ಶ್ರೀನಿವಾಸಪುರ ತಾಲ್ಲೂಕು ಮಟ್ಟದ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಶ್ರೀನಿವಾಸಪುರ: ಉತ್ತಮ ಬೋಧನೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ರತ್ನಯ್ಯ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ ಶನಿವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಪ್ರತಿಭೆ ಬೆಳೆಯಲು ಮತ್ತು ಬೆಳಗಲು ಪೂರಕವಾದ ವಾತಾವರಣ ನಿರ್ಮಾಣ ಮಾಡಿದಲ್ಲಿ ಪ್ರತಿಭೆ ಗರಿಗೆದರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿಕ್ಷಕ ಹಾಗೂ ಶಿಲ್ಪಿಯ ನಡುವೆ ಸಾಮ್ಯತೆ ಇದೆ. ಶಿಲ್ಪಿ ಶಿಲೆಯನ್ನು ಶಿಲ್ಪನ್ನಾಗಿ ಮಾಡುತ್ತಾನೆ. ಶಿಕ್ಷಕ ಕಲ್ಲಿನಂಥ ಮಗುವನ್ನು ತಿದ್ದಿ ಸಮಾಜಕ್ಕೆ ನೀಡುತ್ತಾನೆ. ಈ ಕೆಲಸ ಸಾಂಘಿಕವಾಗಿ ನಡೆಯಬೇಕು. ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಬೇಕು ಎಂದು ಹೇಳಿದರು.
ಪ್ರತಿಭಾ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ರಾಜಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಪ್ರತಿಭೆಯನ್ನು ಗುರುತಿಸಿ ಪುರಸ್ಕಾರ ನೀಡಬೇಕು. ಅವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಅವರಲ್ಲಿನ ಪ್ರತಿಭೆ ಹೊರ ಬರಲು ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 22 ಮಂದಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪರಿಷತ್ತಿನ ರಾಜ್ಯಾಧ್ಯಕ್ಷ ಪಿ.ಮಹೇಶ್, ಪ್ರಧಾನ ಕಾರ್ಯದರ್ಶಿ ಶಿವಾರೆಡ್ಡಿ, ಇಸಿಒ ಆರ್.ಬಿ.ಸುಬ್ರಮಣಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್, ಖಜಾಂಚಿ ಜಿ.ಎನ್.ಚೆನ್ನಪ್ಪ, ಕಾರ್ಯದರ್ಶಿ ಟಿ.ವಿ.ನಟರಾಜ್, ನಿರ್ದೇಶಕಿ ಮಮತಾರಾಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎನ್.ಗೋವಿಂದರೆಡ್ಡಿ, ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ, ಪರಿಷತ್ತಿನ ನಿರ್ದೇಶಕಿ ಬಿ.ವಿ.ಶೋಭಾ, ಮುಖಂಡರಾದ ಎಸ್.ಆರ್.ಹೀರೇಗೌಡ, ಎಸ್.ಸತೀಶ್ ಕುಮಾರ್, ಎಸ್.ವಿ.ಮುನಿಸ್ವಾಮಿ ರೆಡ್ಡಿ, ಡಿ.ಆರ್.ಶ್ರೀರಾಮೇಗೌಡ, ಶ್ರೀನಿವಾಸರೆಡ್ಡಿ, ಎಂ.ವಿ.ಜಯದೇವ್, ಆರ್.ಕಾಳಾಚಾರಿ, ಬೈರೇಗೌಡ, ಬಿ.ಎನ್.ಮಂಜುನಾಥ್, ಆರ್.ರವಿಕುಮಾರ್,