ಭಟ್ಕಳ: ಪುರಸಭೆ ಅಂಗಡಿ ಮಳಿಗೆ ಕಬ್ಜಾ ವಿಚಾರದಲ್ಲಿ ಮುಸ್ಲಿಮರ ಹಾಗೂ ತಂಝೀಮ್ ಸಂಸ್ಥೆಯ ವಿರುದ್ಧ ಹಿಂದೂ ಬಾಂಧವರಲ್ಲಿ ಕೋಮುದ್ವೇಶದ ಭಾವನೆ ಉಂಟು ಮಾಡಿ ರಾಜಕೀಯ ಲಾಭ ಗಳಿಸಲು ಸಂಘಪರಿವಾರ ಹುನ್ನಾರ ನಡೆಸಿದೆ ಎಂದು ಮಜ್ಲಿಸೆ ಇಸ್ಲಾಹ್ ತಂಝಿಮ್ ಸಂಸ್ಥೆ ಆರೋಪಿಸಿದೆ.
ಸೋಮವಾರ ತಂಝೀಮ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅಧ್ಯಕ್ಷ ಮುಝಮ್ಮಿಲ್ ಕಾಝೀಯಾ, ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ, ಪುರಸಭೆಯ ಅಂಗಡಿಗಳ ಸಮಸ್ಯೆಯನ್ನು ನೆಪವಾಗಿಟ್ಟು ಕೊಂಡು ಸಂಘಪರಿವಾರದ ನಾಯಕರಿಂದ ಭಟ್ಕಳದಲ್ಲಿ ಹಿಂದು ಮುಸ್ಲಿಮರ ನಡುವೆ ಕೋಮು ಭಾವನೆಯನ್ನು ಕೆರಳಿಸುವ ಪ್ರಯತ್ನ ಮಾಡುತ್ತಿರುವುದನ್ನು ಮಜ್ಲಿಸೆ ಇಸ್ಲಾಹೊ ತನ್ಝೀಮ್ ತೀವ್ರವಾಗಿ ಖಂಡಿಸುತ್ತದೆ. ಪುರಸಭೆಯ ಆಡಳಿತಾತ್ಮಕ ಹಾಗು ಕಾನೂನಿಗೆ ಸಂಬಂಧ ಪಟ್ಟ ಸಮಸ್ಯೆಯಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಮರು ಹಾಗು ಮಜ್ಲಿಸೆ ಇಸ್ಲಾಹೊ ತಂಝೀಮ್ ಸಂಸ್ಥೆಯನ್ನು ಎಳೆದು ತರುವುದು ಹಾಗು ಇದರೊಂದಿಗೆ ಮುಸ್ಲಿಮರ ಧಾರ್ಮಿಕ ಪಾಠಶಾಲೆಗಳಾದ ಮದ್ರಸಗಳನ್ನು ಬಾಂಬ್ ಉತ್ಪಾದಿಸುವ ಕಾರ್ಖಾನೆಗಳೆಂದು ಸಾರುವುದು, ತಂಝೀಮ್ ಸಂಸ್ಥೆಯನ್ನು ಗುರಿಯಾಗಿಸುವುದು ಸಂಘ ಪರಿವಾರದ ಮುಸ್ಲಿಮ್ ವಿರೋಧಿ ನಿಲುವಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದು ಅಧಿಕಾರದ ದುರಾಸೆಗಾಗಿ ಬಿ.ಜೆ.ಪಿ., ಮತ್ತು ಸಂಘ ಪರಿವಾರಗಳು ತಮ್ಮೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಕರಾವಳಿ ಪ್ರದೇಶದಲ್ಲಿ ಶಾಂತಿಯನ್ನು ಕದಡಿ ಪರಸ್ಪರರಲ್ಲಿ ವಿಷಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರವಾಗಿರುತ್ತದೆ. ಬಿ.ಜೆ.ಪಿ. ನಾಯಕರುಗಳ ಬಹಿರಂಗ ಹೇಳಿಕೆಗಳು ಇದಕ್ಕೆ ಪುಷ್ಠಿ ನೀಡುತ್ತಿವೆ. ಬಿ.ಜಿ.ಪಿ. ಯ ನಾಯಕರುಗಳು ಬಹುಸಂಖ್ಯಾತ ಹಿಂದು ಬಾಂಧವರನ್ನು ಉದ್ದೇಶಿಸಿ “ಭಟ್ಕಳದಲ್ಲಿ ಹಿಂದುಗಳ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ, ಅವರ ಜೀವನವನ್ನು ಸಂಕಷ್ಟಕ್ಕೀಡು ಮಾಡಲಾಗುತ್ತಿದೆ ಹಾಗು ಅವರನ್ನು ಭಟ್ಕಳದಿಂದ ಓಡಿಸುವ ಸಂಚು ನಡೆಯುತ್ತಿದೆ” ಎನ್ನುವ ಉದ್ರೇಕಕಾರಿ ಹೇಳಿಕೆಗಳಿಂದ ಹಿಂದೂ ಬಾಂಧವರ ಬಾವನೆಗಳನ್ನು ಕೆರಳಿಸಿ ಕೋಮು ಸಂಘರ್ಷಕ್ಕೆ ನಾಂದಿ ಹಾಡುವ ಪ್ರಯತ್ನ ನಡೆಯುತ್ತಿದೆ.ಇದರಿಂದಾಗಿ ಭಟ್ಕಳದ ಹೊರಗೆ ವಾಸಿಸುವ ನೆರೆಕರೆಯವರಿಗೆ ವಿಷೇಶವಾಗಿ ಮುಸ್ಲಿಮೇತರರಿಗೆ ಭಟ್ಕಳದಲ್ಲಿ ಮುಸ್ಲಿಮೇತರರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ ಎನ್ನುವ ಸಂದೇಶ ರವಾನೆಯಾಗುತ್ತಿದೆ.
೧೯೯೩ ರಲ್ಲಿ ಭಟ್ಕಳದಲ್ಲಿ ಕೋಮುಗಲಭೆಯನ್ನು ಸೃಷ್ಟಿಸಿದ್ದು ಈಗ ಮತ್ತೆ ಅದೇ ತಂತ್ರವನ್ನು ಬಳಸಿ ರಾಜಕೀಯ ಲಾಭಗಳಿಸುವ ಹುನ್ನಾರ ನಡೆಸುತ್ತಿದೆ ಎಂದು ತಂಝೀಮ್ ಮುಖಂಡರು ಆರೋಪಿಸಿದರು.
ಪುರಸಭೆಯ ಅಂಗಡಿಗಳ ಸಮಸ್ಯೆಯು ಅಕ್ಷರಶಃ ಕಾನೂನಿಗೆ ಒಳಪಟ್ಟುದು ಹಾಗು ಆಡಳಿತಾತ್ಮಕ ಸಮಸ್ಯೆಯಾಗಿರುತ್ತದೆ. ಇದನ್ನು ತನ್ಝ್ಝೀಮ್ ಹಾಗು ಮುಸ್ಲಿಮರೊಂದಿಗೆ ಜೋಡಿಸುವುದು ಕೇವಲ ಮುಸ್ಲಿಮ್ ವಿರೋಧಿ ನಿಲುವು ಹಾಗು ದುರ್ಬುಧ್ಧಿಯಿಂದ ಕೂಡಿದ್ದಾಗಿರುತ್ತದೆ ವಿನಹ ಬೇರೇನೂ ಅಲ್ಲ. ಪ್ರಸ್ತುತ ಅಂಗಡಿಕಾರರಲ್ಲಿ ಮುಸ್ಲಿಮರೂ ಹಿಂದುಗಳೂ ಎರಡೂ ವರ್ಗದ ಜನರಿರುತ್ತಾರೆ. ರಾಮಚಂದ್ರ ನಾಯ್ಕರ ಮರಣದ ಬಗ್ಗೆ ನಮಗೆಲ್ಲರಿಗೂ ದುಖಃವಿದೆ. ಇದು ಒಂದು ದೊಡ್ಡ ದುರಂತವಾಗಿದೆ. ನಮ್ಮ ಅನುಕಂಪ ಅವರ ಕುಟುಂಬದೊಂದಿಗೆ ಎಂದು ಅಧ್ಯಕ್ಷ ಮುಜಮ್ಮಿಲ್ಲ ಕಾಝಿಯಾ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸೈಯ್ಯದ್ ಯಾಸಿರ್ ನದ್ವಿ ಬರ್ಮಾವರ್, ಡಿ.ಎಫ್ ಸಿದ್ದೀಖ್, ಸನಾವುಲ್ಲಾ ಗವಾಯಿ, ಉಪಾಧ್ಯಕ್ಷ ಎಸ್.ಎಂ.ಸೈಯ್ಯದ್ ಅಬುಲ್ ಖಾಸಿಮ್, ಸೈಯ್ಯದ್ ಮುಹಿದ್ದೀನ್ ಬರ್ಮಾವರ ಮತ್ತಿತರರು ಉಪಸ್ಥಿತರಿದ್ದರು.
Read These Next
ಕಾರವಾರ: ಮಾದರಿ ನೀತಿ ಸಂಹಿತೆ ಉಲ್ಲಂಘನೆ : ವಸ್ತುಗಳ ವಶ
ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಏಪ್ರಿಲ್ 27 ರ ...
ಕಾರವಾರ: ಮನೆಯಿಂದ ಮತದಾನ ವೀಕ್ಷಿಸಿದ ಜಿಲ್ಲಾಧಿಕಾರಿಗಳು
ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗಾಗಿ ನಡೆಯುತ್ತಿರುವ ಮನೆಯಿಂದ ಮತದಾನ ಕಾರ್ಯವನ್ನು ಜಿಲ್ಲಾ ...
ಕಾರವಾರ: ಚುನಾವಣಾ ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿಗಳು
ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೆರೆಗೆ , ಜಿಲ್ಲಾಡಳಿತ, ಜಿಲ್ಲಾ ಸ್ವಿಪ್ ಸಮಿತಿವತಿಯಿಂದ ಮತದಾರಿಗೆ ಜಾಗೃತಿ ಹಾಗೂ ಮತದಾರರಿಗೆ ...
ಕಾರು ಮರಕ್ಕೆ ಡಿಕ್ಕಿ:ಯುವತಿ ಸ್ಥಳದಲ್ಲಿ ಸಾವು,ನಾಲ್ವರಗೆ ಗಂಭೀರ ಗಾಯ
ಕಾರು ಮರಕ್ಕೆ ಡಿಕ್ಕಿ:ಯುವತಿ ಸ್ಥಳದಲ್ಲಿ ಸಾವು,ನಾಲ್ವರಗೆ ಗಂಭೀರ ಗಾಯ
ಕೇರಳದಲ್ಲಿ ಹೆಚ್ಚಿದ ಹಕ್ಕಿಜ್ವರ; ಗಡಿಯಲ್ಲಿ ತೀವ್ರ ಕಟ್ಟೆಚ್ಚರ
ಕೇರಳದಲ್ಲಿ ಹೆಚ್ಚಿದ ಹಕ್ಕಿಜ್ವರ; ಗಡಿಯಲ್ಲಿ ತೀವ್ರ ಕಟ್ಟೆಚ್ಚರ
ಕರ್ನಾಟಕದಾದ್ಯಂತ ಗ್ಯಾರಂಟಿ ಅಲೆ- ರವೀಂದ್ರ ನಾಯ್ಕ.
ಕರ್ನಾಟಕದಾದ್ಯಂತ ಗ್ಯಾರಂಟಿ ಅಲೆ- ರವೀಂದ್ರ ನಾಯ್ಕ.
ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ
ಜಿಲ್ಲೆಯಲ್ಲಿ ಶುಕ್ರವಾರ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳುವ ಹಂತದಲ್ಲಿ ಬಿಜೆಪಿ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಮಾರಾಮಾರಿ ...
ಹನೂರು: ಇಂಡಿಗನ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂಗೆ ಹಾನಿ ತಹಶೀಲ್ದಾರ್, ಇನ್ಸ್ಪೆಕ್ಟರ್, ಚುನಾವಣಾಧಿಕಾರಿ ಸಹಿತ ಹಲವರಿಗೆ ಗಾಯ
ಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಮೆಂದಾರೆ ಮತಗಟ್ಟೆ ಬಳಿ ಮತದಾನ ನಡೆಯುವ ಬದಲು ರಣರಂಗವಾಗಿ ಮಾರ್ಪಟ್ಟು ಮತಗಟ್ಟೆ ಸಂಪೂರ್ಣ ...
ಬಿಸಿಲಿನ ತಾಪಮಾನ ಏರಿಕೆಯ ನಡುವೆಯೂ ಹಕ್ಕು ಚಲಾಯಿಸಿದ ಮೆತದಾರರು
ತಾಪಮಾನ ಏರಿಕೆಯ ನಡುವೆಯೂ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಬಿರುಸಿನಿಂದ ಸಾಗಿದೆ. ಶುಕ್ರವಾರ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ...
ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81
ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...
ಮನೆಯಿಂದ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ
ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...
ಚಿಂಚೋಳಿಯಲ್ಲಿ ಬೈಕ್ ಜಾಥಾದ ಮೂಲಕ ಮತದಾನದ ಜಾಗೃತಿ
ಕಲಬುರಗಿ : ಚಿಂಚೋಳಿ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಹಾಗೂ ತಾಲೂಕು ಪಂಚಾಯತ ವತಿಯಿಂದ ಹಮ್ಮಿಕೊಳ್ಳಲಾದ "ಮತದಾನ ಜಾಗೃತಿ ಜಾಥಾ ...
ಕಾರು ಮರಕ್ಕೆ ಡಿಕ್ಕಿ:ಯುವತಿ ಸ್ಥಳದಲ್ಲಿ ಸಾವು,ನಾಲ್ವರಗೆ ಗಂಭೀರ ಗಾಯ
ಕಾರು ಮರಕ್ಕೆ ಡಿಕ್ಕಿ:ಯುವತಿ ಸ್ಥಳದಲ್ಲಿ ಸಾವು,ನಾಲ್ವರಗೆ ಗಂಭೀರ ಗಾಯ
ಅರಣ್ಯ ಭೂಮಿ ಹಕ್ಕು ನೀಡುವುದು ಜನಪ್ರತಿನಿಧಿಗಳ ಧರ್ಮ- ರಂಜಿತಾ ರವೀಂದ್ರ.
ಅರಣ್ಯ ಭೂಮಿ ಹಕ್ಕು ನೀಡುವುದು ಜನಪ್ರತಿನಿಧಿಗಳ ಧರ್ಮ- ರಂಜಿತಾ ರವೀಂದ್ರ.
ರಸ್ತೆ ಅಪಘಾತ: ಗಾಯಾಳುವನ್ನ ಆಸ್ಪತ್ರೆಗೆ ಕರೆದೊಯ್ದು ವೈದ್ಯೋಪಚಾರ ನೀಡಿದ ಡಾ.ಅಂಜಲಿ.
ಯಲ್ಲಾಪುರ: ತಾಲೂಕಿನ ಹೆದ್ದಾರಿಯಲ್ಲಿ ಸ್ಕಿಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರನನ್ನ ತಮ್ಮದೇ ಕಾರಿನಲ್ಲಿ ...
ಮನೆಯಿಂದ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ
ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...
ಚಿಂಚೋಳಿಯಲ್ಲಿ ಬೈಕ್ ಜಾಥಾದ ಮೂಲಕ ಮತದಾನದ ಜಾಗೃತಿ
ಕಲಬುರಗಿ : ಚಿಂಚೋಳಿ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಹಾಗೂ ತಾಲೂಕು ಪಂಚಾಯತ ವತಿಯಿಂದ ಹಮ್ಮಿಕೊಳ್ಳಲಾದ "ಮತದಾನ ಜಾಗೃತಿ ಜಾಥಾ ...
ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್
ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...