ಕೋಲಾರ ಜು.31: ಸಕ್ಷಮ ಕೋಲಾರ ಜಿಲ್ಲೆ ವತಿಯಿಂದ ಮುಳಬಾಗಿಲು ತಾಲ್ಲೂಕಿನ ಮಲ್ಲನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 11-00ಗಂಟೆಗೆ ವಿಶೇಷ ಚೇತನ ಮಕ್ಕಳಿಗೆ 30 ಬ್ಯಾಗ್, 150 ಪುಸ್ತಕ, ಜಾಮೀಟ್ರಿ ಬಾಕ್ಸ್ ಹಾಗೂ ದೃಷ್ಠಿದೋಷ ವಿದ್ಯಾರ್ಥಿಗಳಿಗೆ ಬ್ಲೈಂಡ್ ಪೋಲ್ಡಿಂಗ್ ಸ್ಟಿಕ್ನ್ನು ವಿತರಿಸಲಾಯಿತು.
ರಾಜ್ಯ ಸಂಘಟನಾ ಕಾರ್ಯದರ್ಶಿ ಜಯರಾಮ್ ಜೀ, ಬಿ.ಆರ್.ಸಿ.ಸಿ.ಒ ಹೆಚ್.ಕೆ. ಮೋಹನ್ ಬಾಬು, ಎಂ.ಹೆಚ್.ಪಿ.ಎಸ್.ನ ರಾಮಕೃಷ್ಣ, ಬಿ.ಐ.ಇ.ಆರ್.ಟಿ. ಶಿವಕುಮಾರ್, ನಾರಾಯಣಸ್ವಾಮಿ, ಸರಳಮ್ಮ, ಸಕ್ಷಮದ ವಿಶೇಷ ಶಿಕ್ಷಕರಾದ ಶಂಕರಪ್ಪ, ಜಿಲ್ಲಾ ಕಾರ್ಯದರ್ಶಿ ಜಲಕಂಠ, ಹಾಜರಿದ್ದರು.
ಮುಳಬಾಗಿಲಿನ ಸರ್ಕಾರಿ ಬಾಲಕೀಯ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಮಧ್ಯಾಹ್ನ 2-00ಗಂಟೆಗೆ ವಿಶೇಷ ಚೇತನ ಮಕ್ಕಳಿಗೆ 30 ಬ್ಯಾಗ್, 150 ಪುಸ್ತಕ, ಜಾಮೀಟ್ರಿ ಬಾಕ್ಸ್ ಹಾಗೂ ದೃಷ್ಠಿದೋಷ ವಿದ್ಯಾರ್ಥಿಗಳಿಗೆ ಬ್ಲೈಂಡ್ ಪೋಲ್ಡಿಂಗ್ ಸ್ಟಿಕ್ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಜಯರಾಮ್ ಜೀ, ನಾರಾಯಣಪ್ಪ, ಐ.ಇ.ಆರ್.ಟಿ. ನಾರಾಯಣಸ್ವಾಮಿ, ಸಕ್ಷಮದ ವಿಶೇಷ ಶಿಕ್ಷಕರಾದ ಶಂಕರಪ್ಪ, ಜಿಲ್ಲಾ ಕಾರ್ಯದರ್ಶಿ ಜಲಕಂಠ, ಹಾಜರಿದ್ದರು.
(ಜಲಕಂಠ)
ಸಕ್ಷಮ ಕಾರ್ಯದರ್ಶಿ,
ಕೋಲಾರಜಿಲ್ಲೆ,
ಮೊ. :9844135419
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.