ಜಿಲ್ಲಾ ಪೊಲೀಸ್ ಇಲಾಖೆ: ಸಕಾಲ ಯೋಜನೆ ಪರಿಶೀಲನಾ ಪ್ರಮಾಣ ಪತ್ರಗಳಿಗಾಗಿ ಸಾರ್ವಜನಿಕರಿಗೆ ಆನ್ಲೈನ್ದಲ್ಲಿ ಅರ್ಜಿ ಸಲ್ಲಿಸಲು ಅವಕಾಶ : ಎಸ್.ಪಿ. ಕೃಷ್ಣಕಾಂತ
ಧಾರವಾಡ : ಜಿಲ್ಲೆಯ ಸಾರ್ವಜನಿಕರಿಗೆ ಸಕಾಲ ಯೋಜನೆಯಡಿ ಒಳಗೊಂಡಿರುವ ಪೊಲೀಸ್ ಇಲಾಖೆಯಿಂದ ಪೂರೈಸುವ ಪರೀಶಿಲನಾ ಪ್ರಮಾಣ ಪತ್ರಗಳಿಗೆ ಪಿವಿಸಿ (ಪೊಲೀಸ್ ವೇರಿಪಿಕೆಶನ್ ಸರ್ಟಿಪಿಕೆಟ್) ಇನ್ನೂ ಮುಂದೆ ಪೊಲೀಸ್ ಅಧೀಕ್ಷಕರು ಧಾರವಾಡ ರವರ ಕಛೇರಿಗೆ ಖುದ್ದಾಗಿ ಬಂದ ಅರ್ಜಿ ಸಲ್ಲಿಸುವ ಬದಲಾಗಿ ಸೇವಾ ಸಿಂಧು ಅಂತರ ಜಾಲ ವೆಬ್ ಸೈಟ್ ಮೂಲಕ ಆನ್ಲೈನ್ ದಲ್ಲಿ ಅರ್ಜಿ ಸಲ್ಲಿಸಿ ತಮಗೆ ಅಗತ್ಯ ವಿರುವ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾರ್ವಜನಿಕರು ಅನಗತ್ಯವಾಗಿ ಕಚೇರಿಗೆ ಅಲಿಯದೆ ಸೇವಾ ಸಿಂಧು ಅಂತರ ಜಾಲ ವೆಬ್ ಸೈಟ್ https://sevasindhu.karnataka.gov.in ಮೂಲಕ ಆನ್ಲೈನದಲ್ಲಿ ಸೇವೆಗಳಿಗೆ ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಆನ್ಲೈನದಲ್ಲಿಯೇ ಪಡೆಯಬಹುದಾಗಿದೆ.
ಆನ್ಲೈನದಲ್ಲಿ ಸಲ್ಲಿಸಿರುವ ಅರ್ಜಿ ಹಂತ ಮತ್ತು ವಿತರಣೆ ಕುರಿತು ಅರ್ಜಿದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಾಹಿತಿ ರವಾಣಿಸಲಾಗುತ್ತದೆ. ಸಂಸ್ಥೆಗಳು, ಕಂಪನಿಗಳಿಗೆ ಪೊಲೀಸ್ ಪರಿಶೀಲನೆ ಪ್ರಮಾಣ ಪತ್ರ, ಮದುವೆ ಸಂಬಂಧ ಪೂರ್ವಗತಿ ಪರಿಶೀಲನೆ, ನಡತೆ ಪರಿಶೀಲನೆ ಪ್ರಮಾಣ ಪತ್ರ, ಕೂಲಿ, ಲೋಡರ್, ಕ್ಲಾಸ 4, ಭದ್ರತಾ ಸಿಬ್ಬಂದಿ, ವಿಮಾನ ನಿಲ್ದಾಣದಲ್ಲಿ ಮೇಲ್ವಿಚಾರಕರಿಗೆ (ವೈಯಕ್ತಿಕ ಅರ್ಜಿದಾರರು ಮಾತ್ರ) ಬೇಕಾದ ಪರೀಶಿಲನಾ ಪ್ರಮಾಣ ಪತ್ರಗಳಿಗೆ, ಕೇಂದ್ರಿಯ, ರಾಜ್ಯ ಸರ್ಕಾರಿ ನೌಕರರಿಗೆ, ದೇಶಿಯ ಸೇವಕರು, ಮನೆಕೆಲಸದವರು ಮತ್ತು ವಿದೇಶಕ್ಕೆ ಪ್ರಯಾಣಿಸಲು ಅಗತ್ಯ ಪ್ರಮಾಣ ಪತ್ರಗಳನ್ನು ಆನ್ಲೈನ್ ಮೂಲಕ ನೀಡಲಾಗುವುದು.
ಸಕಾಲ ಯೋಜನೆಯಡಿ ಒಳಗೊಂಡಿರುವ ಪೊಲೀಸ್ ಇಲಾಖೆಯ ಸೇವೆಗಳನ್ನು ಸೇವಾ ಸಿಂಧು ಅಂತರ ಜಾಲ ವೆಬ್ ಸೈಟ್ ಮೂಲಕ ಆನ್ಲೈನ್ ದಲ್ಲಿ ಅರ್ಜಿ ಸಲ್ಲಿಸಿ ತಮಗೆ ಅಗತ್ಯ ವಿರುವ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳವ ಮೂಲಕ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ.ಕೃಷ್ಣಕಾಂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.