ರಾಯಲ್ಪಾಡು ಮಾ. ೨೫ : ಶಿಸ್ತು,ರಾಷ್ಟ್ರಾಭಿಮಾನ,ಮಾನವೀಯತೆ, ಸಮಾಜಸೇವೆ,ದೇಶಭಕ್ತಿ , ವಿದ್ಯಾರ್ಥಿಗಳು ತಮ್ಮ ಜೀವನದ ಸರ್ವತೋತಮುಖ ಅಭಿವೃದ್ದಿಗಾಗಿ ಶ್ರಮಿಸುವ ಮುಂತಾದ ಗುಣಗಳನ್ನು ಬೆಳಸಿಕೊಳ್ಳಲು ಶಾಲೆಯ ಮುಖ್ಯ ಶಿಕ್ಷಕ ಜಿ.ಸಿ.ಶಂಕರರೆಡ್ಡಿ ತಿಳಿಸಿದರು
ರಾಯಲ್ಪಾಡಿನ ಮಾದರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ನಡೆದ ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೂಂಡು ಮಾತನಾಡಿದರು .
ಸರ್ಕಾರವು ಗ್ರಾಮೀಣ ಬಾಗದ ಮಕ್ಕಳಿಗೆ ಹೆಚ್ಚಿನ ವಿದ್ಯಾಬ್ಯಾಸವನ್ನು ಪಡೆದುಕೊಳ್ಳುಲು ಉತ್ತೇಜನ ನೀಡುವ ಸಲುವಾಗಿ ಆನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತಾ ಬರುತ್ತಿದ್ದು ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳು ಸರ್ಕಾರದಿಂದ ವಿದ್ಯಾಬ್ಯಾಸಕ್ಕಾಗಿ ಬರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣದೊಂದಿಗೆ ಸಮಾಜಕ್ಕೆ ಮಾದರಿಯಾಗುವಂತೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್.ಸಿ.ಶ್ರೀನಿವಾಸ್, ಮಂಜೇಶ್, ಭಾರತಿ, ಕನಕಮ್ಮ, ಸರಸ್ವತಮ್ಮ, ಚಂದ್ರ, ಸರಸ್ವತಮ್ಮ, ಸರೋಜಮ್ಮ, ಸುನಿತ, ಕನಕಮ್ಮ ಇದ್ದರು.