ಹೊನ್ನಾವರ : ಹೊನ್ನಾವರದಿಂದ ಗೇರಸೊಪ್ಪ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೆರಂಗಡಿಗೆ ಸಾಗುವ ರಸ್ತೆ ಹಳೆಯದಾಗಿದ್ದು, ಇದುವರೆಗೆ ಯಾವುದೇ ದುರಸ್ಥಿಯಾಗದೇ ಹಾಳಾಗಿದೆ.
ಇದು ಸಾರ್ವಜನಿಕರು ಓಡಾಡುವ ಮುಖ್ಯ ರಸ್ತೆಯಾಗಿದೆ. ಮಸೀದಿ, ದೇವಸ್ಥಾನ, ಶಾಲೆಗಳು, ಅಂಗನವಾಡಿಗಳಿಗೆ ತೆರಳಲು ಮುಖ್ಯ ರಸ್ತೆಯ ಮೂಲಕವೇ ಓಡಾಡಬೇಕು. ಮಳೆಗಾಲದಲ್ಲಿ ಕೆಸರಿನಂತಾಗುವ ರಸ್ತೆ, ಗರ್ಭಿಣಿಯರನ್ನ ವಾಹನದಲ್ಲಿ ಕೊಂಡೊಯ್ದರೇ ಹೆರಿಗೆಯಾಗೋದು ಗ್ಯಾರಂಟಿ.
ಹೀಗಾಗಿ ಪ್ರಗತಿಪರ ಚಿಂತಕರು, ಶಾಸಕರಾದ ತಾವು ಹೆರಂಗಡಿಯ ಎರಡು ಕಿಲೋಮೀಟರ್ ರಸ್ತೆ ಡಾಂಬರೀಕರಣ ಇಲ್ಲವೇ ಸಿಮೆಂಟ್ ರಸ್ತೆ ಮಾಡಿಸಿಕೊಡಬೇಕೆಂದು ಸ್ಥಳೀಯರು ಶಾಸಕ ಸುನೀಲ್ ನಾಯ್ಕ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅಬ್ದುಲ್ ಖಾದರ್ ಕಟ್ಟೆಮನೆ, ಅಬ್ದುಲ್ ಗಫೂರ್ ಸಾಬ್, ಹಾಫಿಜ್ ಕಟ್ಟೆಮನೆ, ಅಪ್ಪಾನ್ ಮುಕ್ತೇಸರ್, ಮತೀನ್ ಅಬ್ಕಾರ್, ಕಾರ್ಮಿಕ ಸಂಘದ ಸದಸ್ಯ ಶ್ರೀಧರ ನಾಯ್ಕ ಸೇರಿದಂತೆ ಇತರರು ಹಾಜರಿದ್ದರು