ತನಿಖಾ ದಳದ ವತಿಯಿಂದ ಭಟ್ಕಳದ ಶಹರ ಭಾಗದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲಾಯಿತು.
ನಿಯಮಬಾಹೀರವಾಗಿ ತಂಬಾಕು ಮಾರಾಟದಲ್ಲಿ ತೊಡಗಿಕೊಂಡಿದ್ದ 13 ಅಂಗಡಿಕಾರರಿಂದ 2200 ರುಪಾಯಿ ದಂಡವನ್ನು ವಸೂಲಿ ಮಾಡಲಾಯಿತು. ತಾಲೂಕು ತಂಬಾಕು ತನಿಖಾ ದಳದ ಕಾರ್ಯಾಚರಣೆಯಲ್ಲಿ ಆರೋಗ್ಯಾಧಿಕಾರಿ ಡಾ.ಮೂರ್ತಿ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್.ಮುಂಜಿ, ಎ.ಎಸ್.ಐ. ಸೋಮರಾಜ್ ರಾಠೋಡ್, ಕಂದಾಯ ನಿರೀಕ್ಷಕ ಶಂಭು, ಜಿಲ್ಲಾ ತಂಬಾಕು ನಿಯಂತ್ರಣಾ ಸಮಿತಿಯ ಸಲಹೆಗಾರ ಪ್ರೇಮ್ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯಾಧಿಕಾರಿ ಡಾ.ಮೂರ್ತಿ ಭಟ್, ತಂಬಾಕು ಮಾರಾಟ ಇನ್ನೂ ನಿಷೇಧ ಆಗಿಲ್ಲ. ಆದರೆ ಬಹಿರಂಗ ಮಾರಾಟಕ್ಕೆ ಮಿತಿ ಇದೆ. ನಿಯಮ ಮೀರಿದವರ ವಿರುದ್ಧ ದಂಡ ವಿಧಿಸುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಸಿದರು.