ಹೊಸದಿಲ್ಲಿ: ದೇಶಾ ದ್ಯಂತ ಶಾಂತಿಯುತವಾಗಿ ಪ್ರತಿ ಭಟಿಸುತ್ತಿರುವವರ ವಿರುದ್ಧ ಪೊಲೀಸ್ ಪಡೆಗಳ ಅತಿಯಾದ ಬಳಕೆ ಹಾಗೂ ಅಂತರ್ರಾಷ್ಟ್ರೀಯ ಮಾನವ ಹಕ್ಕು, ಮಾನದಂಡಗಳ ಉಲ್ಲಂಘನೆಗೆ ಅಂತ್ಯ ಹಾಡುವಂತೆ ಆಮೈಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಭಾರತ ಸರಕಾರವನ್ನು ಆಗ್ರಹಿಸಿದೆ.
'ಟೈಮ್ಸ್ ನೌ' ಟಿ.ವಿ.ಯ ಚರ್ಚಾ ಕಾರ್ಯಕ್ರಮದ ಸಂದರ್ಭ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತು ಗೊಂಡ ನೂಪುರ್ ಶರ್ಮಾ ಹಾಗೂ ವಜಾಗೊಂಡ ನವೀನ್ ಜಿಂದಾಲ್ ಅವರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಭುಗಿ ಲೆದ್ದ ಹಿನ್ನೆಲೆಯಲ್ಲಿ ಆಮೈಸಿ ಇಂಟರ್ನ್ಯಾಷನಲ್ನ ಈ ಹೇಳಿಕೆ ಹೊರಬಿದ್ದಿದೆ. ಇಬ್ಬರು ಬಿಜೆಪಿ ನಾಯಕರನ್ನು ಬಂಧಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಗೆ ಉತ್ತರಪ್ರದೇಶ, ಜಾರ್ಖಂಡ್, ಪಶ್ಚಿಮಬಂಗಾಳ, ಕರ್ನಾಟಕ, ಮಹಾರಾಷ್ಟ್ರ, ಜಮ್ಮು ಹಾಗೂ ಕಾಶ್ಮೀರ, ತೆಲಂಗಾಣದಂತಹ ಭಾರತದ ಹಲವು ರಾಜ್ಯಗಳು ಸಾಕ್ಷಿಯಾಗಿವೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸ ಲಾಗಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ನೂರಾರು ಜನರನ್ನು ಬಂಧಿಸಲಾಗಿದೆ. ಅಲ್ಲದೆ, ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಕ್ರಮ ಕೈಗೊಂಡ ಪರಿಣಾಮ ಹಲವರು ಗಾಯಗೊಂಡಿದ್ದಾರೆ ಹಾಗೂ ಕೆಲವರು ಸಾವನ್ನಪ್ಪಿದ್ದಾರೆ ಎಂದು ಆಮ್ಮೆಸ್ಟಿ ಇಂಟರ್ನ್ಯಾಷನಲ್ ತಿಳಿಸಿದೆ.
ಪೊಲೀಸ್ ಪಡೆಯನ್ನು ಅತಿಯಾಗಿ ಬಳಸುವುದಕ್ಕೆ ಅಂತ್ಯ ಹಾಡುವಂತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ತಮ್ಮ ಹಕ್ಕನ್ನು ಚಲಾಯಿಸುತ್ತಿರುವ, ಶಾಂತಿಯುತವಾಗಿ ಸಭೆ ಸೇರಿದ ಸಂದರ್ಭ ಬಂಧಿತರಾಗಿರುವವರನ್ನು ಕೂಡಲೇ ಹಾಗೂ ನಿತ್ಯರ್ತವಾಗಿ ಬಿಡುಗಡೆ ಮಾಡುವಂತೆ ಆಮೈಸಿ ತನ್ನ ಹೇಳಿಕೆಯಲ್ಲಿ ಆಗ್ರಹಿಸಿದೆ.
ಶಾಂತಿಯುತವಾಗಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ತಮ್ಮ ಹಕ್ಕನ್ನು ಚಲಾಯಿಸುತ್ತಿರುವ ಮುಸ್ಲಿಮರನ್ನು ಕೇಂದ್ರ ಸರಕಾರ ಆಯ್ಕೆ ಮಾಡಿ ಹಾಗೂ ದುರದ್ದೇಶ' ದಿಂದ ಗುರಿ ಮಾಡುತ್ತಿದೆ ಎಂದು ಆಮ್ಮೆಸ್ಟಿ ಇಂಟರ್ನ್ಯಾಶನಲ್ ಇಂಡಿಯಾ ಮಂಡಳಿಯ ಅಧ್ಯಕ್ಷ ಆಕಾರ್ ಪಟೇಲ್ ಅವರ ಹೇಳಿಕೆಯನ್ನು ಪತ್ರಿಕಾ ಹೇಳಿಕೆ ಉಲ್ಲೇಖಿಸಿದೆ.
ಭಾರತ ಸರಕಾರ ಪೊಲೀಸ್ ಪಡೆಯನ್ನು ಅತಿಯಾಗಿ ಬಳಸಿ ಪ್ರತಿಭಟನಾಕಾರರಿಗೆ ಥಳಿಸುವುದು, ನಿರಂಕುಶವಾಗಿ ಬಂಧಿಸುವುದು ಹಾಗೂ ದಂಡನೆಯಾಗಿ ಮನೆಗಳನ್ನು ಧ್ವಂಸಗೊಳಿಸುವುದು ಅಂತರ್ ರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಹಾಗೂ ಮಾನದಂಡಗಳ ಅಡಿಯಲ್ಲಿ ಭಾರತದ ಬದ್ಧತೆಯ ಸಂಪೂರ್ಣ ಉಲ್ಲಂಘನೆ ಎಂದು ಅದು ಹೇಳಿದ.
ಪಟೇಲ್ ಅವರು ಆಮ್ಲಸ್ಟಿ ಇಂಡಿಯಾದ ಭಾರತೀಯ ಚಾಪ್ಟನ ಮಾಜಿ ಕಾರ್ಯಕಾರಿ ನಿರ್ದೇಶಕ, ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲ೦ಘನೆಯ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಆಮ ಇಂಡಿಯಾದ ಸೊತ್ತನ್ನು ಸ್ತಂಭನಗೊಳಿಸಿದ ಬಳಿಕ ಅದು 2020ರಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ನಿಲ್ಲಿಸಿತ್ತು.