ಧಾರವಾಡ:ವಿಕಲಚೇತನರು ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಲು ಅನುಕೂಲವಾಗುವಂತೆ ವಾಹನ ವ್ಯವಸ್ಥೆ, ಮತಗಟ್ಟೆ ಕೇಂದ್ರದಲ್ಲಿ ರ್ಯಾಂಪ್, ವ್ಹಿಲ್ಚೇರ್, ಬ್ರೆöಲ್ ಲಿಪಿ ಇರುವ ಮತಯಂತ್ರದ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಸೌಲಭ್ಯ ಅಗತ್ಯವಿರುವ ಅರ್ಹ ವಿಕಲಚೇತನರು ಉಚಿತ ಸಹಾಯವಾಣಿ ೧೯೫೦ ಕ್ಕೆ ಕರೆ ಮಾಡುವ ಮೂ¯ಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಅವರು ನಿನ್ನೆ ೨೮-೦೩-೨೦೧೯ ರಂದು ಸಂಜೆ ದಾರವಾಡ ಆಕಾಶವಾಣಿ ಕೇಂದ್ರ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.
ಧಾರವಾಡ ಲೋಕಸಭಾ ಕ್ಷೆತ್ರಕ್ಕೆ ಸಂಬಂಧಿಸಿದ ಸಾರ್ವತ್ರಿಕ ಚುನಾವಣೆಗಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಕಲಚೇತನರು ತಮ್ಮ ಮತದಾನದ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.
ನವಲಗುಂದ ತಾಲೂಕಿನ ಶಿರೋಳ ಗ್ರಾಮದ ವಿಕಲಚೇತನ ಉದಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಪ್ರತಿಯೊಬ್ಬ ಅರ್ಹ ವಯಸ್ಕರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತರಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸಹಾಯವಾಣಿ ೧೯೫೦ ಕ್ಕೆ ಕರೆ ಮಾಡಬಹುದು ಅಥವಾ ಭಾರತ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಸಿವ್ಹಿಜಿಲ್ ಆ್ಯಪ್ ಬಳಸಬಹುದು.
ವಿಕಲಚೇತನರು ಮತದಾನ ಮಾಡಲು ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಿದ್ದು. ಮತಗಟ್ಟೆಗೆ ಮತದಾನಕ್ಕಾಗಿ ಬರುವ ವಿಕಲಚೇತನರಿಗೆ ಜಿಲ್ಲಾಡಳಿತ ವಾಹನ ವ್ಯವಸ್ಥೆ ಮಾಡಲಿದೆ. ಮತ್ತು ಅವರಿಗೆ ಒಬ್ಬ ಸಹಾಯಕರನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ. ೧೮ ವರ್ಷ ತುಂಬಿದ ಒಬ್ಬ ವ್ಯಕ್ತಿಯು ಒಬ್ಬ ವಿಕಲಚೇತನರಿಗೆ ಮಾತ್ರ ಸಹಾಯಕರಾಗಿ ಬರಬಹುದು. ಅದೇ ವ್ಯಕ್ತಿ ಇನ್ನೊಬ್ಬ ವಿಕಲಚೇತನರಿಗೆ ಸಹಾಯಕನಾಗಲು ಅವಕಾಶವಿಲ್ಲ. ಈ ಎಲ್ಲ ಅನುಕೂಲತೆ ಪಡೆಯಲು ವಿಕಲಚೇತನರು ಮೊದಲೇ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಅಥವಾ ಮನೆಮನೆಗೆ ಮತದಾರರ ಚೀಟಿ ನೀಡಲು ಬರುವ ಸರಕಾರಿ ಸಿಬ್ಬಂದಿಗೆ ಮಾಹಿತಿ ನೀಡಿ ನೋಂದಾಯಿಸಬಹುದು ಎಂದು ಅವರು ಹೇಳಿದರು.
ಮೂದಲ ಬಾರಿಗೆ ಮತದಾನ ಮಾಡುತ್ತಿರುವ ನವ ಮತದಾರರಾಗಿರುವ ವಿಕಲಚೇತನ ರವಿ ಹಿರೇಮಠ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಸ್ವಿಪ್ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ್ ವಿಕಲಚೇತನರಿಗೆ ಅಗತ್ಯವಿರುವ ಮತದಾನ ಜಾಗೃತಿ, ವಿವಿಪ್ಯಾಟ್, ಮತಯಂತ್ರ ಪ್ರಾತ್ಯಕ್ಷಿಕೆ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಗದಗ ಜಿಲ್ಲೆಯಿಂದ ಕರೆ ಮಾಡಿದ ದೃಷ್ಟಿವಿಕಲಚೇತನ ಪ್ರಕಾಶ ಕಟ್ನಳ್ಳಿ, ಬ್ರೆöಲ್ ಲಿಪಿ ಇರುವ ಮತಯಂತ್ರ ನೀಡಿದರೆ ಸಾಲದು. ನಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾವಣೆ ಆಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ಮತದಾನ ಖಾತ್ರಿ ವಿ.ವಿ.ಪ್ಯಾಟ್ ಯಂತ್ರಕ್ಕೆ ಹೆಡ್ಫೋನ್ ಸೌಲಭ್ಯ ಕಲ್ಪಿಸಿ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ್ ನೀವು ಕೇಳಿದ ಪ್ರಶ್ನೆ ಅತ್ಯಂತ ಸೂಕ್ತವಾಗಿದೆ. ಈ ಸೌಲಭ್ಯಕ್ಕಾಗಿ ಭಾರತ ಚುನಾವಣಾ ಆಯೋಗಕ್ಕೆ ಹಿಮ್ಮಾಹಿತಿ ಸಲ್ಲಿಸಲಾಗುವುದು ಎಂದು ಹೇಳಿದರು.
ರಾಯಬಾಗ, ಬದಾಮಿ, ಗುಳೇದಗುಡ್ಡ, ಹಾರೋಗೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳುಗರ ಭಾಗವಹಿಸಿ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದರು.
ಆಕಾಶವಾಣಿ ಕೇಂದ್ರದ ನಿಲಯ ನಿರ್ದೆಶಕ ಸತೀಶ ಪರ್ವತಿಕರ ಕಾರ್ಯಕ್ರಮ ನಿರ್ವಹಿಸಿದರು. ಡಾ.ಗಿರೀಶ್.ವಿ. ಪಾಟೀಲ ಸಂಕಲನ ಮಾಡಿದರು. ತಹಶೀಲ್ದಾರ ಪ್ರಕಾಶ ಕುದರಿ ಉಪಸ್ಥಿತರಿದ್ದರು.