ಜನರು ಬುದ್ಧ ಮಾರ್ಗದಲ್ಲಿ ನಡೆಯಬೇಕು

Source: sonews | By Staff Correspondent | Published on 12th November 2019, 10:28 PM | State News |

ಶ್ರೀನಿವಾಸಪುರ: ಜನರು ಬುದ್ಧ ಮಾರ್ಗದಲ್ಲಿ ನಡೆಯಬೇಕು. ಹಿಂಸೆ ಬಿಟ್ಟು ಶಾಂತಿಯುತ ಜೀವನ ಮಾಡಬೇಕು  ಎಂದು ಬೌದ್ಧ ಭಿಕ್ಕು ಸುಗತಲೋಕಪಾಲೋ ಹೇಳಿದರು.

ತಾಲ್ಲೂಕಿನ ಮಲ್ಲಗಾನಹಳ್ಳಿ ಗ್ರಾಮದಲ್ಲಿ ವಿಶ್ವ ಬುದ್ಧ ಧಮ್ಮ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಧಮ್ಮ ಜಾಗೃತಿ ಅಭಿಯಾನದ ದೀಕ್ಷಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬುದ್ಧನ ಪಂಚಶೀಲ ತತ್ವಗಳು ಹಾಗೂ ತ್ರಿರತ್ನಗಳಿಗೆ ಶರಣಾದಾಗ ಮಾತ್ರ ಸತ್ಯದ ದರ್ಶನವಾಗುತ್ತದೆ. ಧಮ್ಮ ದೀಕ್ಷೆ ಸ್ವೀಕರಿಸಿದ ಮೇಲೆ ಕವಲು ದಾರಿಯಲ್ಲಿ ನಡೆಯುವುದನ್ನು ಬಿಡಬೇಕು. ದೀಕ್ಷೆಗೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ಆರ್‌ಪಿಐ ಅಧ್ಯಕ್ಷ ಡಾ. ಎಂ.ವೆಂಕಟಸ್ವಾಮಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿ, ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಸಮ ಸಮಾಜದ ಪ್ರತೀಕ. ಅವರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಡಾ. ಎಚ್‌.ಆರ್‌.ಸುರೇಂದ್ರ ಅಂಬೇಡ್ಕರ್‌ ಅವರ 22 ಸತ್ಯ ವಾಕ್ಯಗಳನ್ನು ಬೋಧಿಸಿದರು. ಸಾಹಿತಿ ಮೂಡ್ಕಾಕು ಚಿನ್ನಸ್ವಾಮಿ ಜ್ಞಾನ ಜ್ಯೋತಿ ಪ್ರತಿಮೆ ಅನಾವಣ ಮಾಡಿದರು. ಧಮ್ಮ ಭಿಕ್ಕುಗಳು ಧಮ್ಮ ಜಾಗೃತಿ ಅಭಿಯಾನ ದೀಕ್ಷೆ ಬೋಧಿಸಿದರು.

ನಿವೃತ್ತ ಐಜಿಪಿ ಡಾ. ಸುಭಾಷ್ ಭರಣಿ, ನಿವೃತ್ತ ಮುಖ್ಯ ಶಿಕ್ಷಕ ಎಂ.ಪಾಪಣ್ಣ, ಮುಖಂಡರಾದ ಹೂವಳ್ಳಿ ಪ್ರಕಾಶ್‌, ನರಸಿಂಹಪ್ಪ, ರಾಮಾಂಜಮ್ಮ, ನಾರಾಯಣಸ್ವಾಮಿ, ಎಂ.ಲೋಕೇಶ್‌, ಎನ್‌.ಮೂರ್ತಿ, ಆರ್‌.ಎಂ.ಎನ್‌.ರಮೇಶ್‌, ಮುನಿಯಪ್ಪ, ಡಾ. ಜಿ.ಗೋವಿಂದಯ್ಯ, ರಾಜಣ್ಣ, ದೇವಕೃಷ್ಣ, ಎಂ.ಲಗುಮಯ್ಯ ಮತ್ತಿತರರು ಇದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...