ಮಂಡ್ಯ:- ಕ್ರೀಡಾ ಮಕ್ಕಳಿಗೆ ಅದರಲ್ಲೂ ವಿಶೇಷ ವಿಕಲಚೇತನ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಕ್ರೀಡಾಪುಟುಗಳು ಇನ್ನೂ ಹೆಚ್ಚು ಹೆಚ್ಚು ಪದಕಗಳನ್ನು ಗೆದ್ದು ತಂದುಕೊಡುವುದರ ಮೂಲಕ ರಾಜ್ಯ ಹಾಗೂ ರಾಷ್ಟ್ರಕ್ಕೆ ಹೆಮ್ಮೆ ತರಬೇಕೆಂದು ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ಡಾ. ಜಿ ಕಲ್ಪನಾ ಗೋಪಾಲನ್ ಅವರು ತಿಳಿಸಿದರು.
ಅವರು ಇಂದು ಮಾಧುರಿ ಜೈ ಅವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಬಿ.ವಿ ನಂದೀಶ್ ಅವರು ಮಾತನಾಡಿ ಮಂಡ್ಯ ಜಿಲ್ಲೆಗೆ ಇದೊಂದು ಹೆಮ್ಮೆಯ ದಿನ ಎಂದು ಹೇಳಬಹುದು. ಕ್ರೀಡೆಯಲ್ಲಿ ಭಾರತ ಇತ್ತೀಚಿಗೆ ಜಾಗತೀಕ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಅದೇ ರೀತಿ ಮಂಡ್ಯ ಜಿಲ್ಲೆಯ ಬಾಲಪ್ರತಿಭೆಯಾಗಿ ಅಂತರಾಷ್ಟ್ರೀಯ ಮಟ್ಟದ ಚೆಸ್ ಆಟದಲ್ಲಿ ಗುರುತಿಸಿಕೊಂಡಿರುವುತಂಹ ಮಾಧುರಿ ಜೈ ಈಗ ಬಾಲಪತ್ರಿಭೆಗಳಿಗೆ ಕೋಚ್ ಆಗಿದ್ದು ಈ ದಿವಸ ಏಷ್ಯಾ ಮಟ್ಟದಲ್ಲಿ ಭಾಗವಹಿಸಿ ಭಾರತಕ್ಕೆ ಚಿನ್ನದ ಪದಕ ತಂದುಕೊಡುವುದಕ್ಕೆ ಮಾಧುರಿ ಜೈ ಹಾಗೂ ಕೋಚ್ ಅವರ ಪಾತ್ರ ಬಹಳ ಮುಖ್ಯವಾದುದ್ದು ಎಂದು ಹೇಳಿದರು.