ಭಟ್ಕಳ:ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದಂತೆ ಮೀನುಗಾರರು ಸಾಲ ಘೋಷಣೆ ಮಾಡಿದ್ದು ಇಲ್ಲಿವರೆಗೆ ಸಾಲ ಮನ್ನಾ ಪ್ರಕ್ರಿಯೆ ಆರಂಭವಾಗದ ಮೀನುಗಾರ ಹಾಗೂ ಸಹಕಾರಿ ಸಂಘಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಇನ್ನು ತಡಮಾಡದೆ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಭಟ್ಕಳ ತಾಲ್ಲೂಕು ಮೀನುಗಾರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಠ್ಠಲ್ ದೇವಿಮನೆ ಆಗ್ರಹಿಸಿದ್ದಾರೆ.
ಅವರು ಸತ್ಕಾರ ಹೋಟೆಲಿನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು.ಮತ್ಸ್ಯ ಕ್ಷಾಮದಿಂದಾಗಿ ಮೀನುಗಾರರು ಹೈರಾಣಾಗಿ ಹೋಗಿದ್ದಾರೆ. ಪಡೆದ ಸಾಲವನ್ನು ತುಂಬಲಾಗದ ಅಸಹಾಯಕ ಸ್ಥಿತಿಯನ್ನು
ಅನುಭವಿಸುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಾಲ ಮನ್ನಾ ಯೋಜನೆ ಘೋಷಣೆ ಸುತ್ತಿದ್ದತೆಯೇ ಮೀನುಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈ ಸಂಬಂಧ ಕಳೆದ ಆಗಸ್ಟ್ 1 ರಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಉಪಸ್ಥಿಯಲ್ಲಿ ನಡೆದ ಸಭೆಗೆ ಸಹಕಾರಿ ಸಂಘಗಳು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಪಾಲ್ಗೊಂಡಿದ್ದರು, ಸದರಿ ಸಭೆಯಲ್ಲಿ 2019 ಮಾರ್ಚ31ರ
ಕಾಲಾವಾಧಿಯೊಗಿನ ಸಾಲಗಾರರ ಯಾದಿಯನ್ನು ತಯಾರಿಸುವಂತೆ ತಿಳಿಸಲಾಗಿತ್ತು.ಆದರೆ ಇಲ್ಲಿವರೆಗೆ ಸಾಲಮನ್ನಾ ಪ್ರಕ್ರಿಯೆ ಆರಂಭವಾಗಿಲ್ಲ ಅಲ್ಲದೆ ಸಾಲ ಮನ್ನಾ ವಿಚಾರವಾಗಿ ಸಾಮಾಜಿಕ ಜಾಲಗಳ ಸುದ್ದಿ ಹರಿದಾಡುತ್ತಿದ್ದು,ಸಾಲಗಾರರು ಸಾಲ ಮರುಪಾವತಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.ಇದ ರಿಂದ ಸಹಕಾರಿ ಸಂಘಗಳ ಮೇಲೆ ದುಷ್ಟಪರಿಣಾಮ ಬೀರಿದೆ .ಜಿಲ್ಲೆಯ ಉಸ್ತುವಾರಿ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸಂಸದರು, ಎಲ್ಲರೂ ಸೇರಿ ಸರಕಾರದ ಮೇಲೆ ಒತ್ತಡ ಹೇರಿ ಜನರಿಗೆ ನ್ಯಾಯ ಒದಗಿಸಬೇಕು ಎಂದು ವಿನಂತಿಸಿಕೊಂಡರು.ಈ ಸಂದರ್ಭದಲ್ಲಿ ಸಹಕಾರಿ ಸಂಘಗಳ ಒಕ್ಕೂಟದ ಪ್ರಮುಖರಾದ ಚೋಳರಾಜ್ ರಾಜೇಶ್ ಹರಿಕಾಂತ್ ಗ್ರಾಮ ಗಣಪತಿ ಮೊಗೇರ ಮುಂತಾದವರು ಉಪಸ್ಥಿತರಿದ್ದರು.