ಮಳೆರಾಯನ ಅವಕೃಪೆ; ಗುಬ್ಬಚ್ಚಿಗಳ ಗೂಡು

Source: sonews | By Staff Correspondent | Published on 7th October 2017, 12:25 AM | Coastal News | Special Report | Don't Miss |

ಮುಂಡಗೋಡ : ಮಳೆಯಿಂದಾಗಿ ಆಂಜನೇಯ ದೇವಸ್ಥಾನದ ಹಿಂಬಾಗದಲ್ಲಿರುವ ಕೆರೆಯಲ್ಲಿ ನೀರು ತುಂಬಿಕೊಂಡಿರುವುದರಿಂದ ಮರಕ್ಕೆ ಗೂಡುಕಟ್ಟಿಕೊಂಡು ಆಶ್ರಯ ಪಡೆದ ಗುಬ್ಬಚ್ಚಿಗಳಿಗೆ ಅಪಾಯ ಒದಗಿಬಂದಿದೆ.

ಶತ್ರುಗಳಿಂದ ರಕ್ಷಿಸಿಕೊಳ್ಳಲು ಗುಬ್ಬಿಗಳು ಹೊಂಡದ ಅಂಚಿನಲ್ಲಿರುವ ಪುಟ್ಟ ಮರಕ್ಕೆ ೩೦-೩೨ ಗುಡೂಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದವು. ಇದನ್ನು ನೋಡುವುದೇ ಒಂದು ಭಾಗ್ಯ ಎನ್ನುವಂತಿತ್ತು. ಆದರೆ ಇತ್ತಿಚೆಗೆ ಸುರಿದ ಮಳೆಯಿಂದಾಗಿ ಕೆರೆಯ ತೀರದ ಮರದ ಅಂಚಿನಲ್ಲಿ ಹಕ್ಕಿಗಳು ಕಟ್ಟಿರುವ ಗೂಡು ನೀರುಪಾಲಾಗಿದ್ದು ಹಕ್ಕಿಗಳ ಆಶ್ರಯಕ್ಕೆ ಅಪಾಯವನ್ನುಂಟು ಮಾಡಿದೆ. 

ಮರಳಿ ಯತ್ನವ ಮಾಡು ಎನ್ನುವಂತೆ ತಮ್ಮ ಆಶ್ರಯ ತಾಣವಾಗಿರುವ ಆ ಗೂಡುಗಳು ಕೆರೆಯ ನೀರಲ್ಲಿ ಮುಳುಗಿದ್ದರೂ ಮನುಷ್ಯರಂತೆ ಕೈಕಟ್ಟಿ ಕುಳಿತುಕೊಳ್ಳದೆ ಮತ್ತದೆ ಮರಕ್ಕೆ ಗೂಡುಗಳನ್ನು ನಿರ್ಮಿಸಿವುದರ ಮೂಲಕ ತಮ್ಮ ಧೈರ್ಯವನ್ನು ಪ್ರದರ್ಶಿಸಿವೆ. ಇದನ್ನು ಕಂಡು ಮಾನವ ಬಹಳಷ್ಟು ಕಲಿಯಬೇಕಾಗಿದೆ. ಕೇವಲ ದೇವರ ಮೇಲೆ ಭಾರ ಹಾಕಿ ಕುಳಿತರೆ ಸಾಲದು ನಮ್ಮ ಅಂತಿಮ ಉಸಿರಿರುವರೆಗೂ ಪ್ರಯತ್ನ ಮಾಡಬೇಕಾಗಿದೆ ಎನ್ನುವ ಪಾಠ ಈ ಗುಬ್ಬಚ್ಚಿ ಗೂಡು ಮನುಷ್ಯರಿಗೆ ಕಲಿಸಿಕೊಡುತ್ತದೆ. 

ಕೆರೆಯ ನೀರಲ್ಲಿ ಮುಳುಗಿ ಹೋಗಿರುವ ಗೂಡಗಳ ಬಗ್ಗೆ ತಲೆಬಿಸಿ ಮಾಡಿಕೊಳ್ಳದೇ ಆ ಮರದಲ್ಲಿಯೇ ಗೂಡನ್ನು ಕಟ್ಟಿ ವಾಸಮಾಡಲು ತಯಾರು ನಡೆಸಿವೆ. ಮನುಷ್ಯರು ತಮಗೆ ತೊಂದರೆ ಬಂದಾಗ ದೇವರ ಮೇಲೆ ಕೋಪಗೊಳ್ಳುತ್ತಾರೆ ಆದರೆ ಹಕ್ಕಿಗಳು ದೇವರು ಕೊಟ್ಟಯಾವುದೇ ಕಷ್ಟಕ್ಕೂ ಒಗ್ಗಿಕೊಳ್ಳುತ್ತವೆ ಎಂಬುದುಕ್ಕೆ ಗುಬ್ಬಚ್ಚಿಗಳೇ ಸಾಕ್ಷೀ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...