ಗೋಕರ್ಣ : ಗೋಕರ್ಣದ ಕುಡ್ಲೆಬೀಚಿನಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರನ್ನ ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ
ಬೆಂಗಳೂರು ಮೂಲದ ಕುಶಾಲ್ ಗೌಡ (25), ಪ್ರತಾಪ್ ಗೌಡ(25) ರಕ್ಷಣೆಗೊಳಗಾದವರು. ಶನಿವಾರ ಬೆಂಗಳೂರಿನಿಂದ ಮೂಲದ 9 ಜನರು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಪ್ರವಾಸಿಗರು ಕುಡ್ಲೆ ಬೀಚ್ ನೋಡಲು ತೆರಳಿದ್ದರು. ಬಳಿಕ ಈಜುತ್ತಿದ್ದಾಗ ಇಬ್ಬರು ಸಮುದ್ರದ ಸುಳಿಗೆ ಸಿಲುಕಿದ್ದರು. ರಕ್ಷಣೆಗೆ ಕೂಗಿಕೊಂಡಾಗ ಅಲ್ಲಿಯೇ ಹತ್ತಿರದಲ್ಲಿದ್ದ ಲೈಪ್ ಗಾರ್ಡ್ ಸಿಬ್ಬಂದಿಗಳು ಇಬ್ಬರನ್ನ ರಕ್ಷಣೆ ಮಾಡಿದ್ದಾರೆ.
ಲೈಫ್ ಗಾರ್ಡ್ ಸಿಬ್ಬಂದಿಗಳಾದ ಸಂಜೀವ ಹೊಸ್ಕಟ್ಟಾ ಮತ್ತು ಕುಮಾರ್ ಅಂಬಿಗ ಅವರು ರಕ್ಷಣೆ ಮಾಡಿದವರು. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.