ಕೋಲಾರ:- ನಗರದ ಜಯ ನಾಟ್ಯ ಕಲಾ ಅಕಾಡೆಮಿ ಹಾಗೂ ಬೆಂಂಗಳೂರಿನ ಶ್ರೀಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ ಆಶ್ರಯದಲ್ಲಿ ತಾಲ್ಲೂಕಿನ ಸಿಂಗೇಹಳ್ಳಿಯ ಶಿಕ್ಷಕ ಸತೀಶ್ ಹಾಗೂ ವೀಣಾ ದಂಪತಿಗಳ ಪುತ್ರಿ ಕುಮಾರಿ ಎಸ್.ಸಿರೀಷ ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ಜೂ.23 ರ ಶುಕ್ರವಾರ ಸಂಜೆ 5 ಗಂಟೆಗೆ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.
ನಿವೃತ್ತ ಮುಖ್ಯ ಶಿಕ್ಷಕರಾದ ನ್ಯಾನಪ್ಪ ಮತ್ತು ನಂಜಪ್ಪ ಅವರ ಮೊಮ್ಮಗಳಾದ ಸಿರೀಷ ಕಳೆದ ಐದು ವರ್ಷಗಳಿಂದ ಜಯನಾಟ್ಯ ಕಲಾ ಅಕಾಡೆಮಿಯಲ್ಲಿ ನೃತ್ಯಗುರು ವಿದ್ವಾನ್ ಕೋಲಾರ ರಮೇಶ್ ಶಿಷ್ಯೆಯಾಗಿ ಭರತನಾಟ್ಯ ಕಲಿಯುತ್ತಿದ್ದು, ಇದೀಗ ರಂಗಪ್ರವೇಶಕ್ಕೆ ಸಜ್ಜಾಗಿದ್ದಾರೆ.
ರವಿಂದ್ರ ಕಲಾಕ್ಷೇತ್ರದಲ್ಲಿ ಜೂ.23 ರಂದು ನಡೆಯುವ ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಉದ್ಘಾಟಿಸಲಿದ್ದು, ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ರಾಜಣ್ಣ ಅಧ್ಯಕ್ಷತೆ ವಹಿಸುವರು.
ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಮಹದೇವಪುರ ಕಸಾಪ ಅಧ್ಯಕ್ಷ ಡಾ.ವೆ.ಅಜಿತ್ಕುಮಾರ್ರಿಂದ ಗೆಜ್ಜೆ ನುಡಿಯಾಡಲಿದ್ದಾರೆ.
ಖ್ಯಾತ ನೃತ್ಯ ಅಂಕಣಗಾರ ನಂಜುಂಡರಾವ್, ಕುಮಾರವ್ಯಾಸ ಪ್ರಶಸ್ತಿ ವಿಜೇತ ಕೆ.ಆರ್.ಜ್ಞಾನಮೂರ್ತಿ, ನೃತ್ಯಗುರು ಮಂಡ್ಯ ರಮೇಶ್, ವೆಂಕಟಾದ್ರಿ ಮತ್ತಿತರರು ಉಪಸ್ಥಿತರಿರುವರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.