ಭಟ್ಕಳ: ಕೇರಳದ ಪ್ರಖ್ಯಾತ ಮೈತ್ರಾ ಆಸ್ಪತ್ರೆ ಹಾಗು ವೆಲ್ಫೇರ್ ಆಸ್ಪತ್ರೆ ಭಟ್ಕಳ ಇದರ ಸಹಯೋಗದೊಂದಿಗೆ ಜುಲೈ 27 ಮತ್ತು 28ರಂದು ಉಚಿತ ಹೃದ್ರೋಗ್ರ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದ್ದು ಇದರ ಭಟ್ಕಳದ ನಾಗರೀಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮೈತ್ರಾ ಆಸ್ಪತ್ರೆಯ ಬುಸಿನೆಸ್ ಡೆವಲೆಪ್ಮೆಂಟ್ ಮುಖ್ಯಸ್ಥ ಮುರುಳಿ ಥರಾವತ್ ತಿಳಿಸಿದ್ದಾರೆ.
ಅವರು ಭಾನುವಾರದಂದು ಇಲ್ಲಿನ ಖಾಸಗಿ ಹೋಟೆಲನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ಈ ಶಿಬಿರದಲ್ಲಿ ದೇಶದ ನಂಬರ್ ಒನ್ ಹೃದ್ರೋಗತಜ್ಞ ಮೈತ್ರಾ ಆಪಸ್ಪತ್ರೆಯ ನಿರ್ದೇಶಕ ಹಾಗೈ ವೈದ್ಯಕೀಯ ಸೇವೆಗಳ ಪ್ರಮುಖ ಡಾ. ಅಲಿ ಫೈಝಲ್ ತಮ್ಮ ಸೇವೆಯನ್ನು ನೀಡುತ್ತಿದ್ದು ಇವರೊಂದಿ ಕನ್ಸಲ್ಟೆಂಟ್ ಕಾರ್ಡಿಯೋಲೊಜಿಸ್ಟ್ ಡಾ. ಶಾಜುದ್ದೀನ್ ಹಾಗೂ ಅವರ ತಾಂತ್ರಿಕ ತಂಡದ ಸದಸ್ಯರ ಸೇವೆಯು ಲಭ್ಯವಾಗಲಿದೆ. ಸಾರ್ವಜನಿಕರು ಇದರ ಸದೂಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದ ಅವರು ಯಾರು ಮೊದಲು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುತ್ತಾರೋ ಅವರಿಗೆ ಪ್ರಥಮ ಆಧ್ಯತೆ ನೀಡಲಾಗುವುದು. ಈ ಶಿಬಿರದಲ್ಲಿ ರಕ್ತ ತಪಾಸಣೆ, ಇಸಿಜಿ, eಛಿho ಸೇರಿದಂತೆ ವಿವಿಧ ಹೃದ್ರೋಗಕ್ಕೆ ಸಂಬಂಧಿಸಿದ ಕಾಯಿಲೆಗೆ ಉಚಿತ ಪರೀಕ್ಷೆಯನ್ನು ಕೈಗೊಂಡು ಸೂಕ್ತ ಸಲಹೆ ನೀಡಲಾಗುವುದು.
ಈಗಾಗಲೆ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾದವರು ತಮ್ಮ ಹಿಂದಿನ ವೈದ್ಯರ ಫೈಲ್ ನ್ನು ಶಿಬಿರದಲ್ಲಿ ಬರುವಾಗ ತರಬೇಕೆಂದು ಅವರು ತಿಳಿಸಿದ್ದಾರೆ. ಜು.27 ರಂದು ಬೆಳಿಗ್ಗೆ 11:00 ಗಂಟೆಯಿಂದ ಶಿಬಿರ ಉದ್ಘಾಟನೆಗೊಳ್ಳಲಿದೆ. ಜುಲೈ 28 ರಂದು ಮಧ್ಯಾಹ್ನ 1:00 ಗಂಟೆ ವರೆಗೆ ಶಿಬಿರ ನಡೆಯುವುದು ಹಾಗೂ ರಿಜಿಸ್ಟೇಶನಗಾಗಿ +919019330977 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ವೇಲ್ಪೇರ ಆಸ್ಪತ್ರೆ ವೈದ್ಯ ಡಾ. ಜಹೀರ ಕೋಲಾ, ವೇಲ್ಪೇರ ಆಸ್ಪತ್ರೆ ಮುಖ್ಯಸ್ಥ ಅಬುಲ್ ಅಲಾ ಉಪಸ್ಥಿತರಿದ್ದರು.