ದಿನಾಂಕ: 23.07.2017 ರಂದು ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಕಾರ್ಯಕರ್ತರ ಸ್ನೇಹಕೂಟಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವನ್ನುಜಿಲ್ಲಾ ನಿರ್ದೇಶಕರುಉದ್ಘಾಟನೆ ಮಾಡಿರುತ್ತಾರೆ.ತಮ್ಮಉದ್ಘಾಟನಾ ಭಾಷಣದಲ್ಲಿಗ್ರಾಮಾಭಿವೃದ್ಧಿಯಯೋಜನೆಯ ಕಾರ್ಯಕ್ರಮಗಳನ್ನು ಪ್ರತಿ ಹಳ್ಳಿ ಮಟ್ಟದಲ್ಲಿಕಟ್ಟಕಡೆಯ ಸಮಾಜದತುದಿಯಲ್ಲಿರುವಕುಟುಂಬದಅಭಿವೃದ್ಧಿಗೆ ಶ್ರಮಿಸುತ್ತಿರುವಎಲ್ಲಾಕಾರ್ಯಕರ್ತರಿಗೆಒಂದು ದಿನ ಮನರಂಜನೆ ನೀಡಲಿಕ್ಕೆಸ್ನೇಹಕೂಟ ಮಾಡುತ್ತಿದ್ದು, ಈ ಸ್ನೇಹಕೂಟದಲ್ಲಿತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹೊಮ್ಮಿಸಲಿಕ್ಕೆ ಈ ದಿನ ಸೂಕ್ತವಾಗಿದ್ದು ಮತ್ತುಯೋಜನೆಯ ಕಾರ್ಯಕ್ರಮ
, ಎಲ್ಲಾಕಾರ್ಯಕರ್ತರು ನಿರಂತರವಾಗಿತಾಲೂಕಿನಲ್ಲಿ ನಡೆಯುವಪೂಜ್ಯರ ಕಾರ್ಯಕ್ರಮಗಳ ಬಗ್ಗೆ ಗಮನಹರಿಸುವುದು ನಮ್ಮೆಲ್ಲರಕರ್ತವ್ಯವಾಗಿದೆ.
ಈ ಕಾಂಳನ್ನು ಕ್ಷೇತ್ರದಲ್ಲಿಉತ್ತಮವಾಗಿಯೋಜನೆಯ ಪಾಲುದಾರರಿಗೆತಲುಪಿಸುವಲ್ಲಿ ಸಾಧನೆಯನ್ನು ಮಾಡಿರುವಕಾರ್ಯಕರ್ತರನ್ನುಗುರುತಿಸುವುದು ಈ ದಿನದ ವಿಶೇಷವಾಗಿದೆ.
ತಾಲೂಕಿನಯೋಜನಾಧಿಕಾರಿಯಾದ ಸುರೇಶ್ ಶೆಟ್ಟಿ ಮಾತನಾಡಿ ಶ್ರೀನಿವಾಸಪುರತಾಲ್ಲೂಕಿನಲ್ಲಿ 3 ವರ್ಷದಲ್ಲಿಯೋಜನೆಯಕಾರ್ಯಕ್ರಮವನ್ನು ಪ್ರತಿಯೊಬ್ಬರಿಗೂ ಮುಟ್ಟಿಸಿರುವುದರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ, ಯೋಜನೆಯಎಲ್ಲಾ ಕಾರ್ಯಕ್ರಮಗಳನ್ನು ತಾಲ್ಲೂಕಿನಲ್ಲಿ ಮಾಡಿರುವುದು ಮಹತ್ತರ ಸಾಧನೆಯಾಗಿರುತ್ತದೆ. ಪೂಜ್ಯರಆಶಯದಂತೆ ಕಾರ್ಯಕ್ರಮದಅಧ್ಯಕ್ಷತೆಯನ್ನು ಪುರಸಭೆಯ ಮೇಲ್ವಚಾರಕರಾದ ಶೇಖರ್ ಶೆಟ್ಟಿಯವರು ಮಾತನಾಡಿ ನಾವೆಲ್ಲರೂ ಪೂಜ್ಯರಆಶಯದಂತೆ ಕಾರ್ಯಕ್ರಮಗಳನ್ನು ಸಮಾಜದಎಲ್ಲಾ ಕುಟುಂಬಗಳಿಗೆ ತಲುಪಿಸುವುದು ನಮ್ಮಕರ್ತವ್ಯವಾಗಿದೆ.
ವಿಶೇಷವಾಗಿ ಈ ದಿನದಕಾರ್ಯಕ್ರಮದಲ್ಲಿ ಬೆಳಿಗ್ಗೆ ಮನರಂಜನೆ ಸ್ಪರ್ಧೆಗಳಾದ ಸಂಗೀತಕುರ್ಚಿ, ಬಸ್ಟಾಂಡ್ ಬ್ಲಾಸ್ಟ್, ಬಾಲ್ ಪಾಸಿಂಗ್, ಬಾಟಲಿಗೆ ನೀರುತುಂಬಿಸುವುದು, ಮುಖಕ್ಕೆ ಸ್ಟಿಕ್ಕರ್ ಹಾಕುವ ಸ್ಪರ್ಧೆ, ತಲೆಕೂದಲಿಗೆ ಸ್ಟ್ರಾ ಹಾಕುವ ಸರ್ಧೆ ಹಾಗೂ ರಸ ಪ್ರಶ್ನೆಕಾರ್ಯಕ್ರಮಏರ್ಪಡಿಸಲಾಯಿತುಇದರಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು ಹಾಗೂ 2016-17ನೇ ಸಾಲಿನಲ್ಲಿ ಸಾಧನೆ ಮಾಡಿದಕಾರ್ಯಕರ್ತರಿಗೆಅಭಿನಂದನಾ ಪತ್ರ ನೀಡಲಾಯಿತು.
ಮಧ್ಯಾಹ್ನಕಾರ್ಯಕರ್ತರಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು ಹಾಗೂ ಕೊನೆಯಲ್ಲಿ ಎಲ್ಲಾಕಾರ್ಯಕರ್ತರಿಗೆ ಗಿಡವನ್ನು ನೀಡುವುದರ ಮುಖಾಂತರ ಪರಿಸರ ಬೆಳೆಸುವ ಬಗ್ಗೆ ತಿಳಿಸಲಾಯಿತು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ