ನಿಯಂತ್ರಣ ಕಳೆದುಕೊಂಡು ಕಾರು; ವಿದ್ಯುತ್ ಕಂಬಕ್ಕೆ ಡಿಕ್ಕಿ
ಭಟ್ಕಳ: ವೇಗವಾಗಿ ಚಲಿಸುತ್ತಿದ್ದ ಕಾರೊಂದು ನಿಯಂತ್ರ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನವಾಯತ್ ಕಾಲೋನಿ ರಾ.ಹೆ.66ರಲ್ಲಿ ಗುರುವಾರ ಸಂಭವಿಸಿದೆ.
ಈ ಘಟನೆಯಲ್ಲಿ ಕಾರಿನ ಮುಂದಿನ ಭಾಗ ನುಜ್ಜುಗುಜ್ಜಾಗಿದ್ದು ಯಾವುದೇ ಜೀವನ ಹಾನಿ ಸಂಭಿವಿಸಿರುವುದಿಲ್ಲ.
ತೆಲಂಗಾಣದ ಚಂಗಿ ರಮೇಶ ತನ್ನ ಸ್ವಿಫ್ಟ್ ಕಾರಿನಿಲ್ಲಿ ಮಂಗಳೂರು ಕಡೆಯಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಎನ್ನಲಾಗಿದ್ದು ಇಲ್ಲಿನ ಜಾಲಿ ಕ್ರಾಸ್ ಬಳಿಯ ಹೆದ್ದಾರಿ 66ರಲ್ಲಿ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ವಿದ್ಯುತ್ ಕಂಬಕ್ಕೆ ವಿದ್ಯುತ್ ಸಂಪರ್ಕ ಇನ್ನೂ ಕೊಟ್ಟಿರಲಿಲ್ಲ ಎಂದು ಹೇಳಲಾಗಿದೆ.