ಮಂಡ್ಯ: ಸಾಲಬಾಧೆ ತಾಳಲಾರದೇ ರೈತ ದಂಪತಿ ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮಂಜುನಾಥ್ (58) ಹಾಗೂ ಇಂದ್ರಾಣಿ (50) ಮೃತ ದುರ್ದೈವಿಗಳು. ಮೃತರು ಕೃಷಿ ಕೂಲಿ ಮಾಡಲು ಚಾಮರಾಜನಗರ ಜಿಲ್ಲೆಯ ಬಸವನಹಳ್ಳಿಯಿಂದ ಕೆ. ಶೆಟ್ಟಿಹಳ್ಳಿಗೆ ಬಂದು ನೆಲೆಸಿದ್ದರು.
ಕೋಳಿ ಫಾರಂ ಸೇರಿದಂತೆ ಗ್ರಾಮದಲ್ಲಿ ಹಲವು ಕೃಷಿ ಚಟುವಟಿಕೆಗಳಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿ, ಬೈಕ್ ಸಾಲ ಸೇರಿದಂತೆ ವೈಯಕ್ತಿಕ ಸಾಲ ಮಾಡಿತ್ತು. ಈ ದಂಪತಿ ದಿನಕ್ಕೆ 500 ರೂ. ಬಡ್ಡಿ ಪಾವತಿಸುತ್ತಿತ್ತು ಹಾಗೂ ಮನೆಯಲ್ಲಿದ್ದ ವಸ್ತುಗಳನ್ನು ಒತ್ತೆ ಇಟ್ಟಿದ್ದರು ಎನ್ನಲಾಗಿದೆ.
ಈ ಹಿನ್ನೆಲೆ ಬೆಸತ್ತ ದಂಪತಿ ಗುರುವಾರ ಬೆಳಗ್ಗೆ ಮನೆಯಲ್ಲಿಯೇ ನೇಣು ಬೀಗಿದುಕೊಂಡು ಮೃತಪಟ್ಟಿದೆ. ಕೆ.ಎಂ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.