ಕೋಲಾರ, ಏ.29: ಸ್ವಚ್ಚತೆಯ ಪಾಠ ಮನೆಯಿಂದ ಆರಂಭವಾದಾಗ ಮಾತ್ರ ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಕೊಳಗೇರಿಗಳು ಸುಂದರಗೊಳ್ಳುತ್ತವೆ. ಸ್ವಚ್ಚಂದ ವಾತಾವರಣ ಸೃಷ್ಠಿಯಾಗುತ್ತದೆ ಎಂದು ಕನ್ನಡ ಜಾನಪದ ಕಲಾ ಸಂಘದ ಅಧ್ಯಕ್ಷ ಜನ್ನಘಟ್ಟ ಕೃಷ್ಣಮೂರ್ತಿ ತಿಳಿಸಿದರು.
ಅವರು ನಗರದ ಎಸ್.ಎಸ್.ಮಕಾನ್ ಮತ್ತು ಶಾಹೀದ್ ನಗರ, ವಿಭೂತಿಪುರ, ಶಾಂತಿನಗರ, ಚಾಮುಂಡೇಶ್ವರಿ ನಗರ ಇಲ್ಲಿ ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಚಿಂತಾಮಣ ಯ ರಿವಾಡ್ರ್ಸ್ ಸಾಮಾಜಿಕ ಸೇವಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕೊಳಚೆ ಸುಧಾರಣೆ ಯೋಜನೆಯ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತಿ ಬಡಾವಣೆಯ ಜನರು ತಮ್ಮ ಕೊಳಚೆ ಪ್ರದೇಶಗಳನ್ನು ಸ್ವಚ್ಚಗೊಳಿಸಲು ಶ್ರಮದಾನದಂತಹ ಕಾರ್ಯಗಳನ್ನು ಕೈಗೊಳ್ಳಬೇಕು. ಇದಕ್ಕೆ ಸರ್ಕಾರ ಸಂಘ ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದ್ದು, ವಿದ್ಯಾರ್ಥಿ ಹಾದಿಯಾಗಿ ವಯೋವೃದ್ಧರವರೆಗೆ ಸ್ವಚ್ಚತೆಯ ಅರಿವನ್ನು ಹೊಂದಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಆಗುತ್ತದೆ ಎಂದರು.
ರಿವಾರ್ಡ್ ಸಾಮಾಜಿಕ ಸೇವಾ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ನಾಗೇಂದ್ರ ಕುಮಾರ್ ಮಾತನಾಡಿ ಗ್ರಾಮೀಣ ಹಾಗೂ ಕೊಳಗೇರಿ ಪ್ರದೇಶಗಳಲ್ಲಿ ಬಡತನ, ನಿರುದ್ಯೋಗ ಮತ್ತು ಹೆಚ್ಚಾಗಿ ಅನಕ್ಷರತೆ ತಾಂಡವಾಡುತ್ತಿರುವುದರಿಂದ ಇಲ್ಲಿ ಬಾಲ್ಯವಿವಾಹ, ಮೂಡನಂಬಿಕೆಯಂತಹ ಪದ್ದತಿಗಳು ಇನ್ನೂ ಜೀವಂತವಾಗಿ ಇವುಗಳನ್ನು ಹಿಮ್ಮೆಟ್ಟಿಸಲು ಪ್ರತಿಯೊಬ್ಬರು ವಿದ್ಯಾವಂತರಾಗಬೇಕೆಂದರು.
ಈಗಾಗಲೇ ಜಿಲ್ಲೆಯಾದ್ಯಂತ ಅನೇಕ ಕೊಳಗೇರಿ ಪ್ರದೇಶಗಳನ್ನು ಗುರ್ತಿಸಿ ಸರ್ಕಾರಿ ಸೌಲಭ್ಯಗಳ ಬಗ್ಗೆ ಅಲ್ಲಿನ ಜನರ ಮನಸ್ಸಿಗೆ ಮುಟ್ಟಿಸಲು ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತದೆ. ಈ ದಿಸೆಯಲ್ಲಿ ಕೋಲಾರ ನಗರವನ್ನು ಸ್ವಚ್ಚತೆ ಮಾಡುವಲ್ಲಿ ಸಂಸ್ಥೆಯು ಪ್ರಾಮಾಣ ಕ ಪ್ರಯತ್ನ ಮಾಡುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಮಂಜುಳ ಮಾತನಾಡಿ ಕಸವನ್ನು ವಿಂಗಡಿಸಿ ನಗರಸಭೆ ವ್ಯಾಪ್ತಿಯಲ್ಲಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದಕ್ಕಾಗಿ ನಿರ್ಮಿಸಿರುವ ತಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ಹಾಕುವುದರಿಂದ ಜನ ಸಮಾನ್ಯರಿಗೆ ಯಾವುದೇ ಅನಾರೋಗ್ಯ ಉಂಟಾಗುವುದಿಲ್ಲ ಎಂದರು.
ಸೀಡ್ ಸ್ವಯಂ ಸೇವಾ ಸಂಸ್ಥೆಯ ಯೋಜನಾ ನಿರ್ದೇಶಕರಾದ ಮಲ್ಲಮ್ಮ ಮಾತನಾಡಿ ಹೆಣ್ಣುಮಕ್ಕಳಿಗೆ ಸ್ವಚ್ಚತೆ ಮತ್ತು ಆರೋಗ್ಯ ಬಹಳ ಮುಖ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಅರಿವಿನ ಕೊರತೆಯಿಂದಾಗಿ ಸರ್ಕಾರಿ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಈಗ ಸ್ವಯಂ ಸೇವಾ ಸಂಸ್ಥೆಗಳು ಜಾಗೃತಿ ಮೂಡಿಸುವ ಮೂಲಕ ಮಹಿಳೆಯರ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡಬೇಕೆಂದರು.
ಹೆಣ್ಣುಮಕ್ಕಳಿಗಾಗಿ ಸರ್ಕಾರ ನೀಡುತ್ತಿರುವ ಅನೇಕ ಕರಕುಷಲ, ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಸದೃಢರಾಗಿ ಆರ್ಥಿಕ ಬೆಳವಣ ಗೆಯಲ್ಲಿ ಮುಂದೆ ಬಂದರೆ ಸಾಮಾಜಿಕ ಗೌರವ ಮತ್ತು ಸಮಾಜದ ಬೆಳವಣ ಗೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಮಂಜುಳಾ, ಅನಿತ, ಲಲಿತ, ಅಂಗನವಾಡಿ ಕಾರ್ಯಕರ್ತೆಯರಾದ ನಿಖತ್ಸಬಾ, ತನ್ವೀರ್ಪಾತಿಮಾ, ಲಕ್ಷ್ಮೀಬಾಯಿ, ಉಮೇಸ್ಲಂ ಮತ್ತಿತರರು ಹಾಜರಿದ್ದರು.