ಭಟ್ಕಳ: ಸಮುದ್ರದಲ್ಲಿ ಈಜಾಡುತ್ತಿದ್ದಾಗ ನೀರುಪಾಲಾಗುತ್ತಿದ್ದ ವಿದ್ಯಾರ್ಥಿಗಳನ್ನು ಜೀವರಕ್ಷಕ ಸಿಬ್ಬಂಧಿಗಳು ರಕ್ಷಿಸಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ ವಿಶ್ವವಿಖ್ಯಾತ ಮುರುಡೇಶ್ವರ ಸಮುದ್ರ ಕಿನಾರೆಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೊಸಕೋಟೆ ಕೆಂಚಾಂಬ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದು ಶುಕ್ರವಾರ ಸಂಜೆ ಸಮುದ್ರದಲ್ಲಿ ಈಜುತ್ತಿದ್ದ ಪ್ರಜ್ವಲ್ ಸುರೇಶ (17), ಪ್ರಜ್ವಲ್ ಶ್ವೇನಾ(16) ಹಾಗೂ ಉಲ್ಲಾಸ್ ಶ್ರೀನಿವಾಸ(16) ಎಂಬ ವಿದ್ಯಾರ್ಥಿಗಳು ಸಮುದ್ರಪಾಲಾಗುತ್ತಿರುವುದನ್ನು ಕಂಡ ಲೈಫ್ ಗಾರ್ಡ್ ಸಿಬ್ಬಂಧಿಗಳಾದ ಶಂಕರ್ ದೇವಾಡಿಗ ಹಾಗೂ ಶಶಿಧರ್ ನಾಯ್ಕ ಎಂಬುವವರು ತಮ್ಮ ಜೀವದ ಹಂಗು ತೊರೆದು ಸಮುದ್ರಕ್ಕಿಳಿದು ಮೂವರನ್ನು ರಕ್ಷಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಲೈಫ್ ಗಾರ್ಡ್ ಶಶಿಧರ್ ಮೂವರು ವಿದ್ಯಾರ್ಥಿಗಳು ಸಮುದ್ರದಲೆಗೆ ಸಿಲುಕಿಕೊಂಡಿದ್ದರು. ಅಲ್ಲದೆ ಅವರು ಸಮುದ್ರದ ಆಳಕ್ಕೆ ಹೋಗಿದ್ದರು. ದೇವರ ದಯದಿಂದ ನಾವು ಅವರನ್ನು ರಕ್ಷಿಸಿದ್ದೇವೆ ಎಂದು ತಿಳಿಸಿದ್ದಾರೆ.