ಬಿಡಿಬಿಡಿವ್ಯಕ್ತಿಗಳಿಗೂ ಭಯೋತ್ಪಾದಕರೆಂಬ ಹಣೆಪಟ್ಟಿ

Source: sonews | By Staff Correspondent | Published on 11th August 2019, 6:47 PM | National News | Special Report | Don't Miss |

ಯುಎಪಿಎ ಕಾಯಿದೆಗೆ ಮಾಡಿರುವ ತಿದ್ದುಪಡಿಗಳು ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನೇ ಖೈದು ಮಾಡುವ ಸಾಧ್ಯತೆಯನ್ನು ಹೊಂದಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಜಾರಿಯಲ್ಲಿರುವ ಹಲವಾರು ಕರಾಳ ರಾಷ್ಟ್ರೀಯ ಭದ್ರತಾ ಕಾನೂನುಗಳಿಗೆ ಹೋಲಿಸಿದರೂ ಅನ್ಲಾಫುಲ್ ಆಕ್ಟಿವಿಟೀಸ್ (ಪ್ರಿವೆನ್ಷನ್) ಅಮೆಂಡ್ಮೆಂಟ್ ಆಕ್ಟ್ -೨೦೧೯, (ಭಯೋತ್ಪಾದನಾ ಚಟುವಟಿಕೆಗಳ (ಪ್ರತಿಬಂಧಕಾ) ತಿದ್ದುಪಡಿ ಕಾಯಿದೆ-೨೦೧೯) ಕಾಯಿದೆಯು ಮಾತ್ರ ಅವೆಲ್ಲಕ್ಕಿಂತಲೂ ಹೆಚ್ಚು ಕರಾಳವಾಗಿದೆ. ತಿದ್ದುಪಡಿ ಕಾಯಿದೆಯಲ್ಲಿ ಯಾವುದೇ ನಾಗರಿಕರನ್ನು ಭಯೋತ್ಪಾದಕರೆಂದು ಘೋಷಿಸಲೆಂದೇ  ಮಾಡಿಕೊಂಡಿರುವ ಅವಕಾಶವು ಸ್ವಸ್ಥಮನಸ್ಥಿತಿಯ ನಾಗರಿಕರೆಲ್ಲರಲ್ಲೂ ಭೀತಿಯನ್ನು ಹುಟ್ಟುಹಾಕುವಂತಿದೆ ತಿದ್ದುಪಡಿಯ ಬಗ್ಗೆ ನಡೆಯುತ್ತಿರುವ ಹೆಚ್ಚಿನ ಸಾರ್ವಜನಿಕ ಚರ್ಚೆಯು ಇದರ ಸುತ್ತಲೇ ಕೇಂದ್ರೀಕರಿಸಿದೆ.

ಮೂಲ ಯುಎಪಿಎ ಕಾಯಿದೆಯು ಯಾವುದೇ ಸಂಘಟನೆಯನ್ನು ಭಯೋತ್ಪಾದಕ ಸಂಘmನೆಯೆಂದು ಘೋಷಿಸುವ ಮತ್ತು ಸಂಘಟನೆಯ ಸದಸ್ಯರು ಮತ್ತು ಸಕ್ರಿಯ ಬೆಂಬಲಿಗರ ಮೇಲೆ ಕಾನೂನು ಕ್ರಮ ಜರುಗಿಸಲು ಬೇಕಾದ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಕೊಡುತ್ತಿತ್ತು. ಹೀಗೆ ಘೋಷಿಸುವುದಕ್ಕೆ ಪೂರ್ವಭಾವಿಯಾಗಿ ಯಾವುದೇ ಪ್ರಕ್ರಿಯೆಗಳನ್ನು ಜರುಗಿಸಬೇಕಿಲ್ಲವಾದರೂ, ಸಂಘಟನೆ ಅಥವಾ ಸಂಘಟನೆಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಭಯೋತ್ಪಾದಕ ಪಟ್ಟಿಯನ್ನು ಮುಂದುವರೆಸಬೇಕೋ ಬೇಡವೋ ಎಂಬ ಬಗ್ಗೆ ಹಾಲಿ ಅಥವಾ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ರಚಿಸಲಾಗುವ ಪುನರಾವಲೋಕನ ಸಮಿತಿಯ ಮುಂದೆ ಹಾಜರಾಗಿ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಿಕೊಡುತ್ತದೆ.

ಭಯೋತ್ಪಾದಕ ಚಟುವಟಿಕೆಗಳನ್ನು ವ್ಯಕ್ತಿಗಳು ನಡೆಸುತ್ತಾರೆಯೇ ವಿನಾ ಸಂಘಟನೆಗಳಲ್ಲ ಎಂದು ಸರ್ಕಾರವು ರಾಜ್ಯಸಭೆಗೆ ತಿಳಿಸಿದೆ. ಹೀಗಾಗಿ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸದಿದ್ದರೆ ಅವರು ಕಾನೂನಿನಲ್ಲಿರುವ ಲೋಪಗಳನ್ನು ಬಳಸಿಕೊಂಡು ಮತ್ತೊಂದು ಸಂಘಟನೆಯನ್ನು ರಚಿಸಿಕೊಂಡು ತಮ್ಮ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರೆಸುತ್ತಾರೆ ಎಂದು ಕೂಡಾ ಸರ್ಕಾರ ಹೇಳಿದೆ. ಆದರೆ ತಿದುಪ್ಪಡಿಯಾಗುವ ಮುಂಚೆಯೂ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ್ದ ವ್ಯಕ್ತಿಗಳನ್ನು ಮತ್ತು ಅವರ ಸಕ್ರಿಯ ಬೆಂಬಲಿಗರನ್ನು ಶಿಕ್ಷಿಸುವ ಅವಕಾಶವಿತ್ತು. ಹೀಗಿರುವಾಗ ಹೀಗೆ ವಿಶೇಷವಾಗಿ ವ್ಯಕ್ತಿಗಳನ್ನು ಭಯೋತ್ಪಾದಕ ಎಂದು ಘೋಷಿಸುವುದು ಯಾವ ಉದ್ದೇಶವನ್ನು ಈಡೇರಿಸಬಲ್ಲದೆನ್ನುವುದು ಪ್ರಶ್ನಾರ್ಹವಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈಗ ಬಿಡಿವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸುತ್ತದೆ. ಭಾರತವು ವಿಶ್ವಸಂಸ್ಥೆಯ ಸನ್ನದುಗಳಿಗೆ ಪಾಲುದಾರ ದೇಶನಾಗಿರುವುದರಿಂದ ನಮ್ಮ ದೇಶವೂ ಕೂಡಾ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸುವಕಾಯಿದೆಯನ್ನು ಜಾರಿಗೆ ತರಲೇ ಬೇಕಿದೆಯೆಂಬುದು ಸರ್ಕಾರವು ಕೊಡುತ್ತಿರುವ ಮತ್ತೊಂದು ಕಾರಣ. ಇದು ಒಂದು ಅರೆಬರೆ ಕಾರಣವಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸುತ್ತಿರುವುದು ನಿಜವಾದರೂಯಾವುದೇ ವ್ಯಕ್ತಿಯನ್ನು ಭಯೋತ್ಪಾದಕರೆಂದು ಘೋಷಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಏಕೆ ಕೊಡಲಾಗಿದೆಯೆಂಬುದನ್ನೇನೂ ಅದು ವಿವರಿಸುವುದಿಲ್ಲ.

ಕಾನೂನಿನಷ್ಟೇ ಸಮಸ್ಯಾತ್ಮಕವಾಗಿರುವುದು ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸಲು ಅಳವಡಿಸಲಾಗಿರುವ ಪ್ರಕ್ರಿಯೆಗಳು. ನಮ್ಮ ಸಂವಿಧಾನವು ಸಂಘಟನೆಗಳಿಗಿಲ್ಲದ ಕೆಲವು ಮೂಲಭೂತ ಹಕ್ಕುಗಳನ್ನು ವ್ಯಕ್ತಿಗಳಿಗೆ ಖಾತರಿ ಮಾಡುತ್ತದೆ. ಆದರೆ ಅದನ್ನು  ಕಿಂಚಿತ್ತೂ ಪರಿಗಣಿಸದೆ ಸಂಘಟನೆಗಳನ್ನು :ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸುವಾಗ ಯಾವ ಪ್ರಕ್ರಿಯೆಗಳನ್ನು ಅಳವಡಿಸಲಾಗಿತ್ತೋ ಅದೇ ಪ್ರಕ್ರಿಯೆಗಳನ್ನು ವ್ಯಕ್ತಿಗಳನ್ನು ಭಯೋತ್ಪಾದಕ ಎಂದು ಘೋಷಿಸುವಾಗಲೂ ಅಳವಡಿಸಲಾಗುತ್ತಿದೆ. ಹಾಗಿದ್ದಲ್ಲಿ ಸರ್ಕಾರಕ್ಕೆ ಸಂವಿಧಾನದ ಆರ್ಟಿಕಲ್ ೨೧ರ ಬಗ್ಗೆ ಅರಿವಿರಲಿಲ್ಲವೇ ಅಥವಾ ಇದ್ದರೂ ಅದನ್ನು ಕಡೆಗಣಿಸಿ ತಿದ್ದುಪಡಿಗಳನ್ನು ಮಾಡಲಾಗಿದೆಯೇ?

ಹಾಗೆ ನೋಡುವುದಾದರೆ, ಯುಎಪಿಎ ಅಡಿಯಲ್ಲಿ ರೀತಿ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸುವುದರಿಂದ ಯಾವುದೇ ಕಾನೂನಾತ್ಮಕ ಪರಿಣಾಮಗಳು ಉದ್ಭವಿಸುವುದಿಲ್ಲವಾದರೂ ವ್ಯಕ್ತಿಯೊಬ್ಬರನ್ನು ಭಯೋತ್ಪಾದಕರೆಂದು ಘೋಷಿಸುವುದರ ಪರಿಣಾಮವೇನಾಗುತ್ತದೆಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕರೆಂದು ಘೋಷಿಸಲು ವ್ಯಕ್ತಿಯು ಯಾವುದಾದರೂ ಭಯೋತ್ಪಾದಕ ಕಾಯಿದೆಯಡಿ ಶಿಕ್ಷೆಗೂ ಗುರಿಯಾಗಿರಬೇಕಿಲ್ಲ ಅಥವಾ ಅವರ ಮೇಲೆ ಭಯೋತ್ಪಾದಕ ಕಾಯಿದೆಯಡಿ ವಿಚಾರಣೆಯೂ ನಡೆಯುತ್ತಿರಬೇಕಿಲ್ಲ.

ಈಗಾಗಲೇ ಭಯೋತ್ಪಾದನೆಗಳ ಹುಸಿ ಆರೋಪಗಳ ಮೇಲೆ ಮುಸ್ಲಿಂ ಯುವಕರು ದಶಕಗಳಿಂದ ಸೆರೆಮನೆಯಲ್ಲಿ ಬಂಧಿತಾರಾಗಿದ್ದಾರೆಮತ್ತೊಂದೆಡೆ ಮುಸ್ಲಿಮರ ಮೇಲೆ ದಾಳಿ ನಡೆಸಲಾಗಿರುವ ಪ್ರಕರಣಗಳಲ್ಲಿ  ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿಯು  (ಎನ್ಐಎ) ಆರೋಪವನ್ನು ಉದ್ದೇಶಪೂರ್ವಕವಾಗಿ ಸಡಿಲಗೊಳಿಸುತ್ತಿದೆ. ಹೀಗಿರುವಾಗ ಕಾನೂನನ್ನು ಪೂರ್ವಗ್ರಹವಿಲ್ಲದೆ ಬಳಸಲಾಗುತ್ತದೆ ಎಂದು ನಂಬಿಕೊಳ್ಳಲು ಯಾವ ಕಾರಣಾವೂ ಇಲ್ಲ. ತನಿಖೆ ಮಾಡುವಾಗ ಮತ್ತು ಕಾನೂನು ಕ್ರಮಗಳನ್ನು ನಡೆಸುವಾಗ ಎದುರಾಗುತ್ತಿದ್ದ ಅಡೆತಡೆಗಳನ್ನು ನಿವಾರಿಸಿಕೊಳ್ಳಲೆಂದು ತಿದ್ದುಪಡಿಯನ್ನು ತರಲಾಯಿತೆಂಬ ವಾದದಲ್ಲಿ ಯಾವುದೇ ಹುರುಳಿಲ್ಲವೆಂಬುದು ವಿಷಯವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಿದಾಗ ಅರ್ಥವಾಗುತ್ತದೆ. ತನಿಖೆ ಮತ್ತು ಇತರೆ ಕಾನೂನು ಕ್ರಮಗಳು ಪ್ರಧಾನವಾಗಿ ಸಂಬಂಧಪಟ್ಟವರ ಅಸಮರ್ಥತೆಯಿಂದಾಗಿ ವೈಫಲ್ಯವನ್ನು ಅನುಭವಿಸುತ್ತಿವೆಯೇ ಹೊರತು ಹೊಸ ತಿದ್ದುಪಡಿಯಲ್ಲಿ ಅವುಗಳಲ್ಲಿ ಬದಲಾವಣೆ ತರಬಲ್ಲ ಯಾವೊಂದು ಹೊಸ ಕಲಮುಗಳನ್ನೂ ಸೇರಿಸಲಾಗಿಲ್ಲ.

ಕಾನೂನನ್ನು ಅನುಮೋದಿಸಲಾದ ಪರಿಯೂ ಕೂಡಾ ಅಷ್ಟೇ ಕಳವಳಕಾರಿಯಾಗಿದೆ. ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಜುಲೈ ೮ಕ್ಕೆ ಹಾಗೂ ರಾಜ್ಯಸಭೆಯಲ್ಲಿ ಆಗಸ್ಟ್ ೨ಕ್ಕೆ ಮಂಡಿಸಲಾಯಿತು. ಮಸೂದೆಯನ್ನು ಯಾವುದೇ ವಿಷಯ ಸಮಿತಿಯ ಪರಿಗಣನೆಗೆ ವರ್ಗಾಯಿಸಲಿಲ್ಲ ಅಥವಾ ಮಸೂದೆಯ ಬಗ್ಗೆ ಗಂಭೀರ ಪರಿಶೀಲನೆಯಾಗಲೀ, ಚರ್ಚೆಯಾಗಲೀ ನಡೆಯಲೇ ಇಲ್ಲ. ಲೋಕಸಭೆಯಲ್ಲಿ ತನಗಿರುವ ಬಹುಮತ ಹಾಗೂ ರಾಜ್ಯಸಭೆಯಲ್ಲಿ ಪ್ರಾದೇಶಿಕ ಪಕ್ಷಗಳಿಂದ ಸಿಗುತ್ತಿರುವ ಬೆಂಬಲವನ್ನು ಆಧರಿಸಿ ಸಂಸತ್ತಿನಲ್ಲಿ ಒಂದಾದ ಮೇಲೊಂದರಂತೆ ಮಸೂದೆಗಳು ಅನುಮೋದನೆಗೊಳ್ಳುತ್ತಿರುವ ರೀತಿಯಲ್ಲೇ ಮಸೂದೆಯೂ ಅನುಮೋದಿಸಲ್ಪಟ್ಟಿತು. ಹೀಗಾಗಿ ಸಂಸತ್ತಿನ ಅನುಮೋದನೆ ಎಂಬುದು ಈಗ ಕೇವಲ ಒಂದು ಔಪಚಾರಿಕತೆಯಾಗಿಬಿಟ್ಟಿದೆ. ಹಾಗೂ ಬಾರಿ ಸಂಸತ್ತು ಹೆಚ್ಚು ಉಪಯುಕ್ತತೆಯನ್ನು ಪ್ರದರ್ಶಿಸಿತು ಎಂಬ ಹೆಗ್ಗಳಿಕೆಗಳು ಪ್ರಕ್ರಿಯೆಗಳ ಅಗತ್ಯವನ್ನೇ ಪ್ರಶ್ನಿಸುವಂತೆ ಮಾಡಿದೆ. ೨೦೧೯ರ ಚುನಾವಣಾ  ಫಲಿತಾಂಶಗಳ ನಂತರ ದಿಕ್ಕೆಟ್ಟಿರುವ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಮಸೂದೆಯ ಬಗ್ಗೆ ಸಾಂಕೇತಿಕ ವಿರೋಧವನ್ನಷ್ಟೇ ವ್ಯಕ್ತಪಡಿಸಿದವು. ಇದು ಭಾರತದಲ್ಲಿ ಪ್ರಜಾತಂತ್ರವು ನಮ್ಮಗಳ ಊಹೆಗಿಂತ ಹೆಚ್ಚು ಹದಗೆಟ್ಟಿದೆಯೆಂಬುದನ್ನು ಸೂಚಿಸುತ್ತಿದೆ.

೨೦೧೮ರಷ್ಟು ಇತ್ತೀಚೆಗೆ ಹಲವಾರು ಕಾರ್ಯಕರ್ತರಿಗೆ ಮತ್ತು ರಾಜಕೀಯ ವಿರೋಧಿಗಳಿಗೆ ನಗರದ ನಕ್ಸಲರೆಂಬ ಹಣೆಪಟ್ಟಿ ಹಚ್ಚಿ, ನಿರಾಧಾರ ಆರೋಪಗಳನ್ನು ಹೊರಿಸಿ, ಜಾಮೀನನ್ನು ಕೂಡ ದೊರಕದಂತೆ ಮಾಡಿ ಸೆರೆಯಲ್ಲಿ ಕೊಳೆಯುವಂತೆ ಮಾಡಲಾಯಿತು. ಭಯೋತ್ಪಾದನೆಯ ವಿರುದ್ಧ ಸೆಣೆಸಲು ಕಾನೂನುಗಳ ಅಗತ್ಯವಿದೆಯಾದರೂ ಈಗ ಮಾಡಲಾಗಿರುವ ತಿದ್ದುಪಡಿಗಳನ್ನು ಸಾಕಷ್ಟು ದುರ್ಬಳಕೆ ಮಾಡಿಕೊಳ್ಳಬಹುದು. ಇಂಥಾ ವಿಷಯಗಳ ಬಗ್ಗೆ ಶಾಸನವನ್ನು ಜಾರಿ ಮಾಡುವಾಗ ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ.

ಕೃಪೆ: Economic and Political Weekly ಅನು:

 

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...