ಶಿಡ್ಲಘಟ್ಟ,ಜನವರಿ18: ಎಸ್.ಎನ್.ಕ್ರಿಯಾ ಟ್ರಸ್ಟ್ ಹಾಗೂ ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯ ಸಹಯೋಗದಲ್ಲಿ ತಾಲೂಕಿನ ಸಾದಲಿ ಗ್ರಾಮದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗಾಗಿ ಆಯ್ಕೆಯಾದ ಗ್ರಾಮಸ್ಥರನ್ನು ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಗೆ ಕಳುಹಿಸಲಾಯಿತು.
ಕ್ಷೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ-ಕೂಲಿ ಕಾರ್ಮಿಕರಿಗಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಎಲ್ಲಾ ವಿಧವಾದ ಖಾಯಿಲೆಗಳಿಗೆ ತಪಾಸಣೆ ನಡೆಸಿದರಲ್ಲದೆ ಶಸ್ತ್ರಚಿಕಿತ್ಸೆಗಾಗಿ ಆಯ್ಕೆಯಾದ 130 ಮಂದಿಯನ್ನು ಆಸ್ಪತ್ರೆಯ ಬಸ್ಸಿನ ಮೂಲಕ ಗರ್ಭಕೋಶ,ಹೊಟ್ಟೆಯಲ್ಲಿ ಗಡ್ಡೆ,ಮಧುಮೇಹ,ನೇತ್ರ ಶಸ್ತ್ರಚಿಕಿತ್ಸೆ ಸೇರಿದಂತೆ ಇನ್ನಿತರೆ ಖಾಯಿಲೆಗಳಲ್ಲಿ ನರಳುತ್ತಿರುವ ಬಡಜನರ ನೆರವಿಗೆ ಆನೂರಿನ ಎಸ್.ಎನ್.ಕ್ರಿಯಾ ಟ್ರಸ್ಟ್ ಧಾವಿಸಿದೆ ಅರಿವಿನ ಕೊರತೆ ಹಾಗೂ ಆರ್ಥಿಕ ಮುಗ್ಗಟ್ಟನಿಂದ ತೊಂದರೆಯನ್ನು ಅನುಭವಿಸುತ್ತಿದ್ದವರು ಕೊನೆಗೂ ಸಮಸ್ಯೆಯಿಂದ ಮುಕ್ತಿ ಕಾಣುವ ಸಂಭ್ರಮದಲ್ಲಿದ್ದನ್ನು ಕಂಡುಬಂದಿತ್ತು.
ಈ ಸಂದರ್ಭದಲ್ಲಿ ಆನೂರು ಎಸ್.ಎನ್.ಕ್ರಿಯಾ ಟ್ರಸ್ಟ್ನ ಕಾರ್ಯದರ್ಶಿ ವಿಶ್ವನಾಥ್,ಆನೂರು ದೇವರಾಜ್,ಟಿಪ್ಪುಸೆಕ್ಯೂಲರ್ ಸೇನೆಯ ಅಧ್ಯಕ್ಷ ಮೌಲಾ,ಇಂತಿಯಝ್,ಸಮೀರ್,ಶರತ್,ಮೋಹನ್,ಬೂದಾಳ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.