ಮುಂಡಗೋಡ : ತಾಲೂಕಿನ ಗಡಿಭಾಗವಾದ ಕುರ್ಲಿ ಅರಣ್ಯ ಪ್ರದೇಶದ ಕರಕಲಜಡ್ಡಿ-ಬಾಳೆಕೊಪ್ಪದ ಅರಣ್ಯದಲ್ಲಿ ಹೆಣ್ಣಾನೆಯೊಂದು ವಿದ್ಯುತ್ ಅವಘಡದಿಂದ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ಇಂದು ಈ ಕುರಿತು ಮಾಹಿತಿ ಲಭಿಸಿದ್ದು ಆನೆ ಮೃತಪಟ್ಟು 6-7 ದಿನಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಆನೆ ಮೃತಪಡಲು ಕಾಡಿನಲ್ಲಿ ಹಾದು ಹೋಗಿರುವ ಹೈಯ್ಟೆನ್ಶನ್ ವಿದ್ಯುತ್ ತಂತಿಯೇ ಕಾರಣವೆಂದು ಹೇಳಲಾಗಿದೆ.. ಕಾಡಿನಲ್ಲಿ ಬೆಳೆದ ಎತ್ತರದ ಮರಗಿಡಗಳ ಟೊಂಗೆಗಳು ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಪ್ರಸರಣವಾಗಿ ಆನೆ ಸತ್ತಿರಬಹುದು ಎಂದು ಸೆಕ್ಷನ್ ಫಾರಸ್ಠರ ಪತ್ರಿಕೆಗೆ ತಿಳಿಸಿದ್ದಾರೆ. ಆನೆ ಮರೋತ್ತರ ಪರಿಕ್ಷೆಯಲ್ಲಿ ವಿದ್ಯುತ್ ತಾಗಿರುವುದರಿಂದ ಆನೆ ಸಾವಿಗೆ ಕಾರಣವೆಂದು ಹೇಳಲಾಗಿದೆ. ಆನೆಯ ಅಂತ್ಯಸಂಸ್ಕಾರ ಇಂದು ಮಾಡಿದ್ದು ಸ್ಥಳದಲ್ಲಿ ಉಪವಿಭಾಗದ ಎಸಿಎಫ್ ಜಿ.ಆರ್. ಶಶಿಧರ, ಆರ್.ಎಫ್.ಒ ಮಹೇಶ ಗೌಡ, ಸೆಕ್ಷನ್ ಫಾರೆಸ್ಟರ ಡಿ.ಎಸ್.ಆಗೇರ ಮುಂತಾದವರು ಇದ್ದರು ಎಂದು ಅರಣ್ಯ ಇಲಾಖೆಯಿಂದ ತಿಳಿದು ಬಂದಿದೆ
ಗ್ರಾಮಸ್ಥರು ಹೇಳಿಕೆ : ಆನೆ ಸತ್ತಿರುವುದು ವಿದ್ಯುತ್ ತಂತಿಗಳು ಮರಗಿಡಗಳ ಕೊಂಬೆಗೆ ತಾಗಿ ಅಲ್ಲಿಗೆ ಬಂದಿರುವ ಆನೆ ಇದಕ್ಕೆ ಬಲಿಯಾಗಿದೆ. ಅರಣ್ಯ ಇಲಾಖೆ ಇಂತಹ ಅವಘಡಗಳನ್ನು ತಪ್ಪಿಸಲು ವಿದ್ಯುತ್ ತಂತಿಗೆ ತಾಗಿರುವ ಕೊಂಬೆಗಳನ್ನು ತೆರವುಗೊಳಿಸಬೇಕು. ಅರಣ್ಯ ಇಲಾಖೆಯವರು ಇಂತಹವುಗಳನ್ನು ನಿರ್ಲಕ್ಷಿಸಬಾರದು