ಹೊನ್ನಾವರ : ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಪತಿ

Source: S O News | By Laxmi Tanaya | Published on 29th August 2020, 10:52 AM | Coastal News | Don't Miss |

ಹೊನ್ನಾವರ : ಪತ್ನಿಯ ಮೇಲೆ ಅನುಮಾನಗೊಂಡು ಜಗಳವಾಡುತ್ತಿದ್ದ  ಪತಿ   ಕತ್ತಿಯಿಂದ ಕಡಿದು ತೀವೃ ಗಾಯಗೊಳಿಸಿ ತಾನೂ ನೇಣಿಗೆ ಶರಣದ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಮೇಲಿನ ಇಡಗುಂಜಿ ಬಳಿ ನಡೆದಿದೆ.

ಕುಳಿಮನೆಯ ವೆಂಕಟೇಶ ನಾಯ್ಕ (೩೮) ಪತ್ನಿ ಶೈಲಾ ನಾಯ್ಕ (೩೩) ಸಾವನ್ನಪ್ಪಿದ್ದಾರೆ. ವೆಂಕಟೇಶ ನಾಯ್ಕ ಕೆಲ ದಿನಗಳಿಂದ ದುಡಿದ ಹಣವನ್ನ ಮನೆಗೆ ನೀಡದಿರುವುದರಿಂದ ಗಂಡ ಹೆಂಡತಿ ನಡುವೆ ಜಗಳ ಆಗುತಿತ್ತು. ರಾತ್ರಿ ತನ್ನ ಪತ್ನಿಗೆ ಕತ್ತಿಯಿಂದ ಗಾಯಗೊಳಿಸಿದ್ದ ಬಳಿಕ ಗಾಯಗೊಂಡ ಪತ್ನಿ ಮತ್ತು ಮಕ್ಕಳನ್ನು ಕೊಣೆಯಲ್ಲಿ ಕೂಡಿ ಹಾಕಿದ್ದ ಎನ್ನಲಾಗಿದೆ. ಬಳಿಕ ತಾನೂ ಅಡುಗೆ ಕೋಣೆಯಲ್ಲಿ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದ ಸಂಬಂಧಿಕರು  ಓಡಿ ಬಂದು ಮನೆಯ ಬೀಗ ಒಡೆದಾಗ ಘಟ‌ನೆ ಬೆಳಕಿಗೆ ಬಂದಿದೆ.  ತೀವೃ ಗಾಯಗೊಂಡಿದ್ದ ಶೈಲಾಳನ್ನ ಹೊನ್ನಾವರ ಆಸ್ಪತ್ರೆಗೆ ದಾಖಲಿಸಿದಾದರೂ ಪ್ರಯೋಜನವಾಗಿಲ್ಲ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಲಾಗಿದೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...