ಶ್ರೀನಿವಾಸಪುರ: ಕೋಲಾರದ ಎ ಸಿ ಬಿ ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಶ್ರೀನಿವಾಸಪುರ ತಾಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎ ಇ ಇ ಅಪ್ಪಿರೆಡ್ಡಿ ಮನೆ ಮೇಲೆ ಶುಕ್ರವಾರ ಬೆಳ್ಳಂಬೆಳಿಗ ದಾಳಿಮಾಡಿರುತ್ತಾರೆ.
ಕೋಲಾರದ ಎಸಿಬಿ ಡಿ ವೈ ಎಸ್ ಪಿ ಮೋಹನ್ ಮತ್ತು ಸಿ ಇ ತಿಪ್ಪೆಸ್ವಾಮಿ ನೇತೃತ್ವದ ತಂಡ ಅಪ್ಪಿರೆಡ್ಡಿ ವಾಸವಿರುವ ಶ್ರೀನಿವಾಸಪುರ ಪಟ್ಟಣದ ವೆಂಕಟೇಶ್ವರ ಬಡಾವಣೆಗೆ ಸಿಇಎ ಶಾಲೆ ಹಿಂಬಾಗದಲ್ಲಿರುವ ಮನೆ ಹಾಗು ಅವರ ಸ್ವಂತ ಊರಾದ ಶ್ರೀನಿವಾಸಪುರ ಹೋದಲಿ ಗ್ರಾಮದಲ್ಲಿರುವಂತ ಮನೆಗಳು ಸುಧಾ ಕೋಳಿ ಫಾರಂಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ.ಅವರ ಕುಟುಂಬಕ್ಕೆ ಸಂಬಂದಿಸಿದ ಹೊಲ ಗದ್ದೆ ಮಾವಿನ ತೋಟಗಳಿಗೆ ದಾಖಲೆಗಳನ್ನು ಪರಶಿಲಿಸುತ್ತಿರುವುದಾಗಿ ಹೇಳಲಾಗಿದೆ.
ಮುಂಜಾನೆ ಸುಮಾರು 6 ಗಂಟೆ ಹೊತ್ತಿಗೆ ಅಧಿಕಾರಿಗಳು ದಾಳಿ ಮಾಡಿದ್ದು ಕುಟುಂಬದ ಸದಸ್ಯರನ್ನು ಹೋರಗೆ ಕಳುಹಿಸದೆ ಮನೆಯಲ್ಲಿ ಇರಿಸಿಕೊಂಡು ಶೋಧ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ.
ಹೊದಲಿ ಗ್ರಾಮದವರಾದ ಅಪ್ಪಿರೆಡ್ಡಿ ಮೂಲತಃ ಕೃಷಿಕ ಕುಟುಂಬದವರು ಸುಮಾರು ವರ್ಷಗಳ ಕಾಲ ಲೋಕೋಪಯೋಗಿ ಇಲಾಖೆಯಲ್ಲಿ ತಾತ್ಕಾಲಿಕ ಸೇವೆ ಸಲ್ಲಿಸಿ ನಂತರ ಅವರು ಖಾಯಂ ಸೇವೆಗೆ ಮಾರ್ಪಟ್ಟಿದ್ದರು ನಂತರ ಕೋಲಾರ ಮುಳಬಾಗಿಲು ಮುಂತಾದ ಕಡೆ ಕಾರ್ಯನಿರ್ವಹಿಸಿದ್ದರು ಈಗ ಶ್ರೀನಿವಾಸಪುರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ(ವಾಟರ್ ಬೋರ್ಡ್) ಸಹಾಯಕ ಕಾರ್ಯಪಾಲಕ ಅಭಿಯಂತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀನಿವಾಸಪುರ ತಾಲೂಕು ಹೋದಲಿ ಗ್ರಾಮದವರಾದ ಅಪ್ಪಿರೆಡ್ಡಿ ಕೃಷಿಕ ಕುಟುಂಬದಿಂದ ಬಂದವರಾಗಿದ್ದು, ಈಗಲೂ ಅವರು ನಾಲ್ಕು ಜನ ಸಹೋದರರು ಹೊದಲಿ ಗ್ರಾಮದಲ್ಲಿ ವಾಸವಾಗಿದ್ದಾರೆ.