ಬೆಂಗಳೂರು:ಅಂತರ್ಜಾತಿ ವಿವಾಹ: ನವದಂಪತಿಗಳ ಕೆಲಸಕ್ಕೆ ಕತ್ತರಿ

Source: manju | By Arshad Koppa | Published on 26th June 2016, 6:46 AM | State News | Incidents |

ಬೆಂಗಳೂರು, ಜೂನ್ ೨೬: ಅಂತರ್ಜಾತಿ ವಿವಾಹವಾದ ದಂಪತಿಯನ್ನು ಉದ್ಯೋಗದಿಂದಲೇ ವಜಾಗೊಳಿಸಿದ್ದನ್ನು ವಿರೋಧಿಸಿ ನಗರದ ಹೊಟೇಲ್ ಉದ್ಯಮದಾರರ ಸಹಕಾರ ಬ್ಯಾಂಕ್ ಎದುರು ಪ್ರಗತಿಪರರು ಧರಣಿ ನಡೆಸಿದ್ದಾರೆ.

ನವದಂಪತಿ ರಾಕೇಶ್-ಉನ್ನತಿಯವರ ಜೊತೆ ಪತ್ರಕರ್ತ ಅಗ್ನಿಶ್ರೀಧರ್, ಪ್ರಗತಿಪರರಾದ ಅನಂತ ನಾಯಕ್, ಇಂಧೂಧರ ಹೊನ್ನಾಪುರ, ಡಾ.ವೆಂಕಟಸ್ವಾಮಿ, ಬಾನಂದೂರು ಕೆಂಪಯ್ಯ, ಕೃಷ್ಣ ಮಾಸಡಿ, ಮಂಜುನಾಥ್ ಅದ್ದೆ, ಶ್ರೀನಿವಾಸ ಕರಿಯಪ್ಪ, ವಿ. ನಾಗರಾಜ್ ಮೊದಲಾದವರು ಹೊಟೇಲ್ ಉದ್ಯಮದಾರರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯನ್ನು ಭೇಟಿಯಾಗಿ ಒತ್ತಾಯಿಸಿದ ಹಿನ್ನೆಲೆಯಲ್ಲಿ  ಬ್ಯಾಂಕ್ ಅಧ್ಯಕ್ಷ ಶ್ರೀಪತಿ ರಾವ್ ಸೋಮವಾರದಿಂದ ಉದ್ಯೋಗಕ್ಕೆ ಹಾಜರಾಗುವಂತೆ ದಂಪತಿಗಳಿಗೆ ಸೂಚಿಸಿದ್ದಾರೆ.


ಚಾಮರಾಜಪೇಟೆಯ ಹೊಟೇಲ್ ಉದ್ಯಮದಾರರ ಸಹಕಾರ ಬ್ಯಾಂಕಿನ ದ್ವಿತೀಯ ದರ್ಜೆ ಸಹಾಯಕಿ ಬ್ರಾಹ್ಮಣ ಸಮುದಾಯದ ಉನ್ನತಿ ಹಾಗೂ ಅದೇ ಬ್ಯಾಂಕ್ ಉದ್ಯೋಗಿ ಮೊಗವೀರರಾದ ರಾಕೇಶ್ ಪ್ರೀತಿಸಿ ಏಳು ತಿಂಗಳ ಹಿಂದೆ ಕಾನೂನುಬದ್ಧ ವಿವಾಹವಾಗಿದ್ದರು. ಇದಕ್ಕೆ ಅವರ ಮನೆಗಳಲ್ಲೂ ವಿರೋಧವಾಗಿತ್ತು. ಮನೆಯವರನ್ನು ಒಲಿಸುವ ಯತ್ನದಲ್ಲಿದ್ದಾಗಲೇ ಬ್ಯಾಂಕ್ ಏಕಾಏಕಿ ಇಬ್ಬರನ್ನೂ ಕಾರಣ ಕೇಳದೇ ನೌಕರಿಯಿಂದ ವಜಾಗೊಳಿಸಿತ್ತು. ಈ ಅನಿರೀಕ್ಷಿತ ಘಟನೆಯಿಂದ ವಿಚಲಿತರಾದ ನವದಂಪತಿ ಹನುಮಂತನಗರ ಪೊಲೀಸರಲ್ಲಿ ರಕ್ಷಣೆಗೆ ಮನವಿ ಮಾಡಿದ್ದು, ಆರಂಭದಲ್ಲಿ ಕೋರಿಕೆಗೆ ಸ್ಪಂದಿಸದ ಪೊಲೀಸರು ಬಳಿಕ ಬೇಡಿಕೆಗೆ ಸ್ಪಂದಿಸಿದ್ದರು.


ರಾಕೇಶ್ ಪತ್ನಿ ಕಸಾಪ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿಯವರ ಸಹೋದರನ ಪುತ್ರಿಯಾಗಿದ್ದರಿಂದ ಬ್ಯಾಂಕ್ ಆಡಳಿತಕ್ಕೆ ಒತ್ತಡ ಹಾಕಿ ಏಕಾಏಕಿ ಉದ್ಯೋಗದಿಂದ ವಜಾಗೊಳಿಸಲಾಗಿತ್ತೆನ್ನಲಾಗಿದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...