ಪ್ರೀತಿಸಿ ಮದುವೆಯಾದ ಜೋಡಿ, ಯುವತಿ ತಂದೆ-ತಾಯಿಯಿಂದ ವಿರೋಧ: ಬಾಗಲಕೋಟೆ ಎಸ್​ಪಿ ಕಚೇರಿಗೆ ಸಹಾಯ ಅರಸಿ ಬಂದ ಪ್ರೇಮಿಗಳು

Source: S.O. News Service | By MV Bhatkal | Published on 27th February 2021, 5:45 PM | State News |

ಬಾಗಲಕೋಟೆ: ಒಂದು ಕಡೆ ಪ್ರೀತಿಸಿ ಮದುವೆಯಾಗಿದ್ದೇವೆ, ನಮಗೆ ರಕ್ಷಣೆ ಕೊಡಿ ಎಂದು ಪ್ರೇಮಿಗಳು ಮನವಿ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಅನ್ಯಕೋಮಿನ ಯುವಕನ ಜೊತೆ ಮದುವೆಯಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಯುವತಿಯ ಸಹೋದರ ಎಸ್​ಪಿ ಕಚೇರಿಯಲ್ಲಿಯೇ ಕಪಾಳ ಮೋಕ್ಷ ಮಾಡಿದ್ದಾನೆ. ಜೊತೆಗೆ ಯುವತಿಯ ತಂದೆ ಎಸ್​ಪಿ ಕಾಲಿಗೆ ಬಿದ್ದು ಒಬ್ಬಳೇ ಮಗಳು ಕಳುಹಿಸಿಕೊಡಿ ಎಂದು ಬೇಡಿಕೊಳ್ಳುತ್ತಿದ್ದು ಬಾಗಲಕೋಟೆಯ ಎಸ್​ಪಿ ಕಚೇರಿಯಲ್ಲಿ ಒಂದು ಕ್ಷಣ ಬಿಗಡಾಯಿಸಿದ ಸನ್ನಿವೇಶ ಕಂಡುಬಂತ್ತು.
ಬಾಗಲಕೋಟೆಯ‌ ನವನಗರದ ಸೆಕ್ಟರ್ ನಂ 44ರ ನಿವಾಸಿಗಳಾದ ಈ ಪ್ರೇಮಿಗಳ ಹೆಸರು ನವೀನ ಭಜಂತ್ರಿ ಹಾಗೂ ಮಹಜಬಿನ್ ಮಂಟೂರು. ಅಕ್ಕಪಕ್ಕದಲ್ಲಿಯೇ ಇಬ್ಬರ ಮನೆ ಇದ್ದು, ಕಳೆದ ಏಳು ವರ್ಷದಿಂದ ನವೀನ ಪಕ್ಕದ ಮನೆಯ ಮಹಜಬಿನ್ ಅನ್ನು ಪ್ರೀತಿಸುತ್ತಿದ್ದಾನೆ. ಸದ್ಯ ಯುವತಿ ಮಹಜಬಿನ್​ಗೆ 19 ವರ್ಷ, ಅಂದರೆ 12 ವರ್ಷದ ಬಾಲ್ಯದಲ್ಲೇ ಇವರಿಬ್ಬರ ನಡುವೆ ಪ್ರೀತಿ ಆರಂಭವಾಗಿದ್ದು, ಈಗ ಪ್ರಾಯದ ಹಂತಕ್ಕೆ ಬಂದು ಮದುವೆ ಕೂಡ ಆಗಿದೆ.
ನವೀನ ಭಜಂತ್ರಿ ಹಾಗೂ ಮಹಜಬಿನ್ ಮಂಟೂರು, ಫೆಬ್ರವರಿ 16ರಂದು ಬಾಗಲಕೋಟೆಯ ಮಲ್ಲಯ್ಯನಗುಡಿಯಲ್ಲಿ ಮದುವೆಯಾಗಿದ್ದಾರೆ. ಆದರೆ ಈ ಮದುವೆಗೆ ಹುಡುಗಿ ಮನೆಯವರ ವಿರೋಧವಿದ್ದು ರಕ್ಷಣೆ ಕೋರಿ ಪ್ರೇಮಿಗಳು ಎಸ್​ಪಿ ಮೊರೆ ಹೋಗಿದ್ದರು. ಈ ವೇಳೆ ಮಗಳ ಹಿಂದೆ ಬಂದ ತಂದೆ ಸಲೀಂ ಹಾಗೂ ಸಹೋದರ ಅಹ್ಮದ್ ಅಲಿ ಪ್ರೇಮಿಗಳ ಮೇಲೆ ಹಲ್ಲೆ‌ ಮಾಡಲು ಮುಂದಾಗಿದ್ದಾರೆ. ಯುವತಿಯ ಸಹೋದರ ಅಹ್ಮದ್ ಅಲಿ ಎಸ್​ಪಿ ಕಚೇರಿಯಲ್ಲೇ ಸಹೋದರಿಗೆ ಕಪಾಳಮೋಕ್ಷ ಮಾಡಿದ ಘಟನೆ ಕೂಡ ನಡೆಯಿತು.
ಸದ್ಯ ಇಬ್ಬರು ಪ್ರೇಮಿಗಳು ನಾವು ಒಬ್ಬರನ್ನೊಬ್ಬರು ಬಿಟ್ಟು ಬದುಕುವುದಿಲ್ಲ, ನಮಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಎಸ್​ಪಿ ಅವರು ರಿಜಿಸ್ಟರ್ ಮದುವೆಯಾಗಿ ರಕ್ಷಣೆ ‌ನೀಡುತ್ತೇವೆ ಎಂದು ಹೇಳಿದ್ದು,ಸದ್ಯ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...