ಕೋಲಾರ : ತಾಲೂಕಿನ ಮಲ್ಲಸಂದ್ರ ಗ್ರಾಮ , ಹೊಸಹಳ್ಳಿ ಬೈರನಹಳ್ಳಿಯ ಮಾರ್ಗದ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ೪ ಕೋಟಿ ರೂ.ವೆಚ್ಚದಲ್ಲಿ ೭೫ ಕಿ.ಮೀ ರಸ್ತೆ ಕಾಂಗಾರಿಗೆ ಶಾಸಕ ಕೆ.ಶ್ರೀನಿವಾಸಗೌಡ , ಎಂಎಲ್ಸಿ ಇಂಚರ ಗೋವಿಂದರಾಜು ಅವರು ಗುದ್ದಲಿ ಪೂಜೆ ನೇರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಶ್ರೀನಿವಾಸಗೌಡ , ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾದರೆ ಇಡೀ ದೇಶ ಅಭಿವೃದ್ದಿಯಾಗುತ್ತದೆ.
ಎಂಎಲ್ಸಿ ಇಂಚರ ಗೋವಿಂದರಾಜು ಮಾತನಾಡಿ, ಗ್ರಾಮಗಳಲ್ಲಿ ರಸ್ತೆಗಳನ್ನ ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಗ್ರಾಮಸ್ಥರು ಗುಣಮಟ್ಟವನ್ನು ಪರಿಶೀಲಿಸಬೇಕು. ಗುತ್ತಿಗೆದಾರರು ಸಹ ಮಾಡುವ ಕೆಲಸದಲ್ಲಿ ಪ್ರಮಾಣಿಕತೆ ತೋರಿಸಿದರೆ ಅವರಿಗೆ ಒಳ್ಳೆಯ ಹೆಸರು ಬರುತ್ತದೆ ಎಂದರು .
ಈ ಸಂದರ್ಭದಲ್ಲಿ ನಾಗನಾಳ ಸೋಮಣ್ಣ , ಸಿಎಂಆರ್.ಶ್ರೀನಾಥ್ , ಮಲ್ಲಸಂದ್ರ ಎನ್ . ಬಚ್ಚಣ್ಣ , ಮಲ್ಲಸಂದ ಜಗಧೀಶ್ , ಕುರ್ಕಿರಾಜೇಶ್ವರಿ , ಎಂಡಿ.ದೇವರಾಜ್ , ತಿರುಮಲೇಶ್ , ಆನಂದ್ , ಖಾಜಿಕಲ್ಲಹಳ್ಳಿ ಹರೀಶ್ಗೌಡ , ಚಿಕ್ಕವೀರಪ್ಪ ಗುತ್ತಿಗೆದಾರ ವೆಂಕಟರಾಮರೆಡ್ಡಿ ಮತ್ತಿತರರು ಹಾಜರಿದ್ದರು .