ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ನೇಮಕ

Source: sonews | By Staff Correspondent | Published on 18th July 2019, 11:05 PM | State News |

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ಸಭೆಯಲ್ಲಿ ಹಾಜರಿದ್ದ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದರು.

ಅಧ್ಯಕ್ಷರಾಗಿ ಕೆ.ಎಸ್ ಗಣೇಶ್ (ಅಧಿನಾಯಕ) ಗೌರವಾಧ್ಯಕ್ಷರಾಗಿ ಸಂಚಿಕೆ ಸಂಪಾದಕರಾದ ಸಿ.ಎಂ.ಮುನಿಯಪ್ಪ (ಸಂಚಿಕೆ) ಉಪಾಧ್ಯಕ್ಷರುಗಳಾಗಿ ತೇ.ಸೀ ಬದರೀನಾಥ್ (ಕೋಲಾರಸೊಬಗು) ಎಂ.ಎಸ್.ನಾಗೇಂದ್ರಪ್ರಸಾದ್ (ಕೋಲಾರವಾಹಿನಿ), ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎನ್ ಮುರಳೀಧರ (ಕೋಲಾರಧ್ವನಿ) ಕಾರ್ಯದರ್ಶಿಗಳಾಗಿ ಮುನಿಕೃಷ್ಣಪ್ಪ (ನಂದಿ ವಿಜಯ) ಗೋಪಿಕಾ ಮಲ್ಲೇಶ್ (ಕೋಲಾರಶಕ್ತಿ) ಹಾಗೂ ಖಜಾಂಚಿಯಾಗಿ ಕೋ.ನಾ ಮಂಜುನಾಥ್ (ಪ್ರಿಯಪತ್ರಿಕೆ) ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೋ.ನಾ ಪ್ರಭಾಕರ್ (ಕನ್ನಡಮಿತ್ರ) ದುನಿಯಾ ಮುನಿಯಪ್ಪ (ದುನಿಯಾ ಪತ್ರಿಕೆ) ಎಂ.ಡಿ ಚಾಂದ್‍ಪಾಷ (ಕೋಲಾರಕಿರಣ) ಲಕ್ಷ್ಮಣ್ (ಚುಂಬಕವಾಣಿ) ಸಿ.ಕೆ.ಲಕ್ಷ್ಮಣ (ಗಡಿನಾಡಕೂಗು) ಆರ್.ವೆಂಕಟೇಶ್‍ಬಾಬಾ (ಕೋಲಾರಕುಸುಮ) ಪುಟ್ಟರಾಜು (ಪಾಲಾರ್‍ಪತ್ರಿಕೆ) ಇವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮದ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಜಂಟಿ ಕಾರ್ಯದರ್ಶಿ ಹೆಚ್.ಎಲ್ ಸುರೇಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಅಬ್ಬಣಿ ಶಂಕರ್, ನಾ.ಮಂಜುನಾಥ್, ಪುನೀತ್ ಉಪಸ್ಥಿತರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...